ಸುದ್ದಿಮೂಲ ವಾರ್ತೆ ಬೆಂಗಳೂರು, ಅ.05:
ವಚನಗಳ ಸಂಶೋಧನೆಗಾಗಿ ರಾಜ್ಯದಲ್ಲಿ ಮುಂದಿನ ವರ್ಷ ವಚನ ವಿಶ್ವವಿದ್ಯಾಾಲಯ ಸ್ಥಾಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಘೋಷಿಸಿದರು.
ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಸನ್ಮಾಾನ ಸ್ವೀಕರಿಸಿ ಮಾತನಾಡಿದ ಅವರು ರಾಜ್ಯದಲ್ಲಿ ವಚನ ವಿಶ್ವವಿದ್ಯಾಾಲಯ ಸ್ಥಾಾಪಿಸುವಂತೆ ಹಲವು ಬೇಡಿಕೆಗಳು ಬಂದಿವೆ. ಬೇಡಿಕೆಗೆ ಸರ್ಕಾರ ಒಪ್ಪಿಿದೆ. ಮುಂದಿನ ವರ್ಷ ವಚನ ವಿವಿ ಸ್ಥಾಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
‘ಬಸವ ಮೆಟ್ರೋೋ’ಗೆ ಶಿಾರಸು:
ಬೆಂಗಳೂರಿನ ನಮ್ಮ ಮೆಟ್ರೋೋಗೆ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಹೆಸರು ನಾಮಕರಣ ಮಾಡಲು ಆಲೋಚಿಸಲಾಗಿದೆ. ಹೀಗಾಗಿ ‘ನಮ್ಮ ಮೆಟ್ರೋೋ’ ಬದಲಿಗೆ ’ಬಸವ ಮೆಟ್ರೋೋ’ ಎಂದು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆೆ ಶಿಾರಸ್ಸು ಮಾಡಲಾಗುವುದು ಎಂದೂ ಸಹ ಸಿದ್ದರಾಮಯ್ಯ ಇದೇ ವೇಳೆ ಘೋಷಣೆ ಮಾಡಿದರು.
ಮೆಟ್ರೋೋ ಯೋಜನೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿಡಿತದಲ್ಲಿದೆ. ಒಂದು ವೇಳೆ ಮೆಟ್ರೋೋ ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೇ ಇಂದೇ ‘ಬಸವ ಮೆಟ್ರೋೋ’ ಎಂದು ಈ ವೇದಿಕೆಯಲ್ಲೇ ಘೋಷಿಸಿ ಬಿಡುತ್ತಿಿದ್ದೆ ಎಂದರು.
ನಾನು ಬಸವಣ್ಣ ಅವರ ಅಭಿಮಾನಿ. ಬಸವ ತತ್ವದಲ್ಲಿ ನಂಬಿಕೆ, ಬದ್ಧತೆ ಇಟ್ಟುಕೊಂಡಿದ್ದೇನೆ. ಮುಂದೆಯೂ ಬಸವ ತತ್ವ ಶಾಶ್ವತ ಹಾಗೂ ಪ್ರಸ್ತುತ ಎನ್ನುವುದು ನನ್ನ ನಂಬಿಕೆ. ಸಹಬಾಳ್ವೆೆ ಮತ್ತು ಸಹಿಷ್ಟುಣತೆ ಬಸವಣ್ಣ ಅವರು ತಮ್ಮ ಬದುಕಿನಲ್ಲಿ ಸಾರಿದರು. ಇದನ್ನು ನಾನು ಪಾಲಿಸುತ್ತಿಿದ್ದೇನೆ ಎಂದರು.
ಬಸವ ಜಯಂತಿ ದಿನವೇ ಮುಖ್ಯಮಂತ್ರಿಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಿಸುವ ಬಸವಣ್ಣನವರ ಆಶಯ ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳ, ಗ್ಯಾಾರಂಟಿಗಳ ಮೂಲಕ ಎಲ್ಲ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶ ಕಲ್ಪಿಿಸಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರ ಇಡುವುದನ್ನು ಕಡ್ಡಾಾಯ ಮಾಡಿರುವುದು ಇದೇ ಕಾರಣಕ್ಕೆೆ ಎಂದು ಅವರು ಹೇಳಿದರು.
ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾನತಾಡಿ ನಮ್ಮದು ಲಿಂಗಾಯತ ಧರ್ಮ, ಬಸವ ಧರ್ಮ. ನಾವು ಬೇರೆಯವರನ್ನು ಟೀಕೆ ಮಾಡಲ್ಲ. ನಮ್ಮ ಧರ್ಮ ಪ್ರಸಾರ ಆಗಬೇಕು. ಬಸವ ಧರ್ಮ ಕನ್ನಡ ಧರ್ಮ. ಈ ಧರ್ಮದ ಪ್ರಸಾರ ಹೆಚ್ಚು ಆಗಬೇಕು. ನಾವು ಭಾರತೀಯರು, ಭೌಗೋಳಿಕವಾಗಿ ನಾವು ಹಿಂದೂಗಳು. ಆದ್ರೆೆ ಧರ್ಮವಾಗಿ ನಮ್ಮದು ಬಸವ ಧರ್ಮ, ಲಿಂಗಾಯತ ಧರ್ಮ. ಯಾರನ್ನೂ ನಾವು ಟೀಕೆ ಮಾಡುವುದಿಲ್ಲ ಎಂದರು.
ಸಮಾರಂಭದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಶರಣ ಪ್ರಕಾಶ ಪಾಟೀಲ, ಲಕ್ಷ್ಮೀ ಹೆಬ್ಬಾಾಳ್ಕರ್, ಮುಖ್ಯಮಂತ್ರಿಿ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿ ರಾಜ್ಯದ ಲಿಂಗಾಯತ ಸಮುದಾಯದ ನೂರಾರು ಸ್ವಾಾಮೀಜಿಗಳು, ಶರಣರು ಭಾಗವಹಿಸಿದ್ದರ
ಸಿಎಂಗೆ ಸನ್ಮಾಾನ
ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆ ’ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರಿಗೆ ಅದ್ದೂರಿ ಸನ್ಮಾಾನ ಮಾಡಲಾಯಿತು.
ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರನ್ನು ಸನ್ಮಾಾನಿಸಲಾಯಿತು. ಈ ವೇಳೆ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಉಪಸ್ಥಿಿತರಿದ್ದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರ ಶರಣ ಸಂಸ್ಕೃತಿ ಬಗೆಗಿನ ಬದ್ಧತೆಯನ್ನು ಶ್ಲಾಾಘಿಸಿ ಅಭಿನಂದಿಸಿದರು.
ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ: ’ನಮ್ಮ ಮೆಟ್ರೋೋ’ಗೆ ’ಬಸವ ಮೆಟ್ರೋೋ’ ಹೆಸರಿಡುವಂತೆ ಕೇಂದ್ರಕ್ಕೆೆ ಶಿಾರಸು ಮುಂದಿನ ವರ್ಷ ವಚನ ವಿಶ್ವವಿದ್ಯಾಾಲಯ ಸ್ಥಾಾಪನೆ

