ಸುದ್ದಿಮೂಲ ವಾರ್ತೆ ಕವಿತಾಳ, ಅ.07:
ಕೇಂದ್ರ ಗೃಹ ಇಲಾಖೆ ನೀಡುವ ಅತ್ಯುತ್ತಮ ಪೊಲೀಸ್ ಠಾಣೆ ವಾರ್ಷಿಕ ಪ್ರಶಸ್ತಿಿಗೆ ದೇಶದ ಪ್ರತಿ ರಾಜ್ಯದಿಂದ ಮೂರು ಪೊಲೀಸ್ ಠಾಣೆಗಳನ್ನು ಆಯ್ಕೆೆ ಮಾಡಲಾಗುತ್ತದೆ, ರಾಜ್ಯದ 906 ಪೊಲೀಸ್ ಠಾಣೆಗಳ ಪೈಕಿ ರಾಯಚೂರು ಜಿಲ್ಲೆಯ ಕವಿತಾಳ ಮತ್ತು ಬಳಗಾನೂರು ಹಾಗೂ ಬಳ್ಳಾಾರಿ ಜಿಲ್ಲೆಯ ಸಿರಿಗೇರಿ ಪೊಲೀಸ್ ಠಾಣೆಗಳು ಆಯ್ಕೆೆಯಾಗಿವೆ ಎಂದು ಗೃಹ ಮಂತ್ರಾಾಲಯದ ಅಧಿಕಾರಿ ಸೈಯದ್ ಮಹ್ಮದ್ ಹುಸೇನ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಕಸ್ಟಡಿ ಕೊಠಡಿಗಳು, ಗ್ರಂಥಾಲಯ, ವಿಶ್ರಾಾಂತಿ ಕೊಠಡಿ, ದಾಖಲಾತಿಗಳು ಸೇರಿದಂತೆ ಇನ್ನಿಿತರ ಪರಿಶೀಲಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದರು ಮತ್ತು ಅಂಗಡಿಗಳಿಗೆ ಭೇಟಿ ನೀಡಿ ವ್ಯಾಾಪಾರಸ್ಥರು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು.
ಸಿಬ್ಬಂದಿ ಕಾರ್ಯ ಸಂಚಾರಿ ವ್ಯವಸ್ಥೆೆ, ಅಪರಾಧ ತಡೆ, ಕಟ್ಟಡದ ಸ್ವಚ್ಛತೆ, ಮಹಿಳಾ ಅಪರಾಧ ತಡೆ, ಬಾಲ್ಯವಿವಾಹ ತಡೆ ಸೇರಿದಂತೆ ಸಾರ್ವಜನಿಕರ ಸಮಸ್ಯೆೆಗೆ ಸಿಬ್ಬಂದಿ ಸ್ಪಂದನೆ ಸೇರಿದಂತೆ ವಿವಿಧ ಹಂತದಲ್ಲಿ ಪರಿಶೀಲಿಸಿ ದೇಶದ 78 ಠಾಣೆಗಳನ್ನು ಗುರುತಿಸಲಾಗಿದೆ ಅದರಲ್ಲಿ ಪರಿಶೀಲಿಸಿ 10 ಸ್ಥಾಾನಕ್ಕೆೆ ಆಯ್ಕೆೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೆನ್ ರಾಯಚೂರು ಡಿಎಸ್ಪಿ ವೆಂಕಟೇಶ ಉಗಿಬಂಡಿ, ಸಿ.ಪಿ.ಐ. ಶಶಿಕಾಂತ ಎಂ, ಠಾಣೆಯ ಪಿ.ಎಸ್.ಐ. ಗುರುಚಂದ್ರ ಯಾದವ ಹಾಗೂ ಸಿಬ್ಬಂದಿ ಮಲ್ಲಿಕಾರ್ಜುನ, ಮಹೇಶ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.