ಸುದ್ದಿಮೂಲ ವಾರ್ತೆ ಹೊಸಪೇಟೆ, ನ.03:
ವಿಕಲಚೇತನರಿಗೆ ವಿಕಲಾಂಗತೆ ದೌರ್ಬಲ್ಯವಲ್ಲ. ಅವರು ದೈಹಿಕ ನ್ಯೂನತೆಯ ಜತೆಗೆ ಒಂದು ವಿಶೇಷ ಸಾಮಾರ್ಥ್ಯ ಶಕ್ತಿಿಯನ್ನು ಹೊಂದಿರುತ್ತಾಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಿಕೇರಿ ಹೇಳಿದರು.
ನಗರದ ಶ್ರೀವೆಂಕಟೇಶ್ವರ ಕಲ್ಯಾಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಕಾನೂನು ಸೇವಾ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಮತ್ತು ಕ್ರೀೆಡಾ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿಿರುವ ಸ್ವಯಂ ಸೇವಾ ಸಂಘಸಂಸ್ಥೆೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನ ದಿನಾಚರಣೆ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದ ಅವರು ವಿಕಲಾಂಗರು ದೈಹಿಕವಾಗಿ ನ್ಯೂನತೆಗಳನ್ನು ಹೊಂದಿರಬಹುದು ಆದರೆ ನಾಗರಿಕ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಿಗಳು ಕೊಳಕು ಮನಸ್ಥಿಿತಿಯಿಂದ ಮಾನಸಿಕ ವಿಕಲಾಂಗತೆಯನ್ನು ಹೆಚ್ಚಿಿಸಿಕೊಂಡಿದ್ದಾರೆ. ಅಂತಹ ಹೀನ ವ್ಯಕ್ತಿಿಗಳಿಗೆ ನಿಜವಾದ ವಿಕಲಚೇತನರು ಎನ್ನಬ ಹುದು.
ಸಾಮಾಜಿಕ ಪ್ರಗತಿಯನ್ನು ಸಾಧಿಸಲು ವಿಕಲಚೇತರನ್ನು ಒಳಗೊಂಡು ಸಮಾಜಗ ಳನ್ನು ರೂಪಿಸುವುದು 2025 ರ ವಿಶ್ವಸಂಸ್ಥೆೆಯ ಘೋಷವಾಕ್ಯವಾಗಿದೆ. ವಿಶೇಷ ಚೇತನರಿಗೂ ಕೂಡ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಿಕ ಸಾಮರ್ಥ್ಯವಿದೆ ಅವರನ್ನು ಪ್ರತ್ಯೇಕ ಎಂದು ಭಾವಿಸಿದೆ ಅವರನ್ನು ಒಳಗೊಂಡಂತೆ ಸಮಾಜದ ಪ್ರಗತಿಯಾಗಲಿ ಎಂಬುದು ವಿಶ್ವಸಂಸ್ಥೆೆ ಉದ್ದೇಶವಾಗಿದೆ. ವಿಶೇಷ ಚೇತ ನರು ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಕೌಶಲ್ಯವನ್ನು ಹೊಂದಿರು ತ್ತಾಾರೆ. ಅದನ್ನು ಅವರು ಗುರುತಿಸಿಕೊಳ್ಳುವುದರ ಮೂಲಕ ಸಮಾಜದಲ್ಲಿ ಸಾಧನೆಗೆ ಮುಂದಾಗಬೇಕು.ದೃಢವಾದ ಮನಸ್ಸು ಮತ್ತು ಛಲವಿದ್ದರೆ ಯಾವ ವ್ಯಕ್ತಿಿಯಾದರೂ ಸಾಧನೆ ಮಾಡಬಹುದು. ಸರ್ಕಾರದಿಂದ ವಿಕಲಚೇತನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿಕಲಚೇತನರ ಹಕ್ಕುಗಳು, ಘನತೆ ಮತ್ತು ಯೋಗಕ್ಷೇಮದ ಬಗ್ಗೆೆ ಜಾಗತಿಕವಾಗಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಈ ಸಂಧರ್ಭದಲ್ಲಿ ವಿಶ್ವ ವಿಕಲಚೇತನರ ಕ್ರೀೆಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯನಿರ್ವಾಹಕ ಕೆ.ತಿಮ್ಮಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಾಣಾಧಿ ಕಾರಿ ರಾಮಾಂಜಿನೇಯ, ಎಂಆರ್ಬ್ಲೂ, ಯುಆರ್ಡಬ್ಲೂ, ಮತ್ತು ವಿಆರ್ಡಬ್ಲೂ ತಾಲೂಕು ಕಾರ್ಯಕರ್ತರು, ವಿಕಲಚೇತನರ ಸಂಘ ಸಂಸ್ಥೆೆಗಳ ಪದಾಧಿಕಾರಿಗಳು ಸೇರಿದಂತೆ ವಿಶೇಷ ಚೇತನ ವಿದ್ಯಾಾರ್ಥಿಗಳು ಭಾಗವಹಿಸಿದ್ದರು.
ಕೆಟ್ಟ ಗುಣಗಳಿರುವ ಮಾನಸಿಕ ವಿಕಲಚೇತನರು ನಾಗರಿಕ ಸಮಾಜದಲ್ಲಿ ಹೆಚ್ಚಾಾಗಿದ್ದಾರೆ : ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

