ಸುದ್ದಿಮೂಲ ವಾರ್ತೆ ಬೆಳಗಾವಿ/ಬಳ್ಳಾರಿ, ಡಿ.11:
ವಿಜಯನಗರ ಜಿಲ್ಲೆೆಯ ಹಗರಿಬೊಮ್ಮನಹಳ್ಳಿಿ ತಾಲೂಕಿನ ತಂಬ್ರಹಳ್ಳಿಿ 2ನೇ ಹಂತದ ಏತ ನೀರಾವರಿ ಯೋಜನೆಯ 1400 ಎಕರೆ ಭೂಮಿಗೆ ನೀರುಣಿಸಲು ಪುನರ್ ಸರ್ವೇ ಆಗಿದ್ದು ತ್ವರಿತವಾಗಿ ಕಾಮಗಾರಿ ಕೈಗೆತ್ತಿಿಕೊಳ್ಳಬೇಕು ಎಂದು ವಿಜಯನಗರ – ಬಳ್ಳಾಾರಿ ಸ್ಥಳೀಯ ಸಂಸ್ಥೆೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾಾರೆ.
ಬೆಳಗಾವಿಯ ‘ಸುವರ್ಣ ಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾಾನ ಮತ್ತು ತಂತ್ರಜ್ಞಾಾನ ಸಚಿವ ಎನ್.ಎಸ್. ಬೋಸರಾಜು ಅವರಿಗೆ ಪ್ರಶ್ನೆೆ ಕೇಳಿರುವ ಶಾಸಕ ವೈ.ಎಂ. ಸತೀಶ್ ಅವರು, 1976ರಲ್ಲಿ ಪ್ರಾಾರಂಭವಾಗಿರುವ ತಂಬ್ರಹಳ್ಳಿಿ ಏತ ನೀರಾವರಿ ಯೋಜನೆ 3000 ಎಕರೆ ಭೂಮಿಗೆ ನೀರುಣಿಸುವ ಯೋಜನೆ ಆಗಿತ್ತು. ಆದರೆ, ಈವರೆಗೆ 1400 ಎಕರೆ ಭೂಮಿಗೆ ಈ ವರೆಗೆ ನೀರುಣಿಸುವ ಕೆಲಸ ಆಗಿಲ್ಲ. ಸರ್ಕಾರ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದರು.
ಆಗ, ಸಚಿವ ಎನ್.ಎಸ್. ಬೋಸರಾಜು ಅವರು, ತಂಬ್ರಹಳ್ಳಿಿ 2ನೇ ಹಂತದ ಏತ ನೀರಾವರಿ ಯೋಜನೆ ಪುನರುಜ್ಜೀವನಗೊಳಿಸಲು ವಿಶೇಷ ಘಟಕ ಯೋಜನೆ ಅಡಿಯಲ್ಲಿ ರೂ. 2.5 ಕೋಟಿ ಹಾಗೂ ಏತ ನೀರಾವರಿ ಯೋಜನೆ ಅಡಿಯಲ್ಲಿ ರೂ. 1.75 ಅನುದಾನ ನೀಡಲಾಗಿದೆ. ಪ್ರಸ್ತುತ ಈ ಯೋಜನೆ ವ್ಯಾಾಪ್ತಿಿಯ 1400 ಎಕರೆ ಭೂಮಿಯಲ್ಲಿ ಮನೆಗಳು, ಎಪಿಎಂಸಿ ಇನ್ನಿಿತರೆ ಕಟ್ಟಡಗಳು ನಿರ್ಮಾಣ ಆಗಿರುವ ಕಾರಣ ನೀರಾವರಿ ಪ್ರದೇಶವು ಕಡಿಮೆಯಾಗಿದೆ. ಬಾಕಿ ನೀರುಣಿಸುವ ಪ್ರದೇಶದ ತಾಂತ್ರಿಿಕ ಹಾಗೂ ಇನ್ನಿಿತರೆ ವಿಷಯಗಳನ್ನು ಆಧರಿಸಿದ ಯೋಜನೆ ಪುನರ್ ರೂಪಿಸಲಾಗುತ್ತದೆ ಎಂದರು.
ಅಲ್ಲದೇ, ಈ ಯೋಜನೆಯ ವ್ಯಾಾಪ್ತಿಿಯಲ್ಲಿ ಶಿಗೇನಹಳ್ಳಿಿ 1, 2, ಮತ್ತು 3, ತಂಬ್ರಹಳ್ಳಿಿ, ತಂಬ್ರಹಳ್ಳಿಿ ಎಕ್ಸ್ಟೆನ್ಶನ್ ಪ್ರದೇಶ, ಕೃಷ್ಣಾಾಪುರ, ಚಿಲಗೋಡು ಇನ್ನಿಿತರೆ ಪ್ರದೇಶಗಳು ಸೇರಿವೆ. ಈ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನಿಿಸಲಾಗುತ್ತದೆ ಎಂಧು ಉತ್ತರಿಸಿದರು.
ಆಗ, ವೈ.ಎಂ. ಸತೀಶ್ ಅವರು, ಮೂರುವರೆ ವರ್ಷಗಳ ಹಿಂದೆ ಇದೇ ಪ್ರಶ್ನೆೆಗಳನ್ನು ಸದನದಲ್ಲಿ ಕೇಳಿದ್ದೆೆ. ಆಗ, ಸಚಿವರಾಗಿದ್ದ ಮಾಧುಸ್ವಾಾಮಿ ಅವರು, ಯೋಜನೆಯ ಪುನರ್ ಸರ್ವೇಗೆ ಆದೇಶ ನೀಡಿದ್ದರು. ಈ ಯೋಜನೆಯ ಪುನರ್ ಸರ್ವೇ ಪೂರ್ಣಗೊಂಡಿದೆ. ಕಾರಣ ತ್ವರಿತವಾಗಿ ಕಾಮಗಾರಿ ಕೈಗೆತ್ತಿಿಕೊಂಡು ರೈತರಿಗೆ ನೆರವಾಗಿ. ಕೃಷಿ ಭೂಮಿಗೆ ನೀರುಣಿಸುವ ಕೆಲಸವಾಗಲಿ ಎಂದು ಅವರು ಕೋರಿದರು.
ಸಚಿವ ಎನ್.ಎಸ್. ಬೋಸರಾಜ್ ಅವರು, ಹಣದ ಖರ್ಚಿನ ಲೆಕ್ಕಾಾಚಾರ ಹಾಕಿ ಹೆಚ್ಚಿಿನ ಹಣದ ಅಗತ್ಯವಿದ್ದಲ್ಲಿ ಬಜೆಟ್ನಲ್ಲಿ ಈ ವಿಷಯವನ್ನು ಸೇರ್ಪಡೆ ಮಾಡಿ, ಅನುದಾನ ನೀಡಲಾಗುತ್ತದೆ ಎಂದು ಉತ್ತರಿಸಿದರು.
ತಂಬ್ರಹಳ್ಳಿ 2ನೇ ಹಂತದ ಏತ ನೀರಾವರಿ ಯೋಜನೆ ಜಾರಿಗೆ ವೈ.ಎಂ. ಸತೀಶ್ ಆಗ್ರಹ

