ಸುದ್ದಿಮೂಲ ವಾರ್ತೆ ಬಳ್ಳಾರಿ, ನ.29:
ಬಳ್ಳಾಾರಿ ನಗರದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಅವರ ನೂತನ ಪುತ್ಥಳಿಯ ಅನಾವರಣ ಶಾಸಕ ನಾರಾ ಭರತರೆಡ್ಡಿಿ ಅವರು ಜನವರಿ 3, 2026 ರಂದು ನಡೆಸಲು ಉದ್ದೇಶಿಸಿದ್ದು ಸ್ಥಳಕ್ಕೆೆ ಜಿಲ್ಲೆೆಯ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು ಶನಿವಾರ ಬೆಳಿಗ್ಗೆೆ ಭೇಟಿ ನೀಡಿ, ಕಾಂಗಾರಿಯನ್ನು ವೀಕ್ಷಣೆ ಮಾಡಿದ್ದಾಾರೆ.
ವಾಲ್ಮೀಕಿ ಪುತ್ಥಳಿ ಇರುವ ಸ್ಥಳದಲ್ಲಿ ಪೂಜೆ ಸಲ್ಲಿಸಿದ ವಾಲ್ಮೀಕಿ ನಾಯಕರ ಸಮಾಜದ ಮುಖಂಡರು, ಸಭೆ ನಡೆಸಿ ಜನವರಿ 03, 2026ರ ಪುತ್ಥಳಿಯ ಅನಾವರಣ, ಪುತ್ಥಳಿಯ ಸ್ವಾಾಗತ, ವೇದಿಕೆ ಕಾರ್ಯಕ್ರಮ, ಪ್ರಚಾರ ಇನ್ನಿಿತರೆಗಳ ಕುರಿತು ಚರ್ಚೆ ನಡೆಸಿ, ಈ ಕಾರ್ಯಕ್ರಮದ ಯಶಸ್ವಿಿಗಾಗಿ ವಿವಿಧ ಸಮಿತಿಗಳನ್ನು ರಚಿಸಿ, ನಗರದ 39 ವಾರ್ಡುಗಳು – ಆಸುಪಾಸಿನ ಗ್ರಾಾಮಗಳಿಗೆ ಭೇಟಿ ನೀಡಿ ಸಮಾಜದವರನ್ನು ಆಹ್ವಾಾನಿಸುವ ಕುರಿತು ಚರ್ಚೆ ನಡೆಸಲಾಯಿತು.
ಸಂಗನಕಲ್ಲು ವಿಜಯ್, ಹೊನ್ನೂರಪ್ಪ, ಲೋಕೇಶ್, ಟಿ.ಹೆಚ್. ಚರಣರಾಜ್ ಅವರು ಸಭೆಯ ನೇತೃತ್ವವಹಿಸಿದ್ದರು.
ಮಹರ್ಷಿ ಶ್ರೀ ವಾಲ್ಮೀಕಿ ಪುತ್ಥಳಿ ಅನಾವರಣ ; ಸಮಾಜದ ಮುಖಂಡರಿಂದ ಪೂರ್ವಭಾವಿ ಸಭೆ

