ಸುದ್ದಿಮೂಲ ವಾರ್ತೆ ರಾಯಚೂರು , ಡಿ.15:
ನಗರದ ಬಸವ ಕೇಂದ್ರದಲ್ಲಿ ಲಿಂಗೈಕ್ಯರಾದ ಇಂಗಳೇಶ್ವರದ ವಚನ ಶಿಲಾ ಮಂಟಪ ವಿರಕ್ತಮಠದ ಪರಮಪೂಜ್ಯ ಚನ್ನಬಸವ ಸ್ವಾಾಮಿಗಳವರ ಸ್ಮರಣಾರ್ಥ ನುಡಿ ನಮನ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತುಘಿ.
ಹಿರಿಯರಾದ ಗಿರಿಜಾ ಶಂಕರ ಮಾತನಾಡಿ, ಚನ್ನಬಸವ ಸ್ವಾಾಮಿಗಳು ಮಹಾನ್ ಸಾಧಕರಾಗಿದ್ದು ಬಸವ ತತ್ವಕ್ಕಾಾಗಿ ಜೀವನವನ್ನೆೆ ಮುಡುಪಾಗಿಟ್ಟರು ಎಂದು ಸ್ಮರಿಸಿದರು.
ಬಸವ ತತ್ವ ಪ್ರಚಾರಕ್ಕಾಾಗಿ ಕಾಶ್ಮೀರದಿಂದ ಕನ್ಯಾಾಕುಮಾರಿವರೆಗೆ, ಉಳವಿಯಿಂದ ಬಸವ ಕಲ್ಯಾಾಣದವರೆಗೆ ಬಸವಕಲ್ಯಾಾಣದಿಂದ ಬಸವನ ಬಾಗೇವಾಡಿವರೆಗೆ ಹೀಗೆ ಅನೇಕ ಕಡೆ ಭಕ್ತ ಸಮೂಹದೊಂದಿಗೆ ಪಾದಯಾತ್ರೆೆ ಕೈಕೊಂಡು ಬಸವ ತತ್ವ ಪ್ರಚಾರ ಮಾಡಿದ ಶ್ರೇೇಯಸ್ಸು ಇವರಿಗೆ ಸಲ್ಲುತ್ತದೆ ಎಂದರು.
ಜಯಶ್ರೀ ಮಹಾಜನಶೆಟ್ಟಿಿ ಅವರು ಮಾದರ ಚೆನ್ನಯ್ಯ ಶರಣರ ಕುರಿತು ಮಾತನಾಡಿದರು. ಕೇಂದ್ರದ ಗೌರಧ್ಯಕ್ಷ ಹರವಿ ನಾಗನಗೌಡ ಅಧ್ಯಕ್ಷ ರಾಚನಗೌಡ ಕೋಳೂರು , ಮಹಾದೇವಪ್ಪ ಏಗನೂರು, ನರಸಪ್ಪ ಪತೇಪುರ, ಮಲ್ಲಿಕಾರ್ಜುನ ಗುಡಿಮನಿ, ಅನ್ನಪೂರ್ಣ ಹರವಿ, ವನಜ ಗಿರಿಜಾ ಶಂಕರ, ಸುಪ್ರಿಿಯಾ ಪಾಲ್ಗೊೊಂಡಿದ್ದರು.
ಪೂಜ್ಯ ಚನ್ನಬಸವ ಸ್ವಾಮಿಗಳವರಿಗೆ ನುಡಿನಮನ

