ಸುದ್ದಿಮೂಲ ವಾರ್ತೆ ಬೆಂಗಳೂರು, ನ.08:
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆೆಸ್ ಪಕ್ಷವು ಮತಗಳ್ಳನತದ ಮೂಲಕವೇ ಅಧಿಕಾರಕ್ಕೆೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಾಮಿ ಆರೋಪ ಮಾಡಿದರು.
ಬೆಂಗಳೂರಿನ ಸಂಗೊಳ್ಳಿಿ ರಾಯಣ್ಣ ರೈಲು ನಿಲ್ದಾಾಣದಲ್ಲಿ ಎರ್ನಾಕುಲಂ – ಕೆಎಸ್ ಆರ್ ಬೆಂಗಳೂರು ನಡುವೆ ಹೊಸದಾಗಿ ಆರಂಭವಾಗಿರುವ ವಂದೇ ಭಾರತ್ ರೈಲಿಗೆ ಸ್ವಾಾಗತ ಕೋರಿದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.
ಬಿಜೆಪಿ ವೋಟ್ ಚೋರಿಯಿಂದಲೇ ಗೆದ್ದಿದೆ ಸಿಎಂ, ಡಿಸಿಎಂ ಆರೋಪ ಮಾಡಿರುವುದು ಸರಿಯಲ್ಲ. ನಿಜಕ್ಕೇ ಆರೋಪ ಮಾಡಿರುವವರೇ ವೋಟ್ ಚೋರಿ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆೆ ಅಧಿಕಾರಕ್ಕೆೆ ಬಂದು ಸುಳ್ಳು ಆರೋಪ ಮಾಡುತ್ತಿಿದ್ದಾರೆ. ಹಾಗಾದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 136 ಸೀಟು ಬರುತ್ತೆೆ ಎಂದು ಅಷ್ಟು ನಿಖರವಾಗಿ ಹೇಗೆ ಹೇಳಿದರು? ಆ ಸಂಖ್ಯೆೆ ಅವರಿಗೆ ಹೇಗೆ ಗೊತ್ತಿಿತ್ತು? ಯಾವ ಆಧಾರದಲ್ಲಿ 136 ಸೀಟು ಬರುತ್ತೆೆ ಅಂತ ಹೇಳಿದರು? ಮತ ಕಳ್ಳತನ ಮಾಡಿರುವುದೇ ಕಾಂಗ್ರೆೆಸ್ ಪಕ್ಷ. ಈಗ ನೋಡಿದರೆ ಮೋದಿ ಅವರನ್ನು ಟೀಕೆ ಮಾಡುತ್ತಿಿದೆ ಎಂದು ಕೇಂದ್ರ ಸಚಿವರು ವಾಗ್ದಾಾಳಿ ನಡೆಸಿದರು.
ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿಜೆಪಿಗೆ 67 ಸೀಟು ಬಂದು ಗೆಲ್ಲೋಕೆ ಚೋರಿ ಮಾಡಿದ್ರಾಾ? ಕಾಂಗ್ರೆೆಸ್ ನವರು ಜನರನ್ನು ಯಾಮಾರಿಸಿ ಈ ರೀತಿಯ ವ್ಯರ್ಥ ಹೇಳಿಕೆ ಕೊಟ್ಟು ಸಮಯ ವ್ಯರ್ಥ ಮಾಡುತ್ತಿಿದ್ದಾರೆ. ರಾಜ್ಯದಲಿ ಅನೇಕ ಗಂಭೀರ ಸಮಸ್ಯೆೆಗಳನ್ನು ಜನ ಎದುರಿಸುತ್ತಿಿದ್ದಾರೆ. ಅದರ ಬಗ್ಗೆೆ ಇವರ ಗಮನ ಇರಬೇಕು ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಸಿಎಂ, ಡಿಸಿಎಂ ಜಂಟಿ ಪತ್ರಿಿಕಾಗೋಷ್ಠಿಿ ಅಂತ ಯಾರೋ ಹೇಳಿದರು. ನಾನೇನೋ ಯಾವುದೋ ಭಾರೀ ವಿಷಯ ಇರಬೇಕು ಎಂದುಕೊಂಡಿದ್ದೆ. ಆದರೆ ಸತ್ಯವಲ್ಲದ ವೋಟ್ ಚೋರಿ ಬಗ್ಗೆೆ ಇವರಿಬ್ಬರೂ ಮಾಧ್ಯಮಗೋಷ್ಠಿಿ ನಡೆಸಿರುವುದು ಸಣ್ಣತನ ಅಷ್ಟೇ. ಸಿಎಂ,ಡಿಸಿಎಂ ಸಣ್ಣತನವನ್ನು ರಾಜ್ಯದ ಜನರು ನೋಡಿದ್ದಾರೆ. ರಾಜ್ಯದ ಜನತೆಯ ದಿಕ್ಕು ತಪ್ಪಿಿಸುವ ನಿಟ್ಟಿಿನಲ್ಲಿ ಇಂತಹ ವಿಷಯ ಇಟ್ಟುಕೊಂಡು ಹೋಗ್ತಾಾ ಇದ್ದಾರೆ. ಕಾಂಗ್ರೆೆಸ್ ನವರನ್ನು ನಾಡಿನ ಜನ ಶಾಶ್ವತವಾಗಿ ಮನೆಗೆ ಕಳಿಸುವ ದಿನ ದೂರ ಉಳಿದಿಲ್ಲ ಎಂದು ಕುಮಾರಸ್ವಾಾಮಿ ಅವರು ಕಿಡಿಕಾರಿದರು.
ರಾಜ್ಯದ ಖಜಾನೆ ಖಾಲಿ ಆಗಿದೆ. ಖಾಲಿ ಆಗಿರುವ ಖಜಾನೆ ಹೇಗೆ ತುಂಬಿಸಬೇಕು ಅಂತ ನಿನ್ನೆೆ (ಶುಕ್ರವಾರ) ಸಭೆ ಮಾಡಿದ್ದಾರೆ. ಜನರ ಮೇಲೆ ಪದೇ ಪದೇ ತೆರಿಗೆ ವಿಧಿಸುವ ಮೂಲಕ ಜನರ ಹಣವನ್ನು ಲೂಟಿ ಮಾಡುತ್ತಿಿದ್ದಾರೆ. ಜನ ಎಲ್ಲವನ್ನೂ ಗಮನಿಸುತ್ತಿಿದ್ದಾರೆ. ಯಾವಾಗಲೂ ಜನರನ್ನ ದಾರಿ ತಪ್ಪಿಿಸಲು ಸಾಧ್ಯವಿಲ್ಲ. ನಾನು ಅನೇಕ ಬಾರಿ ಹೇಳಿದ್ದೇನೆ. ತಪ್ಪುು ತಿದ್ದಿಕೊಂಡು ಕೆಲಸ ಮಾಡಿ ಅಂತ. ಆದರೂ ಅವರಿಗೆ ಬುದ್ದಿ ಬಂದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ದ ಕುಮಾರಸ್ವಾಾಮಿ ಅವರು ಹರಿಹಾಯ್ದರು.

