ಸುದ್ದಿಮೂಲ ವಾರ್ತೆ ರಾಯಚೂರು, ಜ.08:
ರಾಷ್ಟ್ರೀಥಯ ಯುವ ದಿನದ ಅಂಗವಾಗಿ ಹಾಗೂ ರಾಯಚೂರು ಉತ್ಸವದ ಮಾಹಿತಿ ಜನರಿಗೆ ತಲುಪಿಸುವ ಸಲುವಾಗಿ ಇಲ್ಲಿನ ರಾಯಚೂರು ಮಹಾನಗರ ಪಾಲಿಕೆಯಿಂದ ನಮ್ಮ ಸಂಕಲ್ಪ-ಸುಂದರ, ಹಸಿರು ನಗರ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛ ನಗರಕ್ಕಾಾಗಿ ಓಟ ಎಂಬ ಮ್ಯಾಾರಥಾನ್ ಕಾರ್ಯಕ್ರಮ ಜನವರಿ 12ರಂದು ಆಯೋಜಿಸಲಾಗಿದೆ.
ನಗರ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಿಕೊಂಡ ಮ್ಯಾಾರಾಥಾನ್ ಓಟವು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಿಂದ ಬೆಳಗ್ಗೆೆ 7 ಗಂಟೆಗೆ ಆರಂಭವಾಗಿ ಬಸವೇಶ್ವರ ವೃತ್ತ, ಜಿಲ್ಲಾಧಿಕಾರಿಗಳ ನಿವಾಸ, ಮಂತ್ರಾಾಲಯ ಕೆೆ, ಕೃಷಿ ವಿಶ್ವವಿದ್ಯಾಾಲಯ ಗೇಟ್-2ರ ಮಾರ್ಗವಾಗಿ ಸಂಚರಿಸಿ ಮತ್ತೆೆ ಮಹಾತ್ಮ ಗಾಂಧಿ ಕ್ರೀೆಡಾಂಗಣದಲ್ಲಿ ಸಮಾರೋಪಗೊಳ್ಳಲಿದೆ.
ಮ್ಯಾಾರಥಾನ್ ಓಟದ ಮೂಲಕ ಸ್ವಚ್ಛತೆಯಲ್ಲಿ ನಾಗರಿಕರ ಪಾತ್ರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯತೆ, ಪರಿಸರ ಕಾಳಜಿ, ನಗರ ಸೌಂದರ್ಯ ಹೆಚ್ಚಿಿಸುವುದು ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಕುರಿತು ಜನಜಾಗೃತಿ ಮೂಡಿಸಲಾಗುತ್ತದೆ. ಹಾಗೂ ಪಾಲ್ಗೊೊಂಡ ಅಭ್ಯರ್ಥಿಗಳಿಗೆ ಇ-ಸರ್ಟಿಫಿಕೇಟ್, ಪ್ರಥಮ ರೂ.5000, ದ್ವಿಿತೀಯ ರೂ.3500 ಮತ್ತು ತೃತೀಯ ರೂ.2500 ಬಹುಮಾನ ನೀಡಲಾಗುವುದು.
ನಗರದ ಶಾಲಾ-ಕಾಲೇಜು ವಿದ್ಯಾಾರ್ಥಿಗಳು, ಸಂಘ-ಸಅಸ್ಥೆೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕ್ರೀೆಡಾಪಟುಗಳು ಸೇರಿದಂತೆ ಇಡೀ ನಗರದ ಜನತೆ ಈ ಮ್ಯಾಾರಥಾನ್ನಲ್ಲಿ ಪಾಲ್ಗೊೊಂಡು ಕಾರ್ಯಕ್ರಮ ಯಶಸ್ವಿಿಗೊಳಿಸಬೇಕು. ಮ್ಯಾಾರಥಾನ್ನಲ್ಲಿ ಭಾಗವಹಿಸಲು ಕ್ಯೂ.ಆರ್.ಕೋಡ್ ಸ್ಕ್ಯಾಾನ್ ಅಥವಾ ವೆಬ್ಸೈಟ್ ವಿಳಾಸ : ಠಿಠಿ://್ಛಟ್ಟಞ.ಜ್ಝಛಿ/ಟ್ಜ58್ಛಆಇಈಇಒಅ17ನಲ್ಲಿ ಮಾಡಿ ಇಂದೇ ನೋಂದಣಿ ಮಾಡಿಕೊಳ್ಳಬಹುದಾಗಿದೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

