ಸುದ್ದಿಮೂಲ ವಾರ್ತೆ ಗಂಗಾವತಿ, ನ.30:
ಪ್ರತಿ ವರ್ಷದಂತೆ ಈ ಬಾರಿಯು ಕೂಡ ಗಂಗಾವತಿ ತಾಲೂಕಿನ ಐತಿಹಾಸಕ ಪ್ರಸಿದ್ಧ ಅಂಜನಾದ್ರಿಿ ಪರ್ವತದಲ್ಲಿನ ಶ್ರೀಆಂಜನೇಯ ಸ್ವಾಾಮಿ ದೇವರ ಸನ್ನಿಿಧಿಯಲ್ಲಿ ಡಿ.3 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ವಿಶ್ವ ಬಜರಂಗ ದಳದ ಕ್ಷೇತ್ರ ಪ್ರಮುಖ ಸೂರ್ಯನಾರಾಯಣ ಹೇಳಿದರು.
ನಗರದ ಪತ್ರಿಿಕಾ ಭವನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದ ಆಮಂತ್ರಣ ಪತ್ರಿಿಕೆ ಬಿಡುಗಡೆಗೊಳಿಸಿ ಮಾತನಾಡಿ, ರಾಜ್ಯದ ನಾನಾ ಜಿಲ್ಲೆೆಗಳಿಂದ ಒಂದುವರೆ ಲಕ್ಷಕ್ಕೂ ಅಧಿಕ ಮಾಲಾಧಾರಿಗಳು ಅಂಜನಾದ್ರಿಿ ಬೆಟ್ಟಕ್ಕೆೆ ಆಗಮಿಸಿ, ಮಾಲೆಯನ್ನು ವಿಸರ್ಜನೆ ಮಾಡಿ, ಹನುಮನ ದರ್ಶನ ಪಡೆದುಕೊಳ್ಳಲಿದ್ದಾಾರೆ.
ಸಂಕೀರ್ತನಾ ಶೋಭಾಯಾತ್ರೆೆ : ಹನುಮಮಾಲಾ ವಿಸರ್ಜನೆಯ ಅಂಗವಾಗಿ ಗಂಗಾವತಿ ನಗರದಲ್ಲಿ ಡಿಸೆಂಬರ 03 ರಂದು ಬೃಹತ್ ಸಂಕೀರ್ತನಾ ಶೋಭಾಯಾತ್ರೆೆಯನ್ನು ವಿಶ್ವ ಹಿಂದು ಪರಿಷತ್, ಬಜರಂಗದಳದವತಿಯಿಂದ ಹಮ್ಮಿಿಕೊಳ್ಳಲಾಗಿದೆ. ಬೆಳಗ್ಗೆೆ 08 ಗಂಟೆಗೆ ನಗರದ ಎಪಿಎಂಸಿ ಆವರಣದ ಸಮುದಾಯ ಭವನದಿಂದ ಶೋಭಾಯಾತ್ರೆೆಯು ಆರಂಭವಾಗಲಿದ್ದು, ಪ್ರಮುಖ ಸರ್ಕಲ್ಗಳಲ್ಲಿ ಮೆರವಣಿಗೆಯನ್ನು ನಡೆಸಿ, ಡಾ.ಬಾಬು ಜಗಜೀವನರಾಮ ವೃತ್ತದಲ್ಲಿ ಧಾರ್ಮಿಕ ಸಭೆಯನ್ನು ನಡೆಸಲಾಗುವುದು ಎಂದರು.
ನಾನಾ ಭಾಗಗಳಿಂದ ಶೋಭಾಯಾತ್ರೆೆಯಲ್ಲಿ ಭಾಗವಹಿಸಲು ಆಗಮಿಸುವ ಮಾಲಾಧಾರಿಗಳಿಗೆ ರಾತ್ರಿಿಯ ಉಪಹಾರ ಹಾಗೂ ಮುಂಜಾನೆಯ ಉಪಹಾರದ ವ್ಯವಸ್ಥೆೆಯನ್ನು ಮಾಡಲಾಗುತ್ತಿಿದೆ. ಅಧಿಕ ಸಂಖ್ಯೆೆಯಲ್ಲಿ ಮಾಲಾಧಾರಿಗಳು ಸೇರಿದಂತೆ ಹಿಂದುಗಳು ಶೋಭಾಯಾತ್ರೆೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆೆಯನ್ನು ಯಶಸ್ವಿಿಗೊಳಿಸಬೇಕು ಎಂದು ಹೇಳಿದರು.
ಬಜರಂಗದಳದ ಪ್ರಾಾಂತ ಸಹ ಕಾರ್ಯದರ್ಶಿ ಪುಂಡಲೀಕ ದಳವಾಯಿ ಪ್ರಮುಖರಾದ ಬಸವರಾಜಗೌಡರು, ಮಲ್ಲಿಕಾರ್ಜುನ, ಉಗಮರಾಜ್ ಜೈನ್, ರಾಮಾಂಜನೇಯ, ವಿನಯ್ ಪಾಟೀಲ್ ಹಾಗೂ ಇತರರಿದ್ದರು.
ಡಿ.3ರಂದು ಅಂಜನಾದ್ರಿಿಯಲ್ಲಿ ಹನುಮಮಾಲಾ ವಿಸರ್ಜನೆ ಗಂಗಾವತಿಯಲ್ಲಿ ಸಂಕೀರ್ತನಾ ಶೋಭಾಯಾತ್ರೆ – ಸೂರ್ಯನಾರಾಯಣ

