ಸುದ್ದಿಮೂಲ ವಾರ್ತೆ ಗಂಗಾವತಿ, ಡಿ.01:
ಡಿ.2 ಮತ್ತು 3 ರಂದು ಗಂಗಾವತಿ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಿಯಲ್ಲಿ ನಡೆಯಲಿರುವ ಹನುಮಮಾಲ ವಿಸರ್ಜನಾ ಕಾರ್ಯಕ್ರಮಕ್ಕೆೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆೆಗಳಾಗದಂತೆ ನಮ್ಮ ಅಧಿಕಾರಿಗಳು ಎಲ್ಲಾಾ ಕೆಲಸ ಮತ್ತು ಕಾರ್ಯಗಳನ್ನು ಅಚ್ಚುಕಟ್ಟಾಾಗಿ ಮಾಡಿದ್ದಾಾರೆಂದು ಜಿಲ್ಲಾಾಧಿಕಾರಿ ಡಾ. ಸುರೇಶ ಬಿ. ಇಟ್ನಾಾಳ ಹೇಳಿದರು.
ಕಾರ್ಯಕ್ರಮದ ಅಂತಿಮ ಸಿದ್ದತೆಗಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾಾಡಳಿತ ವತಿಯಿಂದ ವಿವಿಧ ಸಮಿತಿಗಳನ್ನು ರಚಿಸಿ ಈ ಕಾರ್ಯಕ್ರಮ ಯಶಸ್ವಿಿಗಾಗಿ ಹಲವಾರು ದಿನಗಳಿಂದ ತಯಾರಿ ಮಾಡಲಾಗಿದೆ.
ಆಂಜನೇಯ ಜನ್ಮಸ್ಥಳ ಅಂಜನಾದ್ರಿಿಗೆ ಪ್ರತಿವರ್ಷದಂತೆ ಈ ವರ್ಷವು ಹೆಚ್ಚಿಿನ ಸಂಖ್ಯೆೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಅವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಡಿಸೆಂಬರ್ 2 ರಂದು ಪಾಕಿರ್ಂಗ್ ಸ್ಥಳಗಳಲ್ಲಿಯೇ ಅನ್ನ ಸಾಂಬಾರ ಊಟದ ವ್ಯವಸ್ಥೆೆ ಮಾಡಲಾಗಿರುತ್ತದೆ. ಡಿಸೆಂಬರ್ 3 ರಂದು ಬೆಳಿಗ್ಗೆೆಯಿಂದಲೇ ವೇದಪಾಠ ಶಾಲೆಯಲ್ಲಿ ಗೋಧಿ ಹುಗ್ಗಿಿ ಮತ್ತು ಅನ್ನಸಾಂಬರಿನ ಪ್ರಸಾದ ವ್ಯವಸ್ಥೆೆ ಇರಲಿದೆ ಎಂದರು.
ಈ ಬಾರಿ ಪ್ಲಾಾಸ್ಟಿಿಕ್ ನಿಷೇಧ ಮಾಡಿರುವುದರಿಂದ ಅವುಗಳನ್ನು ಚೆಕ್ಪೋಸ್ಟ್ಗಳಲ್ಲಿಯೆ ತೆಗೆದು ಹಾಕಲು ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದ್ದು, ಸಾರ್ವಜನಿಕರು ಪ್ಲಾಾಸ್ಟಿಿಕ್ ಬಳಸಿ ಎಲ್ಲೆೆಂದರಲ್ಲಿ ಬಿಸಾಕುವುದನ್ನು ಮಾಡಬಾರದು. ಸ್ನಾಾನದ ನಂತರ ಜನರು ಬಟ್ಟೆೆಗಳನ್ನು ನಿಗದಿಪಡಿಸಿದ ಸ್ಥಳಗಳಲ್ಲಿ ಹಾಕಬೇಕು. ಸಾರ್ವಜನಿಕರ ವಾಹನಗಳ ನಿಲುಗಡೆಗೆ ಸೂಕ್ತ ಪಾಕಿರ್ಂಗ್ ವ್ಯವಸ್ಥೆೆ ಮಾಡಲಾಗಿರುತ್ತದೆ. ಮಾಲಾಧಾರಿಗಳಿಗೆ ಸ್ನಾಾನ ಮತ್ತು ಕುಡಿಯುವ ನೀರಿನ ವ್ಯವಸ್ಥೆೆ ಮಾಡಲಾಗಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆಯಿಂದ, ಒಟ್ಟು 7 ವೈದ್ಯರ ತಂಡ ರಚಿಸಿದ್ದು, ಪಾದಗಟ್ಟಿಿ ಹತ್ತಿಿರ ಒಂದು, ಬೆಟ್ಟ ಹತ್ತುವಾಗ ಮಧ್ಯದಲ್ಲಿ ಒಂದು, ದೇವಸ್ಥಾಾನದ ಹತ್ತಿಿರ ಒಂದು ತಂಡ ಹಾಗೂ ಕೆಳಗೆ ಇಳಿಯುವಾಗ ಮಧ್ಯದಲ್ಲಿ ಒಂದು ಮತ್ತು ಕೆಳಗೆ ಒಂದು ತಂಡ, ವೇದ ಪಾಠ ಶಾಲೆ ಹತ್ತಿಿರ, ಪ್ರಾಾಥಮಿಕ ಆರೋಗ್ಯ ಕೇಂದ್ರದ ಹತ್ತಿಿರ ಹೀಗೆ ಒಂದೊಂದು ವೈದ್ಯರ ತಂಡವು ದಿನದ 24 ಗಂಟೆಗಳ ಕಾಲ ಸರತಿ ಪಾಳೆಯದಲ್ಲಿ ಕಾರ್ಯ ನಿರ್ವಹಿಸಲಿದ್ದು, 3 ಆ್ಯಂಬುಲೆನ್ಸ್ಗಳ ವ್ಯವಸ್ಥೆೆ ಸಹ ಮಾಡಲಾಗಿರುತ್ತದೆ ಎಂದು ಹೇಳಿದರು.
ಜನರಿಗೆ ವಿವಿಧ ಸ್ಥಳಗಳ ಬಗ್ಗೆೆ ಮಾಹಿತಿ ತಿಳಿಯಲು ಎಲ್ಲಾಾ ಕಡೆ ಬೋರ್ಡ್ಗಳನ್ನು ಹಾಕುವುದರ ಜೊತೆಗೆ ವಿವಿಧ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಭಕ್ತಾಾದಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಥಳಗಳ ಬಗ್ಗೆೆ ಮಾಹಿತಿ ನೀಡುವ ಉದ್ದೇಶದಿಂದ ಕೊಪ್ಪಳ ಜಿಲ್ಲಾಾ ಪೋಲಿಸ್ ಇಲಾಖೆ ವತಿಯಿಂದ ಠಿಠಿ://ಟ್ಝಟ್ಝಜ್ಚಿಿಛಿ.ಜಜಿಠ್ಠಿಚಿ.ಜಿಟ/್ಞ್ಠಞಞ್ಝ್ಟಟ್ಠಠಿಛಿಞ2025/ ವೆಬ್ಸೈಟ್ ಅನಾವರಣ ಮಾಡಲಾಗಿದ್ದು, ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ ಎಂದರು.
ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಅವರು ಮಾತನಾಡಿ ಕಾರ್ಯಕ್ರಮಕ್ಕೆೆ ಎಲ್ಲಾಾ ಕಡೆ ಭದ್ರತೆ ವ್ಯವಸ್ಥೆೆ ಮಾಡಲಾಗಿದೆ. ಪಾಕಿರ್ಂಗ್ ಸ್ಥಳಗಳು. ಬ್ಯಾಾರಿಕೇಡ್, ಸಿಸಿಟಿವಿ ಅಳವಡಿಸುವುದರ ಜೊತೆಗೆ ಹೆಚ್ಚಿಿ ನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ವಾಹನಗಳು ಗಂಗಾವತಿ ನಗರದ ಕಡೆ ಹೋಗದೆ, ಕಡೆ ಬಾಗಿಲು ಮತ್ತು ಮುನಿರಾಬಾದಿನಿಂದ ಬರುವ ವಾಹನಗಳು ಪಾರ್ಕಿಂಗ್ಗೆ ನಿಗದಿಪಡಿಸಿದ ಸ್ಥಳಗಳಲ್ಲಿ ನಿಲ್ಲಿಸಬೇಕು. ಜನರಿಗೆ ಕಾರ್ಯಕ್ರಮದ ಮಾಹಿತಿ ನೀಡಲು ಆ್ಯಪ್ ಲೋಕಾರ್ಪಣೆ ಮಾಡಲಾಗಿದೆ ಎಂದು ಹೇಳಿದರು.
ಜಿ.ಪಂ.ಸಿಇಓ ವರ್ಣಿತ್ ನೇಗಿ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ ಅವರು ಮಾತನಾಡಿ, ಒಂದು ವಾರದ ಹಿಂದೆ ಚಿಕ್ಕರಾಂಪೂರ ಮತ್ತು ಆನೆಗುಂದಿಯಲ್ಲಿ ಒಂದೊಂದು ಚಿರತೆಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಇಲ್ಲಿನ ಬೆಟ್ಟ ಮತ್ತು ಗುಡ್ಡಗಳಲ್ಲಿ ಚಿರತೆ ಮತ್ತು ಕರಡಿಗಳ ಆವಾಸ ಸ್ಥಾಾನ ಇರುವುದರಿಂದ ಹನುಮಮಾಲಾಧಾರಿಗಳು ಒಬ್ಬೊೊಬ್ಬರಾಗಿ ಬೆಟ್ಟ ಗುಡ್ಡಗಳ ಕಡೆಗೆ ಹೋಗಬಾರದು. ಈಗಾಗಲೇ ಮುಂಜಾಗ್ರತೆಯಾಗಿ ನಮ್ಮ ಇಲಾಖೆಯ ಸಿಬ್ಬಂದಿಗಳು ಎಲ್ಲಾಾ ಕಡೆ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಆರ್. ಹೇಮಂತಕುಮಾರ್, ಸಹಾಯಕ ಆಯುಕ್ತರಾದ ಕ್ಯಾಾ.ಮಹೇಶ್ ಮಾಲಗಿತ್ತಿಿ, ಸಮಾಜ ಕಲ್ಯಾಾಣ ಇಲಾಖೆಯ ಉಪನಿರ್ದೆಶಕರಾದ ಅಜ್ಜಪ್ಪ ಸೊಗಲದ, ಜಿಲ್ಲಾಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಅಧಿಕಾರಿ ಟಿ.ಲಿಂಗರಾಜು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೆಶಕರಾದ ನಾಗರಾಜ, ಜಿಲ್ಲಾಾ ನಗರಾಭಿವೃದ್ಧಿಿ ಕೋಶದ ಯೋಜನಾ ನಿರ್ದೆಶಕರಾದ ಮಂಜುನಾಥ ಗುಂಡೂರ್, ಗಂಗಾವತಿ ತಹಶಿಲ್ದಾಾರ ಯು. ನಾಗರಾಜ, ಕಾರಟಗಿ ತಹಶೀಲ್ದಾಾರ ವಿಶ್ವನಾಥ ಮುರಡಿ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿಿತರಿದ್ದರು.
ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ – ಡಾ.ಸುರೇಶ

