ಸುದ್ದಿಮೂಲ ವಾರ್ತೆ ರಾಯಚೂರು , ಡಿ.09:
ಬೋಧನೆಯಲ್ಲಿನ ಕ್ರಿಿಯಾಶೀಲತೆ ಹೆಚ್ಚಿಿಸಿ ಸೃಜನಶೀಲತೆ ವಿಸ್ತರಿಸಲು ಹೆಚ್ಚೆೆಚ್ಚು ಸಹಪಠ್ಯ ಚಟುವಟಿಕೆಗಳಲ್ಲಿ ಶಿಕ್ಷಕರು ಪಾಲ್ಗೊೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ. ಡಿ. ಬಡಿಗೇರ ಹೇಳಿದರು.
ನಗರದ ಕೆಡಬ್ಲ್ಯೂ ಟಿ ಶಾಲೆಯಲ್ಲಿ ಶಿಕ್ಷಕರ ಕಲ್ಯಾಾಣ ನಿಧಿಯಿಂದ ರಾಯಚೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಹಮ್ಮಿಿಕೊಂಡಿದ್ದ ಶಿಕ್ಷಕರ ಸಹ ಪಠ್ಯಚಟುವಟಿಕೆ ಸ್ಪರ್ಧೆ ಉದ್ಘಾಾಟಿಸಿ ಮಾತನಾಡಿದರು.
ಶಿಕ್ಷಕರು ವಿವಿಧ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಒತ್ತಡ ನಿವಾರಣೆಯಾಗಿ ಜ್ಞಾನ ವಿಸ್ತಾಾರಗೊಳ್ಳುವುದು. ಹೊಸ ಕೌಶಲ್ಯದ ಬೋಧನೆಯಲ್ಲಿ ಪರಿಣಾಮಕಾರಿತ್ವ ಗಳಿಸಿಕೊಳ್ಳಬಹುದಾಗಿದೆ. ಆ ಮೂಲಕ ವಿದ್ಯಾಾರ್ಥಿಗಳಿಗೆ ಅನುಕರಣೆ ಮಾಡಲು ಮಾದರಿಯಾಗಬಹುದಾಗಿದೆ. ಜೀವನ ಮತ್ತು ವೃತ್ತಿಿಯಲ್ಲಿನ ಉತ್ಸಾಾಹ ವೃದ್ಧಿಿಯ ಅಗತ್ಯವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣ ಶಾವಂತಗೇರಿ ಮಾತನಾಡಿ, ನಿಮ್ಮನ್ನು ನೀವು ಕ್ರಿಿಯಾಶೀಲರನ್ನಾಾಗಿ ಮಾಡಿಕೊಳ್ಳಲು, ಪ್ರತಿಭೆ ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ. ಇದರಿಂದ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವುದರೊಂದಿಗೆ ಮಕ್ಕಳ ಕಲಿಕೆಗೆ ಪೂರಕವಾಗಲಿದೆ ಎಂದರು. ವಿವಿಧ ಸಂಘದ ಪದಾಧಿಕಾರಿಗಳು ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಿಗೊಳಿಸಿ ಎಂದು ಹೇಳಿದರು.
ಕಾರ್ಯಕ್ರಮದ ನೋಡಲ್ ಅಧಿಕಾರಿ ರಾಮಕೃಷ್ಣ ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಯುನೂಸ್ ಬಾಬು, ತಾಲ್ಲೂಕು ಪ್ರೌೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮೋಯಿನುಲ್ ಹಕ್, ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ ನಾಯಕ ಮಾತನಾಡಿದರು.
ಶಿಕ್ಷಕರಿಗಾಗಿ ಪ್ರಾಾಥಮಿಕ ಮತ್ತು ಪ್ರೌೌಢಶಾಲಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಭಕ್ತಿಿಗೀತೆಗಾಯನ, ಸಾಮಾನ್ಯ ಜ್ಞಾನ ಮತ್ತು ವಿಜ್ಞಾನ ರಸಪ್ರಶ್ನೆೆ, ಸ್ಥಳದಲ್ಲಿಯೇ ಚಿತ್ರಕಲೆ ಮತ್ತು ಪಾಠೋಪಕರಣಗಳ ತಯಾರಿಕೆ, ಪ್ರಬಂಧ, ಆಶುಭಾಷಣ ಸ್ಪರ್ಧೆ ನಡೆದವು. ವಿಜೇತರಿಗೆ ಪ್ರಶಸ್ತಿಿ ಪತ್ರ ಹಾಗೂ ನಗದು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಂಗಸ್ವಾಾಮಿ, ತಾಲೂಕು ದೈಹಿಕ ವಿಷಯ ಪರೀಕ್ಷಕ ಪರಶುರಾಮ್ ಹುಜರತಿ, ವಿವಿಧ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಯಂಕಪ್ಪ ಪಿರಂಗಿ, ದೇವೇಂದ್ರಪ್ಪ, ವಿನೋದ ಕುಮಾರ, ಗೂಳಪ್ಪ, ರೆಹಮಾನ, ಆನಂದ, ಶಂಕ್ರಪ್ಪ, ಮಹಮ್ಮದ್ ಇಸ್ಮಾಾಯಿಲ್, ಧನಲಕ್ಷ್ಮಿಿ , ಪಶ್ಚಿಿಮ ವಲಯ ಸಿಆರ್ಪಿ ಟಿ.ವೀರೇಶ್, ದಕ್ಷಿಣ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಿ ರಾವುತರಾವ್ ಬರೂರ, ಕೇಂದ್ರ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿಿ ಶಿವುಕುಮಾರ ಸೇರಿದಂತೆ ಇತರರು ಉಪಸ್ಥಿಿತರಿದ್ದರು.
ಶಿಕ್ಷಕರು ಸಹಪಠ್ಯ ಚಟುವಟಿಕೆ ಸ್ಪರ್ಧೆ ಉದ್ಘಾಟನೆ ಕ್ರಿಯಾಶೀಲತೆ ಬೋಧನೆಗೆ ಸ್ಪರ್ಧೆ ಪೂರಕ – ಕೆ.ಡಿ.ಬಡಿಗೇರ

