ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.02:
ಬಳ್ಳಾಾರಿ ಜಿಲ್ಲಾಾ ಸವಿತಾ ಸಮಾಜದ ನೂತನ ಜಿಲ್ಲಾಾಧ್ಯಕ್ಷರಾಗಿ ಎಂ. ನಾರಾಯಣಸ್ವಾಾಮಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾಾರೆ.
ಬಳ್ಳಾಾರಿಯ ಕೌಲ್ಬಜಾರ್ನಲ್ಲಿ ಇರುವ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್. ತಿಪ್ಪಣ್ಣ ಅವರು ನೂತನ ಜಿಲ್ಲಾಾಧ್ಯಕ್ಷರಿಗೆ ಅಧಿಕಾರ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.
ನೂತನ ಜಿಲ್ಲಾಾಧ್ಯಕ್ಷರಾದ ಎಂ. ನಾರಾಯಣಸ್ವಾಾಮಿ ಅವರು, ಸವಿತಾ ಸಮಾಜದ ಅಭಿವೃದ್ಧಿಿಗೆ ಶಕ್ತಿಿ ಮೀರಿ ಶ್ರಮಿಸುವೆ. ಜಿಲ್ಲೆೆ, ಹೋಬಳಿ, ತಾಲೂಕು ಮಟ್ಟದಲ್ಲಿ ಸಮಾಜವನ್ನು ಸಂಘಟಿಸಿ, ಬಲಪಡಿಸುವೆ ಎಂದರು.
ತಾಲ್ಲೂಕು ಅಧ್ಯಕ್ಷ ಆರ್.ಶೇಖಣ್ಣ, ನಗರ ಅಧ್ಯಕ್ಷ ಉಮೇಶ್, ಜಿಲ್ಲಾಾ ಮುಖಂಡರಾದ ಬಿ. ಜಾನಕಿರಾಂ, ಎಲ್. ರಾಮು, ಬಾಲಕೃಷ್ಣ, ವಿ. ವೆಂಕಟೇಶ್, ಎಂ. ದೇವಣ್ಣ, ಹೆಚ್. ನಾಗೇಶ್, ವೈ. ತಿಪ್ಪೇಸ್ವಾಾಮಿ, ವೈ. ಶಿವಕುಮಾರ್, ಎಂ. ಭಾಸ್ಕರ್, ಎಂ. ಅಶೋಕ್ಕುಮಾರ್, ರಾಮಕೃಷ್ಣ, ಎಂ. ಅಯ್ಯಪ್ಪ, ಹೆಚ್. ಹನುಮಂತರಾಯುಡು, ಎನ್. ಮಹಾಂತೇಶ್, ರಾಮಣ್ಣ, ಭೀಮ ತಾಳೂರು, ವೀರೇಂದ್ರ ಸಿರುಗುಪ್ಪ, ಸಣ್ಣ ತಿಮ್ಮಪ್ಪ, ಪಾಂಡುರಂಗಪ್ಪ, ಸಣ್ಣ ತಿಪ್ಪೇಸ್ವಾಾಮಿ, ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿ ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾಗಿ ಎಂ. ನಾರಾಯಣಸ್ವಾಾಮಿ ಅಧಿಕಾರ ಸ್ವೀಕಾರ

