ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.15
ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಾಮ ಪಂಚಾಯತಿ ನೌಕರರ ಸಂಘಟನೆ ಯಿಂದ ದೇವದುರ್ಗ ಹಾಗೂ ಅರಕೇರಾ ತಾಲ್ಲೂಕಿನ 33 ಗ್ರಾಾಮ ಪಂಚಾಯತಿ ಗಳಲ್ಲಿ ಕೆಲಸ ಮಾಡುತ್ತಿಿರುವ ಪಂಚಾಯತಿ ನೌಕರರ ಹಿಂದಿನ ಬಾಕಿ ವೇತನ ಕೊಡಬೇಕು ಎ್ಂಚದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಕೊಟ್ಟು ಒತ್ತಾಾಯ ಮಾಡಿದರು,
ಎರಡು ತಾಲೂಕಿನಲ್ಲಿ ಬಲ್ ಕಲೆಕ್ಟರ್ ಗಳು,ನೀರು ಸಿಬ್ಬಂದಿ ಯವರು ದಿನಾಲು ಬೆಳಿಗ್ಗೆೆ 7 ಗಂಟೆಯಿಂದ 10 ಗಂಟೆ ವರೆಗೆ ಮೂರು ತಾಸು ನೀರಿನ ತೆರಿಗೆ,ಆಸ್ತಿಿ ತೆರಿಗೆ, ಮತ್ತು ವ್ಯಾಾಪಾ ತೆರಿಗೆ ಸಂಗ್ರಹ ಮಾಡುತ್ತಿಿದ್ದಾರೆ 33 ಪಂಚಾಯತಿ ಗಳಲ್ಲಿ ಅಂದಾಜು 20 ಲಕ್ಷ ರೂಗಳಷ್ಟು ತೆರಿಗೆ ಸಂಗ್ರಹ ವಾಗಿರಬಹುದು ,ಈ ಸಂಗ್ರಹದ ಹಣದಲ್ಲಿ ನಮ್ಮ ಪಂಚಾಯತಿ ನೌಕರರಿಗೆ ಶೇಕಡಾ 70 ರಷ್ಟು ಹಣ ವೇತನಕ್ಕೆೆ ಮೀಸಲಿಡಬೇಕು ,ಜೊತೆಗೆ ಇಎ್ ಎಂ ಎಸ್ ಆಗಲಾರದ ಮುಂಚೆ ಬಾಕಿ ಇರುವ ವೇತನ ಕೊಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಾಯಿಸಿದರು.
ಶೇಕಡಾ 70 ರಷ್ಟು ಪಂಚಾಯತಿ ನೌಕರರಿಗೆ ತೆರಿಗೆಯಲ್ಲಿ ಕೊಡಬೇಕು ಎಂದು ಜಿಲ್ಲಾ ಪಂಚಾಯತ ಅಧಿಕಾರಿಗಳ ಆದೇಶ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ಹೊನ್ನಪ್ಪ ನಾಯಕ ,ಕಾರ್ಯದರ್ಶಿ ಪಾಂಡುರಂಗ ನಾಯಕ; ಖಜಾಂಚಿ ಪಂಚಯ್ಯ ,ಉಪಾಧ್ಯಕ್ಷರಾದ ಶಿವರಾಜ ಮಂದಕಲ್,ಮರೆಪ್ಪ,ಕಾಸಿಲಿಂಗ,ಸಿಐಟಿಯು ಸಂಚಾಲಕ ಗಿರಿಯಪ್ಪ ಪೂಜಾರಿ ಇದ್ದರು.
ಗ್ರಾಮ ಪಂಚಾಯತಿ ನೌಕರರ ಬಾಕಿ ವೇತನಕ್ಕೆ ಸಿಐಟಿಯು ಒತ್ತಾಯ

