ಸುದ್ದಿಮೂಲ ವಾರ್ತೆ ರಾಯಚೂರು, ನ.21:
ಜ್ಞಾನ ಯೋಗ, ಕರ್ಮದ ಜೊತೆಗೆ ಭಕ್ತಿಿ ಮಾರ್ಗದ ಮೂಲಕ ಜನಸಾಮಾನ್ಯರಿಗೆ ಭಗವಂತನನ್ನು ತೋರಿಸಿದ ಕಾಖಂಡಕಿಯ ಮಹಿಪತಿ ದಾಸರು ಮಹಾ ಮಹಿಮರಾಗಿದ್ದಾರೆ ಎಂದು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿಧರ ಕುಲಕರ್ಣಿ ಹೇಳಿದರು.
ಶುಕ್ರವಾರ ಸಂಜೆ ನಗರ ಬಯಲು ಆಂಜನೇಯ ದೇವಸ್ಥಾಾನದಲ್ಲಿ ನಡೆದ ಶ್ರೀ ಮಹಿಪತಿ ದಾಸರ ಮಧ್ಯಾಾರಾಧನೆಯ ಕಾರ್ಯಕ್ರಮದಲ್ಲಿ ಉಪನ್ಯಾಾಸ ನೀಡಿದರು. ಪುರಂದರ ದಾಸರ ಕಾಲದ ನಂತರ ಶ್ರೀ ವಿಜಯದಾಸರ ಕಾಲಘಟ್ಟದವರೆಗೆ ನಿಂತು ಹೋಗಿದ್ದ ಹರಿದಾಸ ಸಾಹಿತ್ಯವನ್ನು ಮಹಿಪತಿ ದಾಸರು ಪುನರ್ಜೀವನಗೊಳಿಸಿದರು.
ಬಿಜಾಪುರ ಸುಲ್ತಾಾನದ ಆದಿಲ್ ಶಾ ನ ಆಡಳಿತದಲ್ಲಿದ್ದ ಅರೆ ಹುಚ್ಚರಂತೆ ಅವಧೂತರಂತೆ ಕಾಣಿಸುತ್ತಿಿರುವ ಶಹನುಂಗಿ ಶಹನುಂಗ ಇವರ ಪ್ರಭಾವಕ್ಕೆೆ ಒಳಗಾಗಿ ವೈರಾಗ್ಯ ಜೀವನ ತಾಳಿದರು. ಇವರು ಉರ್ದು, ತೆಲುಗು, ಹಿಂದಿ, ಮರಾಠಿ, ಕನ್ನಡ ದಲ್ಲಿ ಸಂಕೀರ್ತನೆಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಾಲಯ ಕನ್ನಡ ಅಧ್ಯಯನ ವಿಭಾಗ ಮಹಿಪತಿ ದಾಸರ ಕೃತಿಗಳನ್ನು ಪ್ರಕಟಿಸಿದೆ 700ಕ್ಕೂ ಅಧಿಕ, ಮರಾಠಿ ಹಿಂದಿ ಭಾಷೆಗಳಲ್ಲಿ 300ಕ್ಕೂ ಅಧಿಕ ಕೃತಿಗಳು ಲಭ್ಯ ಇವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಬ್ರಾಾಹ್ಮಣ ಸಮಾಜದ ಮುಖಂಡ ಪ್ರಸನ್ನ ಆಲಂಪಲ್ಲಿ ಅವರು ಉದ್ಘಾಾಟಿಸಿ ಶ್ರೀ ಮಹಿಪತಿ ದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ. ಜನಸಾಮಾನ್ಯರಿಗೆ ಭಕ್ತಿಿ ಮಾರ್ಗವನ್ನು ತೋರಿಸಿದ್ದಾರೆ ಎಂದರು.
ಪತ್ರಕರ್ತ ಜಯ ಕುಮಾರ ದೇಸಾಯಿ ಕಾಡ್ಲೂರ ಮಾತನಾಡಿ, ಶ್ರೀ ಮಹಿಪತಿದಾಸರ ಸಾಹಿತ್ಯ ಎಲ್ಲ ಹರಿದಾಸರ ಸಾಹಿತ್ಯಕ್ಕಿಿಂತ ವಿಭಿನ್ನವಾಗಿದೆ. ಇವರು ತತ್ವಜ್ಞಾನಿಗಳು, ಅನುಭಾವಿಕರು, ಪಂಡಿತೋತ್ತಮರು ಎಲ್ಲಕ್ಕಿಿಂತ ಹೆಚ್ಚಾಾಗಿ ಜನಸಾಮಾನ್ಯರಿಗೆ ಭಕ್ತಿಿ ಮಾರ್ಗದ ಮುಖಾಂತರ ಸದ್ವಿಿಚಾರವನ್ನು ತಿಳಿಸಿದ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಂದಿರಾ ಬಾಯಿ ಸಂಗಮ್, ಕುಮಾರಿ ಅದಿತಿ ಕರ್ಣಂ ಅವರಿಂದ ದಾಸವಾಣಿ ಜರುಗಿತು.
ಈ ಸಂದರ್ಭದಲ್ಲಿ ನಾಗರತ್ನ ಕುಲಕರ್ಣಿ, ಪ್ರಕಾಶ್ ಹುಣಸಿಗಿ ಉಪಸ್ಥಿಿತರಿದ್ದರು.

