ಸುದ್ದಿಮೂಲ ವಾರ್ತೆ ಕೊಪ್ಪಳ, ನ.30:
ನಾಡಿನ ಬಡವರ, ಶೋಷಿತರ ನಾಡಿ ಮಿಡಿತ ಅರಿತ ಸರಕಾರವು ಬಡವರ ಬದುಕಿಗೆ ಆಶಾಕಿರಣವಾಗಿದೆ. ಚುನಾವಣೆಗೂ ಮುನ್ನ ನೀಡಿರುವ ಆಶ್ವಾಾಸನೆ ಪ್ರಕಾರ ಪಂಚ ಗ್ಯಾಾರಂಟಿ ಯೋಜನೆ ಜಾರಿಗೆ ತಂದಿದೆ. ವಿಶೇಷವಾಗಿ ಮಹಿಳೆಯರಿಗಾಗಿ ಹೆಚ್ಚಿಿನ ಆದ್ಯತೆ ನೀಡಿ, ಜನಪರ ಸರಕಾರ ಮತ್ತು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಕಲಾವಿದರಾದ ರಾಜ್ಯೋೋತ್ಸವ ಪ್ರಶಸ್ತಿಿ ಪುರಸ್ಕೃತ ಶರಣಪ್ಪ ವಡಿಗೇರಿ ಅವರು ಹೇಳಿದರು.
ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರ ಸಹಯೋಗದಲ್ಲಿ ಕುಷ್ಟಗಿ ತಾಲೂಕಿನ ತುಮರಿಕೊಪ್ಪ ಗ್ರಾಾಮದಲ್ಲಿ ಹಮ್ಮಿಿಕೊಂಡಿರುವ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆೆ ಕುಷ್ಟಗಿ ಕಲಾತಂಡದ ನೇತೃತ್ವವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮಕ್ಕೆೆ ಗ್ರಾಾಮ ಪಂಚಾಯತಿ ಅಧ್ಯಕ್ಷರಾದ ರೇಖಾ ಹನಮಂತ ಲಂಡೂರಿ ಅವರು ತಮಟೆ ಬಾರಿಸುವ ಮೂಲಕ ಚಾಲನೆ ನೀಡಿದರು.
ಅತಿಥಿಗಳಾಗಿ ಗ್ರಾಾಮದ ಗಣ್ಯರಾದ ರಂಗಪ್ಪ ಯಮನಪ್ಪ ಗೋತಗಿ, ದ್ಯಾಾಮಣ್ಣ ಲಂಡೂರಿ, ಹನಮಂತ ಅಡವಿಭಾವಿ ಅವರು ಭಾಗವಹಿಸಿದ್ದರು. ನಂತರ ಕಲಾತಂಡದಿಂದ ಸರಕಾರದ ಪಂಚ ಗ್ಯಾಾರಂಟಿ ಯೋಜನೆಗಳ ಮಹತ್ವ, ಆರೋಗ್ಯ, ಶಿಕ್ಷಣ ಕುರಿತು ವಿವಿಧ ಸನ್ನಿಿವೇಶಗಳ ಮೂಲಕ ಬೀದಿ ನಾಟಕ ಪ್ರದರ್ಶನ ನೀಡಿ ಜನ-ಮನ ರಂಜಿಸಿದರು.
ಕಲಾತಂಡದ ವೀರಯ್ಯ ಹಿರೇಮಠ ವಂದಿಸಿದರು. ಕಲಾತಂಡದಲ್ಲಿ ದಾವಲಸಾಬ ಅತ್ತಾಾರ, ಶರಣಯ್ಯ ಹಿರೇಮಠ, ಹೇಮಂತರಾಜ, ಭೀಮಪ್ಪ ಬನ್ನಿಿಗೋಳ, ರೇಣುಕಾ ಮಡಿವಾಳರ, ಮಂಜುಳಾ ಬೆಟಗೇರಿ ಕಲಾವಿದರು ಭಾಗವಹಿಸಿದ್ದರು.
ಯೋಜನೆಗಳ ಜಾಗೃತಿಗಾಗಿ ಬೀದಿ ನಾಟಕ ಪ್ರದರ್ಶನ

