ಸುದ್ದಿಮೂಲ ವಾರ್ತೆ ಬೀದರ್, ನ.10:
ತಾಲೂಕಿನ ಕಪಲಾಪುರ ಹತ್ತಿಿರದ ಅಲ್ಪಸಂಖ್ಯಾಾತರ ಕಲ್ಯಾಾಣ ಇಲಾಖೆಯಡಿ ನಡೆಯುತ್ತಿಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸೋಮವಾರ ದಿಢೀರ್ ಭೇಟಿ ನೀಡಿದ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಪರಿಶೀಲನೆ ನಡೆಸಿದರು.
ಮಕ್ಕಳಿಗೆ ನೀಡುವ ಉಪಾಹಾರದ ಉಪ್ಪಿಿಟ್ಟಿಿನಲ್ಲಿ ಹುಳು ಕಂಡು ಹೌ ಹಾರಿದ ಅಧ್ಯಕ್ಷ ಕೋಸಂಬೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡದಿರುವ ಬಗ್ಗೆೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಗುಣಮಟ್ಟದ ಆಹಾರ ಪೂರೈಕೆಗೆ ತಾಕೀತು ಮಾಡಿದರು.
ಇದಕ್ಕೂ ಮೊದಲು ನೌಬಾದ್ನ ಸರಕಾರಿ ಶಾಲೆಗೆ ಭೇಟಿ ನೀಡಿ ಬಿಸಿಯೂಟಕ್ಕೆೆ ಸರಬರಾಜು ಮಾಡಿದ ತೊಗರಿ ಬೇಳೆ ಕಳಪೆಮಟ್ಟದಿಂದ ಕೂಡಿದ್ದು, ಈ ಬಗ್ಗೆೆ ತನಿಖೆ ನಡೆಸಿ ತಪ್ಪಿಿತಸ್ಥರ ವಿರುದ್ಧ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಸಂಖ್ಯೆೆಯಲ್ಲೂ ಭಾರಿ ವ್ಯತ್ಯಾಾಸ ಕಂಡುಬಂದಿದೆ. ಗೈರು ಹಾಜರಾತಿ ಮಕ್ಕಳ ಬಗ್ಗೆೆ ಮಾಹಿತಿ ಪಡೆದರು.
ಪ್ರತಾಪನಗರದಲ್ಲಿರುವ ಮೆಟ್ರಿಿಕ್ ನಂತರ ಮತ್ತು ಮೆಟ್ರಿಿಕ್ ಪೂರ್ವ ವಸತಿ ಶಾಲೆಯಲ್ಲಿ ಅವ್ಯವಸ್ಥೆೆ ಕಂಡು ಬಂದಿದ್ದು, ಒಂದು ಕೋಣೆಯಲ್ಲಿ 13 ಮಕ್ಕಳು ವ್ಯಾಾಸ್ತವ್ಯ ಮಾಡುತ್ತಿಿದ್ದು, ಈ ಬಗ್ಗೆೆ ತನಿಖೆ ನಡೆಸಿ ಕೂಡಲೇ ವಾರ್ಡನ್ಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಸಮಾಜ ಕಲ್ಯಾಾಣ ಇಲಾಖೆ ಅಧಿಕಾರಿ ಯೋಗೇಶ, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಸುನೀತಾ ಪಟವಾಡಿ, ಅಲ್ಪಸಂಖ್ಯಾಾತ ಇಲಾಖೆ ಅಧಿಕಾರಿ ಬಳಿರಾಮ, ರೂಪಾ, ದಶರಥ, ಪ್ರಶಾಂತ, ಗೌರಿಶಂಕರ ಇತರರಿದ್ದರು.
ಬಾಕ್ಸ್
ಕಾರಾಗೃಹಕ್ಕೆೆ ಭೇಟಿ ; ಪರಿಶೀಲನೆ
ನಗರದ ಜಿಲ್ಲಾ ಕಾರಾಗೃಹಕ್ಕೆೆ ಭೇಟಿ ನೀಡಿದ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ್ ಕೋಸಂಬೆ, ಮಹಿಳೆ ಮತ್ತು ಪುರುಷ ಕೈದಿಗಳಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಹಮಿಲಾಪುರ ಹತ್ತಿಿರ ನಿರ್ಮಾಣ ಹಂತದಲ್ಲಿ ಇರುವ ಸರಕಾರಿ ವೀಕ್ಷಣಾಲಯಕ್ಕೆೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಿರಾಗಂಜ್ನಲ್ಲಿರುವ ಮೊರಾರ್ಜಿ ಪಿಯು ವಸತಿ ಕಾಲೇಜಿಗೆ ಭೇಟಿ ನೀಡಿದರು. ಇಲ್ಲಿ ಹೊರಗಿನವರು ಪ್ರವೇಶ ಮಾಡು ತ್ತಿಿರುವುದು ಕಂಡುಬಂದಿದ್ದು, ಈ ಬಗ್ಗೆೆ ತನಿಖೆ ನಡೆಸಿ ಕೈಗೊಂಡ ಕ್ರಮದ ಬಗ್ಗೆೆ ವರದಿ ಸಲ್ಲಿಸುವಂತೆ ಸಂಬಂಧಿತರಿಗೆ ಸೂಚನೆ ನೀಡಿದರು.

