ಸುದ್ದಿಮೂಲ ವಾರ್ತೆ ಬೆಂಗಳೂರು, ಅ.21:
ಬೆಂಗಳೂರು ವಿಪರೀತವಾಗಿ ಬೆಳೆಯುತ್ತಿಿರುವ ನಗರ. ನಗರದ ಜನಸಂಖ್ಯೆೆ ತೀವ್ರಗತಿಯಲ್ಲಿ ಹೆಚ್ಚುತ್ತಿಿದ್ದು ಈ ಸವಾಲಿನ ಜೊತೆಗೆ ಬೆಂಗಳೂರಿನ ರಸ್ತೆೆಗಳ ಆಧುನೀಕರಣ ಮತ್ತು ಅಭಿವೃದ್ಧಿಿಗೆ ಹೇರಳವಾದ ಹಣವನ್ನು ಸರ್ಕಾರ ಒದಗಿಸುತ್ತಿಿದೆ ಎಂದು ಮುಖ್ಯಮಂತ್ರಿಿ ಸಿದ್ದರಾಮಯ್ಯ ಹೇಳಿದರು.
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚಿಕ್ಕಪೇಟೆಯ ಆಧುನೀಕರಣ ಮತ್ತು ಗಾಂಧಿನಗರ ಕ್ಷೇತ್ರದ ರಸ್ತೆೆಗಳ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆಂಪೇಗೌಡರ ಕಾಲದಲ್ಲಿ ಪೇಟೆ ಬೀದಿಯಾಗಿದ್ದ ಇಲ್ಲಿನ ಪೇಟೆಗಳು ಈಗಲೂ ಆ ಕಾಲದ ಸ್ವಭಾವವನ್ನೇ ಹೊಂದಿವೆ. ನಾವೊಮ್ಮೆೆ ಇಲ್ಲಿನ ರಸ್ತೆೆಗಳ ಅಗಲೀಕರಣದ ಬಗ್ಗೆೆ ಚಿಂತಿಸಿದ್ದೆವು. ಆದರೆ ದಿನೇಶ್ ಗುಂಡೂರಾವ್ ಅವರು ಒಪ್ಪಲಿಲ್ಲ. ನಮ್ಮ ಜನಗಳಿಗೆ ಸಮಸ್ಯೆೆ ಆಗತ್ತೆೆ ಹೀಗಾಗಿ ರಸ್ತೆೆ ಅಗಲೀಕರಣ ಬೇಡ ಎಂದು ಸ್ಪಷ್ಟವಾಗಿ ನಿರಾಕರಿಸಿ, ರಸ್ತೆೆ ಅಗಲೀಕರಣ ಮಾಡದೆ, ರಸ್ತೆೆಗಳ ಆಧುನೀಕರಣ ಮತ್ತು ಚಿಕ್ಕಪೇಟೆಯ ಅಭಿವೃದ್ಧಿಿಗೆ ಯೋಜನೆ ರೂಪಿಸಿ ಜಾರಿ ಮಾಡಿದ್ದಾರೆ ಎಂದು ಶ್ಲಾಾಘಿಸಿದರು.
ದಿನೇಶ್ ಗುಂಡೂರಾವ್ ಕ್ಷೇತ್ರದ ಅಭಿವೃದ್ಧಿಿ ಬಗ್ಗೆೆ ಮಾತ್ರ ಶ್ರಮಿಸುವ ಜನಮುಖಿ ಶಾಸಕರು. ಇವರಿಗೆ ಉತ್ತಮ ಅವಕಾಶಗಳಿವೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿಿನ ಬಹುಮತದಿಂದ ಗೆಲ್ಲಿಸಲೇಬೇಕು ಎಂದರು.
ನಮ್ಮ ಮೆಟ್ರೋೋ ರಾಜ್ಯದ ಯೋಜನೆ :
ಬೆಂಗಳೂರಿನ ಮೆಟ್ರೋೋಗೆ ಶೇ.87 ರಷ್ಟು ಹಣ ಕೊಡುವುದು ನಾವೇ. ಅಂದರೆ ರಾಜ್ಯದ ಜನತೆಯ ಶೇ. 87 ರಷ್ಟು ಹಣದಲ್ಲಿ ಮೆಟ್ರೋೋ ಆಗಿದೆ. ಆದರೆ ಬಿಜೆಪಿಯವರು ಮೆಟ್ರೋೋ ಕೇಂದ್ರದ ಯೋಜನೆ ಎಂದು ತಿರುಚಿ ಸುಳ್ಳು ಹೇಳ್ತಾಾರೆ ಎಂದರು.
ಜಿಎಸ್ಟಿ ಜಾರಿ ಮಾಡಿ 8 ವರ್ಷ ಇಡೀ ಭಾರತೀಯರ ಹಣ ಸುಲಿದಿದ್ದು ಇದೇ ಕೇಂದ್ರ ಸರ್ಕಾರ ಮತ್ತು ಇದೇ ನರೇಂದ್ರ ಮೋದಿ. ಎಂಟು ವರ್ಷ ಸುಲಿಗೆ ಮಾಡಿ ಈಗ ಮೋದಿ ೆಟೋ ಹಾಕಿ ದೀಪಾವಳಿ ಗ್ಟಿ ಎಂದು ನಾಚಿಕೆ ಇಲ್ಲದೆ ಬೆನ್ನು ತಟ್ಟಿಿಕೊಳ್ಳುತ್ತಿಿದ್ದಾರೆ. ಇಂಥಾ ನಕಲಿಗಳಿಗೆ ನೀವು ಓಟು ಹಾಕಿ ಈಗ ಏಕೆ ತಲೆ ಮೇಲೆ ಕೈ ಹೊತ್ತುಕೊಳ್ತೀರಿ ಎಂದು ಸಾರ್ವಜನಿಕರಿಗೆ ಪ್ರಶ್ನಿಿಸಿದರು.
ದೀಪಾವಳಿ ಗ್ಟಿ ಎಂದು ಜಾಹಿರಾತು ನೀಡಿರುವ ಮೋದಿ ಸರ್ಕಾರದ ಜಿಎಸ್ಟಿಿ ಬದಲಾವಣೆಯಿಂದ ರಾಜ್ಯಕ್ಕೆೆ, ರಾಜ್ಯದ ಜನರಿಗೆ 15 ಸಾವಿರ ಕೋಟಿ ರೂ. ನಷ್ಟವಾಗಿದೆ. ಒಂದು ಲಕ್ಷದ 20 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಅಭಿವೃದ್ಧಿಿಗೆ ಮುಂದಾಗಿದ್ದೀವಿ. ಕೇಂದ್ರದಿಂದ ನಯಾ ಪೈಸೆ ಕೊಡುತ್ತಿಿಲ್ಲ ಎಂದು ವಿವರಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಹೊಸ ರಸ್ತೆೆ ನಿರ್ಮಿಸಲಿಲ್ಲ. ಒಂದೇ ಒಂದು ರಸ್ತೆೆ ಗುಂಡಿ ಮುಚ್ಚಲಿಲ್ಲ. ಈಗ ಇರುವ ರಸ್ತೆೆಗಳೆಲ್ಲಾ ಕಾಂಗ್ರೆೆಸ್ ಸರ್ಕಾರದ ಕಾಲದಲ್ಲೇ ಆಗಿರುವಂಥವು ಎಂದರು.
ಆರ್ಎಸ್ಎಸ್ ನವರು ನಮ್ಮನ್ನು ಬಿಡಲ್ಲ ಅಂತ ಆರ್.ಅಶೋಕ್ ಹೇಳುತ್ತಿಿದ್ದರು. ಬಿಜೆಪಿಯ ಆರ್.ಅಶೋಕ್, ವಿಜಯೇಂದ್ರ ಸೇರಿ ಯಾರದ್ದೂ ಸ್ವಂತ ಮಾತು ಇಲ್ಲ. ಆರ್ಎಸ್ಎಸ್ ನವರು ಬರೆದುಕೊಟ್ಟಿಿದ್ದನ್ನು ಓದಿ ಹೋಗುವುದಷ್ಟೆೆ ಇವರ ಕೆಲಸ ಎಂದರು.
ವಿಧಾನಸಭಾ ಅಧಿವೇಶನ ವೇಳೆ ಒಮ್ಮೆೆ ಆರ್.ಅಶೋಕ್ಗೆ ಕೇಳಿದ್ದೆ. ಆಗ ಆರ್.ಅಶೋಕ್ ಅವರು, ಏನು ಮಾಡೋದು ಸರ್. ಆರ್ಎಸ್ಎಸ್ ನವರು ಒಬ್ಬರು ಬಂದು ಕುಳಿತಿರುತ್ತಾಾರೆ. ಅವರು ಹೇಳಿದ್ದನ್ನು ಹೇಳದೇ ಹೋದರೆ ನಮ್ಮನ್ನು ಬಿಡಲ್ಲ ಸಾರ್ ಎಂದು ಉತ್ತರಿಸಿದ್ದರು ಎಂದು ಸ್ಮರಿಸಿದರು.
ಒಂದು ವಾರದಲ್ಲಿ ರಸ್ತೆೆ ಗುಂಡಿಗಳನ್ನೆೆಲ್ಲಾ ಮುಚ್ಚಿಿ ಒಂದು ಪದರ ಡಾಂಬರ್ ಹಾಕಬೇಕು ಎಂದು ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ವೇದಿಕೆಯಿಂದಲೇ ಸೂಚನೆ ನೀಡಿದರು.
ಬಾಕ್ಸ್
ಅಮಾವಾಸ್ಯೆೆ ಸೂರ್ಯ ಕೇಂದ್ರದ ದ್ರೋಹ ಪ್ರಶ್ನಿಿಸಿದ್ದೀರಾ
ಸಂಸದ ತೇಜಸ್ವಿಿ ಸೂರ್ಯ. ನಾನು ಇವರನ್ನು ಅಮಾವಾಸ್ಯೆೆ ಸೂರ್ಯ ಅಂತ ಕರಿತೀನಿ. ರಾಜ್ಯದಲ್ಲಿ ಆಗುತ್ತಿಿರುವ ಅನ್ಯಾಾಯ, ದ್ರೋಹದ ಬಗ್ಗೆೆ ಅಮಾವಾಸ್ಯೆೆ ಸೂರ್ಯ ಇವತ್ತಿಿನವರೆಗೆ ಬಾಯಿ ಬಿಟ್ಟಿಿದ್ದಾರೆಯೇ, ಸಚಿವರಾದ ಶೋಭಾ ಕರಂದ್ಲಾಾಜೆ, ಎಚ್.ಡಿ.ಕುಮಾರಸ್ವಾಾಮಿ ಅವರು ಮೋದಿ ಸರ್ಕಾರದಿಂದ ರಾಜ್ಯಕ್ಕೆೆ ಆಗುತ್ತಿಿರುವ ಮೋಸ, ದ್ರೋಹದ ಬಗ್ಗೆೆ ಒಂದೇ ಒಂದು ದಿನ ಬಾಯಿ ಬಿಟ್ಟಿಿದ್ದೀರಾ. ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಾಗಲೀ, ಅವರು ಗೆದ್ದ ಪಾರ್ಲಿಮೆಂಟ್ ಕ್ಷೇತ್ರಕ್ಕಾಾಗಲೀ ಏನು ಸಿಕ್ಕಿಿದೆ ಹೇಳಿ ಎಂದು ಪ್ರಶ್ನಿಿಸಿದರು.
ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ನಿಮ್ಮ ಪರವಾಗಿ ಪಾರ್ಲಿಮೆಂಟಿನಲ್ಲಿ ಬಾಯಿ ಬಿಟ್ಟಿಿದ್ದಾರಾ ಹೇಳಿ ಎಂದು ಸಿ.ಎಂ ಜನರನ್ನು ಪ್ರಶ್ನಿಿಸಿದರು.
ಹೊಸ ಹೊರ ವರ್ತುಲ ರಸ್ತೆೆ, ಸುರಂಗ ಮಾರ್ಗ, ್ಲೈ ಓವರ್, ಡಬಲ್ ಡೆಕರ್ ರಸ್ತೆೆಗಳು ಸೇರಿ ಬೆಂಗಳೂರಿನ ಅಭಿವೃದ್ಧಿಿಗೆ 1,20,000 ಕೋಟಿ ನೀಡುತ್ತಿಿದ್ದೇವೆ. ಆದ್ದರಿಂದ ಕೆಲಸ ಮಾಡುವವರ ಪರವಾಗಿ ನೀವು ಗಟ್ಟಿಿಯಾಗಿ ನಿಲ್ಲಬೇಕು. ದಿನೇಶ್ ಗುಂಡೂರಾವ್ ಅವರಂಥಾ ಶಾಸಕ ಸಿಕ್ಕಿಿರುವುದು ನಿಮ್ಮ ಅದೃಷ್ಟ ಎಂದರು.