ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.09:
ಸಕ್ಷಮ ಪ್ರಾಾಧಿಕಾರದ ಅನುಮೋದನೆ ಪಡೆದ ವಿನ್ಯಾಾಸಗಳ, ಗ್ರಾಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆೆ 15ದಿನಗಳಲ್ಲಿ ಪರವಾನಿಗೆ ನೀಡಲಾಗುತ್ತಿಿದೆ ಎಂದು, ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು.
ಪರಿಷತ್ತಿಿನಲ್ಲಿ ಪದವೀಧರರ ಕ್ಷೇತ್ರದ ಸದಸ್ಯ ರಾಮೋಜಿಗೌಡ ಅವರ ಚುಕ್ಕೆೆ ಗುರುತಿನ ಪ್ರಶ್ನೆೆ ಸಂಖ್ಯೆೆ 29 (239)ರ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಇದರಿಂದಾಗಿ ಭೂ-ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಅಧಿಕೃತ ನಿವೇಶನ ಕಟ್ಟಡಗಳಿಗೆ ನಮೂನೆ -3 ಮತ್ತು ಸಕ್ಷಮ ಪ್ರಾಾಧಿಕಾರದ ಅನುಮೋದನೆ ಪಡೆಯದ ಸ್ವತ್ತುಗಳಿಗೆ ನಮೂನೆ 3-ಎ ನೀಡಲಾಗುತ್ತಿಿದೆ.
ಕಟ್ಟಡ ಪರವಾನಿಗೆ ತ್ವರಿತ ಪಾರದರ್ಶಕವಾಗಿ ನೀಡಲು ಎಸ್.ಬಿ.ಪಿ.ಎ.ಎಸ್./ ಯುಎಲ್ಎಮ್ಎಸ್ ತಂತ್ರಾಾಂಶ ಬಳಕೆ ಮಾಡಲಾಗುತ್ತಿಿದೆ. ಕಟ್ಟಡ ಪರವಾನಿಗೆ ಕೋರಿ ಆರ್ಕಿಟೆಕ್ಟ್ ಮುಖಾಂತರ ತಂತ್ರಾಾಂಶದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಕಟ್ಟಡ ಪರವಾನಿಗೆ ನೀಡಲಾಗುತ್ತಿಿದೆ. ತಂತ್ರಾಾಂಶ ಬಳಕೆ ಮಾಡುವಾಗ ತಾಂತ್ರಿಿಕ ಸಮಸ್ಯೆೆಗಳು ಉಂಟಾದಲ್ಲಿ ಕರ್ನಾಟಕ ಮುನ್ಸಿಿಪಲ್ ಡಾಟಾ ಸೊಸೈಟಿ ಮೂಲಕ ಪರಿಹರಿಸಲಾಗುತ್ತಿಿದೆ.ಖಾತಾ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆೆ ಪೌರಾಡಳಿತ ನಿರ್ದೇಶನಾಲಯದಿಂದ ಪ್ರಮಾಣಿತ ಕಾರ್ಯವಿಧಾನ ಹೊರಡಿಸಲಾಗಿದೆ.
ಸಕ್ಷಮ ಪ್ರಾಾಧಿಕಾರದ ಅನುಮೋದನೆ ಪಡೆದ ವಿನ್ಯಾಾಸಗಳ, ಗ್ರಾಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಪರವಾನಿಗೆಯನ್ನು ಈ ಹಿಂದಿನಂತೆಯೇ ಮುಂದುವರೆಸಲಾಗಿರುತ್ತದೆ. ಅನುಮೋದನೆ ಪಡೆಯದ/ಅನಧಿಕೃತ ಸ್ವತ್ತುಗಳಿಗೆ ನಮೂನೆ-3ಎ ನೀಡಿ, ತೆರಿಗೆ ವ್ಯಾಾಪ್ತಿಿಗೆ ಒಳಪಡಿಸಿ, ಆಸ್ತಿಿಕರ ವಸೂಲಿ ಮಾಡಲಾಗುತ್ತಿಿದೆ. ಆದರೆ, ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಅವಕಾಶವಿರುವುದಿಲ್ಲ ಎಂದು ಸಚಿವರು ತಿಳಿಸಿದರು.
ರಾಜ್ಯದ ನಗರ ಸ್ಥಳೀಯ ಸಂಸ್ಥೆೆಗಳಲ್ಲಿ ನಮೂನೆ -3 ವಿತರಿಸಲು ಕಾವೇರಿ 2.0 ತಂತ್ರಾಾಂಶವನ್ನು ಬಳಕೆಮಾಡಲಾಗುತ್ತಿಿದ್ದು, ವಿಶ್ವಾಾಸ ನಕ್ಷೆ ಜಾರಿಗೆ ತಂದಿರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನೋಂದಣಿ ಮತ್ತು ಮುದ್ರಾಾಂಕ ಇಲಾಖೆಯಿಂದ ಕಾವೇರಿ 2.0 ತಂತ್ರಾಾಂಶ ಮತ್ತು ಇ-ಆಸ್ತಿಿ ತಂತ್ರಾಾಂಶಗಳನ್ನು ಜೋಡಣೆ ಮಾಡಲಾಗಿದೆ. ಇದರಿಂದ ಹಕ್ಕು ವರ್ಗಾವಣೆ ವಿಧಾನವನ್ನು ಸರಳೀಕರಣಗೊಳಿಸಲಾಗಿದ್ದು, ಹಕ್ಕು ವರ್ಗಾವಣೆಯಂತೆ ಗಣಕೀಕೃತ ನಮೂನೆ-3ನ್ನು ಸುಲಭವಾಗಿ ಪಡೆಯಬಹುದಾಗಿದೆ. ಕಟ್ಟಡ ಪರವಾನಿಗೆ ಹಾಗೂ ನಮೂನೆ-3ನ್ನು ನೀಡುತ್ತಿಿರುವುದರಿಂದ ನಗರ ಸ್ಥಳೀಯ ಸಂಸ್ಥೆೆಗಳ ಆದಾಯಕ್ಕೆೆ ಕೊರತೆಯಾಗಿರುವುದಿಲ್ಲ ಎಂದು ಸಚಿವರು ತಿಳಿಸಿದರು.
ಬಿ ಖಾತಾಗೆ ಅವಕಾಶ:
ನಿವೇಶನ ಅಥವಾ ಕಟ್ಟಡಗಳಿಗೆ ಸಂಬಂಧಿಸಿದ ಕರಾರು ಹೊಂದಿದವರು ಸಹ ಬಿ ಖಾತಾ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದೆ. ಈ ಬಗ್ಗೆೆ ಕಾನೂನು ಸಲಹೆ ಪಡೆದುಕೊಳ್ಳಲಾಗುತ್ತಿಿದೆ ಎಂದು ಇದೆ ವೇಳೆ ಸಚಿವರು ಮಾಹಿತಿ ನೀಡಿದರು.
ಸಕ್ಷಮ ಪ್ರಾಾಧಿಕಾರದ ಅನುಮೋದನೆ ಪಡೆದ ವಿನ್ಯಾಾಸಗಳ, ಗ್ರಾಾಮಠಾಣಾ, ವಿವಿಧ ಯೋಜನೆಯಡಿ ಮಂಜೂರಾದ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆೆ ಪರವಾನಿಗೆ ನೀಡಲಾಗುತ್ತಿಿದ್ದು, ಇದರಿಂದಾಗಿ ಭೂ-ಪರಿವರ್ತನೆ ಹಾಗೂ ಕಟ್ಟಡ ನಿರ್ಮಾಣಕ್ಕೆೆ ಯಾವುದೇ ರೀತಿಯ ತೊಂದರೆಯಿಲ್ಲ ಎಂದು ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ತಿಳಿಸಿದರು.
15 ದಿನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ: ಸಚಿವ ರಹೀಂ ಖಾನ್

