ಸುದ್ದಿಮೂಲ ವಾರ್ತೆ ರಾಯಚೂರು, ಡಿ.09:
ಭಾರತ ಸರ್ಕಾರದ ಜಲಶಕ್ತಿಿ ಸಚಿವಾಲಯದ ಜಲಸಂಪನ್ಮೂಲ ಇಲಾಖೆ, ನದಿ ಅಭಿವೃದ್ಧಿಿ ಮತ್ತು ಗಂಗಾ ಪುನರುಜ್ಜೀವನ ಕೇಂದ್ರ ಬೆಂಗಳೂರಿನ ನೈಋತ್ಯ ಪ್ರದೇಶದ ಅಂತರ್ಜಲ ಮಂಡಳಿಯಿಂದ ಜಲಚರ ನಕ್ಷೆ, ಅಂತರ್ಜಲ-ಸಂಬಂಧಿತ ಸಮಸ್ಯೆೆಗಳು ಮತ್ತು ಅಂತರ್ಜಲ ನಿರ್ವಹಣೆ ಕುರಿತು 3ನೇ ಶ್ರೇೇಣಿ ತರಬೇತಿ ಕಾರ್ಯಕ್ರಮ ನಗರದ ಕೃಷಿ ಎಂಜಿನಿಯರಿಂಗ್ ಕಾಲೇಜಿನ ಸಿಲ್ವರ್ ಜುಬಿಲಿ ಸೆಮಿನಾರ್ ಹಾಲ್ನಲ್ಲಿ ಡಿಸೆಂಬರ್ 10ರ ಬೆಳಿಗ್ಗೆೆ 10 ಗಂಟೆಗೆ ಹಮ್ಮಿಿಕೊಳ್ಳಲಾಗಿದೆ.
ಬೆಂಗಳೂರಿನ ಸಿಜಿಡ್ಲೂಬಿ, ಎಸ್.ಡ್ಲೂಆರ್ ಪ್ರಾಾದೇಶಿಕ ನಿರ್ದೇಶಕ ಜಿ.ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಾಟಿಸಲಿದ್ದಾರೆ. ಯುಎಎಸ್ ಉಪಕುಲಪತಿ ಡಾ.ಹನುಮಂತಪ್ಪ, ಕಾಲೇಜ್ ಆ್ ಅಗ್ರಿಿಕಲ್ಚರಲ್ ಇಂಜಿನಿಯರಿಂಗ್ ಡೀನ್ ಡಾ.ಎಂ.ಎಸ್.ಅಯ್ಯನಗೌಡರು, ಕೃಷಿ ವಿಜ್ಞಾನ ವಿಶ್ವವಿದ್ಯಾಾಲಯದ ವಿಸ್ತರಣೆ ನಿರ್ದೇಶಕರಾದ ಎ.ಆರ್.ಕುರುಬರ್ ಅವರು ಉಪಸ್ಥಿಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

