ಸುದ್ದಿಮೂಲ ವಾರ್ತೆ ಕಲಬುರಗಿ, ನ.13:
ನೀತಿ ಆಯೋಗದಿಂದ ಗುರುತಿಸಲ್ಪಟ್ಟ ಜಿಲ್ಲೆಯ ಮಹತ್ವಾಾಂಕ್ಷೆಯ ತಾಲೂಕುಗಳಾದ ಅಜಲಪೂರ, ಶಹಾಬಾದ ಹಾಗೂ ಕಾಳಗಿ ಬ್ಲಾಾಕ್ಗಳಲ್ಲಿ ಸುಸ್ಥಿಿರ ಪ್ರಗತಿ ಸಾಧಿಸಲು ನವೀನ ಆಡಳಿತ ಮತ್ತು ಅಭಿವೃದ್ಧಿಿ ಉಪಕ್ರಮಗಳನ್ನು ಜಾರಿಗೊಳಿಸಿದ್ದಕ್ಕಾಾಗಿ ಕಲಬುರಗಿ ಜಿಲ್ಲಾಧಿಕಾರಿ ಬಿ.ೌಜಿಯಾ ತರನ್ನುಮ್ ಅವರಿಗೆ ನೀತಿ ಆಯೋಗವು ಪ್ರಶಂಸನೆ ವ್ಯಕ್ತಪಡಿಸಿದೆ.
ಭಾರತ ಸರ್ಕಾರದ ರಾಜ್ಯಗಳಿಗೆ ನೀತಿ-ರಾಜ್ಯ ಬೆಂಬಲಿತ ಮಿಷನ್ ಅಡಿಯಲ್ಲಿ ಜಿಲ್ಲೆಯ ಬ್ಲಾಾಕ್ಗಳಲ್ಲಿ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಉಪಕ್ರಮಗಳು ಮತ್ತು ಮಣ್ಣಿಿನ ಆರೋಗ್ಯವನ್ನು ಮರುಸ್ಥಾಾಪನೆ ಹೀಗೆ ಎರಡು ವಲಯದಲ್ಲಿ ಜಿಲ್ಲೆಯ ಅಸಾಧಾರಣ ಅನುಷ್ಠಾಾನ ಸಾಧನ ಮತ್ತು ಉತ್ತಮ ಅಭ್ಯಾಾಸಗಳನ್ನು ಗುರುತಿಸಿ ನೀತಿ ಆಯೋಗವು ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕುರಿತು ಜಿಲ್ಲಾಧಿಕಾರಿ ಬಿ. ೌಜಿಯಾ ತರನ್ನುಮ್ ಅವರಿಗೆ ಪ್ರತ್ಯೇಕವಾಗಿ ಎರಡು ವಲಯದಲ್ಲಿನ ಸಾಧನೆಗೆ ನೀತಿ ಆಯೋಗದ ಸಿ.ಇ.ಓ ಅವರು ಮೆಚ್ಚುಗೆಯ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ.
ಶಿಕ್ಷಣ, ಕಲಿಕಾ ಲಿತಾಂಶಗಳು, ಡಿಜಿಟಲ್ ಕಲಿಕೆಯ ಪ್ರವೇಶ ಮತ್ತು ಸಮಗ್ರ ಶಾಲಾ ಅಭಿವೃದ್ಧಿಿಯನ್ನು ಬಲಪಡಿಸಲು ಕಲಬುರಗಿಯ ಪ್ರಯತ್ನ ಮತ್ತು ವಿನೂತನ ಉಪಕ್ರಮಗಳು ಅಳವಡಿಸಿಕೊಂಡಿದ್ದರಿಂದ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಅದೇ ರೀತಿ ಕೃಷಿ ಮತ್ತು ಸಂಬಂಧಿತ ಸೇವೆಗಳನ್ನು ಸುಧಾರಿಸಿ ಸುಸ್ಥಿಿರ ಮಣ್ಣಿಿನ ನಿರ್ವಹಣೆ, ಕಾಲಮಿತಿಯಲ್ಲಿ ಅನ್ನದಾತರಿಗೆ ಮಣ್ಣಿಿನ ಆರೋಗ್ಯ ಕಾರ್ಡ್ ವಿತರಣೆ, ಸಾವಯವ ಕೃಷಿಗೆ ಪ್ರೋೋತ್ಸಾಾಹ ಮತ್ತು ಸುಧಾರಿತ ಕೃಷಿ ಉತ್ಪಾಾದಕತೆಗೆ ಜಿಲ್ಲೆಯ ಹೆಚ್ಚಿಿನ ಒತ್ತು ನೀಡಿದ್ದಕ್ಕಾಾಗಿ ಮಣ್ಣಿಿನ ಆರೋಗ್ಯ ಪುನ:ಸ್ಥಾಾಪಿಸುವ ವಿಭಾಗದಲ್ಲಿ ಜಿಲ್ಲೆ ಪ್ರಶಂಸನೆಗೆ ಒಳಗಾಗಿದೆ. ಇದು ಜಿಲ್ಲೆಯ ಸಮಗ್ರ ಮತ್ತು ಸುಸ್ಥಿಿರ ಅಭಿವೃದ್ಧಿಿ, ನಾವೀನ್ಯತೆ-ಚಾಲಿತ ಆಡಳಿತಕ್ಕೆೆ ಜಿಲ್ಲೆಯ ಬದ್ಧತೆಯನ್ನು ಒತ್ತಿಿಹೇಳುತ್ತಿಿದೆ.
ನೀತಿ ಾರ್ ಸ್ಟೇಟ್ಸ್-ಸ್ಟೇಟ್ ಸಪೋರ್ಟ್ ಮಿಷನ್ ಯೋಜನೆಯು ಭಾರತದ ಅಭಿವೃದ್ಧಿಿ ಗುರಿಗಳನ್ನು ವೇಗಗೊಳಿಸಲು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ಜ್ಞಾನ ವಿನಿಮಯವನ್ನು ಉತ್ತೇಜಿಸುವ ಮೂಲಕ ಯಶಸ್ವಿಿ ಸ್ಥಳೀಯ ನಾವೀನ್ಯತೆಗಳನ್ನು ಗುರುತಿಸುವ ಮತ್ತು ಅಳೆಯುವ ಗುರಿಯನ್ನು ಹೊಂದಿದೆ. ಕಲಬುರಗಿ ಜಿಲ್ಲಾಧಿಕಾರಿ ಬಿ. ೌಜಿಯಾ ತರನ್ನುಮ್ ಅವರ ನಾಯಕತ್ವ ಮತ್ತು ಅವರ ತಂಡದ ಸಮರ್ಪಿತ ಪ್ರಯತ್ನಗಳು ಮಹತ್ವಾಾಕಾಂಕ್ಷೆಯ ಜಿಲ್ಲೆಗಳು ಮತ್ತು ಬ್ಲಾಾಕ್ಗಳ ಕಾರ್ಯಕ್ರಮದ ಅಡಿಯಲ್ಲಿ ಪರಿವರ್ತನಾತ್ಮಕ ಮತ್ತು ಸುಸ್ಥಿಿರ ಅಭಿವೃದ್ಧಿಿಯತ್ತ ಶ್ರಮಿಸುತ್ತಿಿರುವ ಇತರ ಜಿಲ್ಲೆಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ನೀತಿ ಆಯೋಗ ಪ್ರಶಂಸಿದೆ.

