ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.25:
ಜಿಲ್ಲೆಯ ಎಲ್ಲಾ ಗ್ರಾಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿ ಪ್ರಮಾಣ ಹೆಚ್ಚಿಿಸುವ ಸಲುವಾಗಿ ಡಿ.24 ರಂದು ಬೆಳಿಗ್ಗೆೆ 6 ಗಂಟೆ ಯಿಂದ ಸಂಜೆ 7.00 ರವರೆಗೆ 2 ಕೋಟಿ ತೆರಿಗೆ ಸಂಗ್ರಹಿಸುವ ಗುರಿಯೊಂದಿಗೆ ವಿಶೇಷ ತೆರಿಗೆ ವಸೂಲಾತಿ ಅಭಿಯಾನವನ್ನು ಹಮ್ಮಿಿಕೊಳ್ಳಲಾಗಿತ್ತು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಮ್ ಅಲಿ ಷಾ ತಿಳಿದರು.
ನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮಾತನಾಡಿದ ಅವರು ವಿಜಯ ನಗರ ಜಿಲ್ಲೆಯ ಎಲ್ಲಾ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಹಮ್ಮಿಿಕೊಂಡಿದ್ದ ವಿಶೇಷ ತೆರಿಗೆ ವಸೂಲಾತಿ ಅಭಿಯಾ ನಿಗದಿತ ಗುರಿ ಮೀರಿ ಸಾಧನೆ ಸಾಧಿಸಿದೆ.
ಜಿಲ್ಲೆ ಯ ಎಲ್ಲಾ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯ ಗ್ರಾಾಮಗಳಲ್ಲಿ ಏಕಕಾಲಕ್ಕೆೆ ತೆರಿಗೆ ಸಂಗ್ರಹ ಕಾರ್ಯ ಅರಂಭವಾಗಿತ್ತು, ಈ ಅಭಿಯಾನದ ಲವಾಗಿ ಒಂದೇ ದಿನ ಸುಮಾರು ರೂ.2.74 ಕೋಟಿ ರೂಗಳು ಸಂಗ್ರಹವಾಗಿದೆ. ಈ ಸಾಧನೆ ಯು ವಿಜಯನಗರ ಜಿಲ್ಲೆಯ ರಚನೆಯಾದ ನಂತರ ಸಂಗ್ರಹವಾಗಿರುವ ದಾಖಲೆ ಮಟ್ಟದ ತೆರಿಗೆಯಾಗಿರುತ್ತದೆ. ಈ ಮಹತ್ವದ ಸಾಧನೆಗೆ ಜಿಲ್ಲೆಯ ಎಲ್ಲಾ ಗ್ರಾಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಮಹಿಳಾ ಸ್ವಸಹಾಯ ಗುಂಪಿನ ಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ನೋಡಲ್ ಅಧಿಕಾರಿಗಳು, ಹಾಗು ಗ್ರಾಾಮ ಪಂಚಾಯತಿಗಳ ಅಧಿಕಾರಿಗಳ ಸಮನ್ವಯ ಮತ್ತು ಸಹಕಾರದಿಂದ ಗರಿಷ್ಠ ಮಟ್ಟದ ತೆರಿಗೆ ವಸೂಲಾತಿ ಸಾಧ್ಯವಾಗಿದೆ.
ವಿಶೇಷ ತೆರಿಗೆ ವಸೂಲಾತಿ ಅಭಿಯಾನ ಯಶಸ್ವಿಿಗೊಳಿಸಲು ಪ್ರತಿ ತಾಲೂಕಿಗೆ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿ ಅಯಾ ತಾಲೂಕಿನ ಕನಿಷ್ಠ 5 ಗ್ರಾಾಪಂ ಗಳಿಗೆ ಭೇಟಿ ನೀಡಿ, ಜಿಲ್ಲೆಯ ಎಲ್ಲಾ ತಾ ಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಾ ಕು. ನೀ.ನೈ ಇಲಾಖೆ ಸಹಾಯಕ ನಿರ್ದೇಶಕರು ಸಹ ತಾಲೂಕಿನಲ್ಲಿ ಕನಿಷ್ಠ 10 ಗ್ರಾಾ ಪಂಗಳಿಗೆ ಭೇಟಿ ನೀಡಿ ನಿಗದಿತ ಗುರಿ ಸಾಧಿಸಲು ವಿಶೇಷ ತೆರಿಗೆ ವಸೂಲಾತಿ ಅಭಿಯಾನದಲ್ಲಿ ಪಾಲ್ಗೊೊಂಡು ಅಗತ್ಯ ಮಾರ್ಗದರ್ಶನ ನೀಡುವಂತೆ ಸೂಚಿಸ ಲಾಗಿತ್ತು ಎಂದರು.
ತಾಲೂಕುವಾರು ತೆರಿಗೆ ಸಂಗ್ರಹ ವಿವರ :
ಹಗರಿಬೊಮ್ಮನಹಳ್ಳಿಿ- 62,90,218, ಹರಪನಹಳ್ಳಿಿ- 56, 41,912, ಹಡಗಲಿ- 54,76,201, ಹೊಸಪೇಟೆ- 46,11,934, ಕೂಡ್ಲಿಿಗಿ- 31,12,421, ಕೊಟ್ಟೂರು- 23,03,411,
ಒಟ್ಟು : 2,74,36,097 ತೆರಿಗೆ ವಸೂಲಾತಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಹೊಸಪೇಟೆ ತಾಲೂಕಿನ ನಾಗೇನಹಳ್ಳಿಿ ಮತ್ತು ಡಣಾಯಕನ ಕೆರೆ ಗ್ರಾಾಮಗಳ ಅಭಿಯಾನದಲ್ಲಿ ಜಿಪಂ ಸಿಇಒ ಭಾಗವಹಿಸಿದ್ದರು.
ವಿಜಯನಗರ : ಒಂದೇ ದಿನ 2.74 ಕೋಟಿ ತೆರಿಗೆ ವಸೂಲಾತಿ

