ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.29:
ಎಐಡಿಎಸ್ಓ ವಿದ್ಯಾಾರ್ಥಿ ಸಂಘಟನೆಯ 72ನೇ ಸಂಸ್ಥಾಾಪನಾ ದಿನಾಚರಣೆಯ ಅಂಗವಾಗಿ ಎಐಡಿಎಸ್ಓ ಕಚೇರಿಯಲ್ಲಿ ಧ್ವಜಾರೋಹಣ ಭಾನುವಾರ ನೆರವೇರಿಸಲಾಯಿತು.
ಎಐಡಿಎಸ್ಓನ ಜಿಲ್ಲಾಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಅವರು ಧ್ವಜಾರೋಹಣ ನೆರವೇರಿಸಿದರು.
ರಾಜ್ಯ ಸೆಕ್ರೆೆಟರಿಯೇಟ್ ಸದಸ್ಯ ರವಿಕಿರಣ್.ಜೆ.ಪಿ ಅವರು ಅತಿಥಿಗಳಾಗಿ, ಕಾಮ್ರೇಡ್ ಶಿವದಾಸ್ ಘೋಷ್ ಅವರ ವಿಚಾರಗಳ ಪ್ರೇರಣೆಯಿಂದಾಗಿ ಎಐಡಿಎಸ್ಓ ಕೊಲ್ಕತ್ತದಲ್ಲಿ ಸ್ಥಾಾಪನೆ ಆಯಿತು. ಈ ಸಂಘಟನೆಯು ಬಡ ಮತ್ತು ಮಧ್ಯಮ ವರ್ಗದ ವಿದ್ಯಾಾರ್ಥಿಗಳಿಗೆ ಸಾಕಷ್ಟು ನೆರವಾಗಿದೆ ಎಂದರು.
ಎಐಡಿಎಸ್ಓ ಜಿಲ್ಲಾಾ ಅಧ್ಯಕ್ಷ ಈರಣ್ಣ ಅವರು, ರಾಜ್ಯ ಸರ್ಕಾರವು ಕೆಪಿಎಸ್ ಮ್ಯಾಾಗ್ನೆೆಟ್ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದರು.
ಎಐಡಿಎಸ್ಓನ ಜಿಲ್ಲಾಾ ಉಪಾಧ್ಯಕ್ಷೆ ಎಂ.ಶಾಂತಿ, ಖಜಾಂಚಿ ಅನುಪಮಾ, ಕಚೇರಿ ಕಾರ್ಯದರ್ಶಿ ನಿಹಾರಿಕ ಮತ್ತು ಸದಸ್ಯರಾದ ಸಮೀರ್, ತಿಪ್ಪೇಸ್ವಾಾಮಿ, ಕಾಂತೇಶ್, ರಿಯಾಜ್, ರಾಜಶೇಖರ್, ಕಾರ್ತಿಕ್ ಮತ್ತು ವಿದ್ಯಾಾರ್ಥಿಗಳು ಈ ಸಂದರ್ಭದಲ್ಲಿದ್ದರು.
ಎಐಡಿಎಸ್ಓನ 72ನೇ ಸಂಸ್ಥಾಪನಾ ದಿನಾಚರಣೆ

