ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ಪರವಾನಗಿ ಭೂ ಮಾಪಕರನ್ನು ಖಾಯಂಗೊಳಿಸುವುದು ಅಸಾಧ್ಯ. ಸರ್ವೇ ಇಲಾಖೆಯಲ್ಲಿ ಖಾಲಿ ಹುದ್ದೆಗಳೇ ಇಲ್ಲದ ಮೇಲೆ ಗುತ್ತಿಿಗೆ ನೌಕರರನ್ನು ಖಾಯಂ ಮಾಡುವುದು ಹೇಗೆ ಎಂದು ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಿಸಿದರು.
ಮಂಗಳವಾರ ವಿಧಾನ ಪರಿಷತ್ತಿಿನಲ್ಲಿ ಸದಸ್ಯರಾದ ಶಿವಕುಮಾರ್ ಕೆ. ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಪರವಾನಗಿ ಭೂ ಮಾಪಕರನ್ನು ಖಾಲಿ ಹುದ್ದೆಗಳನ್ನು ತುಂಬಿಸುವುದಕ್ಕಾಾಗಿ ಸರ್ಕಾರ ನೇಮಕ ಮಾಡಿಲ್ಲ. ಬದಲಾಗಿ ಗುತ್ತಿಿಗೆ ಆಧಾರದಲ್ಲಿ ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಖಾಯಂ ಮಾಡುವ ಬದಲು ಅವರ ಕಲ್ಯಾಾಣಕ್ಕೆೆ ಹಾಗೂ ಘನತೆಯ ಜೀವನಕ್ಕೆೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಅಸಲಿಗೆ ಇಲಾಖೆಯಲ್ಲಿ 750 ಸರ್ಕಾರಿ ಹುದ್ದೆ ಖಾಲಿ ಇದೆ. ಆದರೆ, ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಏಕೆಂದರೆ ನಾವು ಗುತ್ತಿಿಗೆ ನೌಕರರನ್ನು ಖಾಯಂ ಮಾಡಲು ಮುಂದಾದರೆ ತುಂಬಾ ಪ್ರಚಲಿತದಲ್ಲಿರುವ ಉಮಾದೇವಿ ಪ್ರಕರಣ ಎದುರಾಗುತ್ತದೆ. ಈ ಪ್ರಕರಣದಲ್ಲಿ ಗುತ್ತಿಿಗೆ ನೌಕರರನ್ನು ಖಾಯಂಗೊಳಿಸಲು ಅವಕಾಶ ಇಲ್ಲ ಎಂಬ ಸುಪ್ರೀೀಂ ಕೋರ್ಟ್ ತೀರ್ಪು ಅಡ್ಡ ಬರುತ್ತದೆ. ಇದಲ್ಲದೆ, ಈ ಹಿಂದೆ ಪರವಾನಗಿ ಭೂ ಮಾಪಕರು ತಮ್ಮನ್ನು ಖಾಯಂಗೊಳಿಸುವಂತೆ ಕೆಐಟಿ ಯಲ್ಲಿ ಅರ್ಜಿ ಹಾಕಿದ್ದರು. ವಾದ-ವಿವಾದ ಆಲಿಸಿದ ಕೆಐಟಿ ಸಹ ಖಾಯಂಗೊಳಿಸಲು ಬರೋದಿಲ್ಲ ಎಂದು ಆ ಮನವಿಯನ್ನೇ ತಿರಸ್ಕಾಾರ ಮಾಡಿದೆ. ಹೀಗಾಗಿ ಪರವಾನಗಿ ಭೂ ಮಾಪಕರನ್ನು ಖಾಯಂ ನೌಕರರಾಗಿ ನೇಮಕ ಮಾಡುವುದು ಕಾನೂನಿನ ಅಡಿಯಲ್ಲಿ ಅಸಾಧ್ಯ ಎಂದು ವಿವರಿಸಿದರು.
ಸರ್ಕಾರಿ ಕೆಲಸ ಮಾಡಿದ್ರೆೆ ಪರವಾನಗಿ ನೌಕರರಿಗೂ ಸಂಭಾವನೆ ಸಿಗಬೇಕು ಎಂದು ನಿರ್ಧಾರ ಮಾಡಿದ್ದು ಸಹ ನಾವೆ. ಮೊದಲು ಇದಕ್ಕೆೆ ಪ್ರಾಾವಿಷನ್ ಇರಲಿಲ್ಲ, ಅವರು ತಮ್ಮ ಕೆಲಸವನ್ನು ಉಚಿತವಾಗಿ ಮಾಡಬೇಕಿತ್ತು. ಆದರೆ, ನಾನು ಕಳೆದ ಏಪ್ರಿಿಲ್ನಲ್ಲಿ ಲೆಕ್ಕಹಾಕಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಒಂದು ಲಕ್ಷದ ವರೆಗೆ ಹಣ ನೀಡಿದ್ದೇನೆ ಎಂದು ತಿಳಿಸಿದರು.
ಬಾಂದ್ ಜವಾನರ ಬಗ್ಗೆೆಯೂ ಮಾತನಾಡಿದ ಸಚಿವರು, ಬಾಂದ್ ಜವಾನರೆಂದರೆ ಹಿಂದನ ಕಾಲದಲ್ಲಿ ಸರ್ವೇಯರ್ ಹಿಂದೆ ಸರ್ವೇ ಸಾಮಗ್ರಿಿಗಳನ್ನು ಎತ್ತಿಿಕೊಂಡು ಓಡಾಡುವವರು. ಇದು ಒಪ್ಪುುವಂತಹ ಘನತೆಯ ಕೆಲಸ ಅಲ್ಲ. ಕಾಲ ಬದಲಾದಂತೆ ಎಲ್ಲರೂ ಸ್ವಾಾಭಿಮಾನದಿಂದ ಬದುಕುವ ವಾತಾವರಣ ನಿರ್ಮಾಣ ಮಾಡಬೇಕು. ಯಾರೂ ಯಾರಿಗೂ ಜವಾನರಾಗಿ ಬದುಕಬಾರದು. ಆ ಕೆಲಸದ ಹೆಸರೇ ಜವಾನ ಅಂತ, ಇಲ್ಲಿ ಯಾರೂ ಜವಾನರಾಗಿ ಬ್ಯಾಾಗು ಹೊತ್ಕೋೋಂಡು ಬಾಗಿಲು ಕಾಯೋ ಜವಾನತನ ಸರಿಯಲ್ಲ. ಹೀಗಾಗಿಯೇ ನಾವು ಇಂದು ಎಲ್ಲಾ ಸರ್ವೇಯರ್ಗಳಿಗೆ ಆಧುನಿಕ ತಂತ್ರಜ್ಞಾನ ನಿರ್ಮಿತ ರೋವರ್ ನೀಡುತ್ತಿಿದ್ದೇವೆ. ಇದು ಡಿಜಿಟಲ್ ಸರ್ವೇ ಯಂತ್ರೋೋಪಕರಣವಾಗಿದ್ದು, ಸರ್ವೇ ಕೆಲಸ ಮಾಡುವವರಿಗೂ ಘನತೆ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತಿನಲ್ಲಿ ಶಿವಕುಮಾರ್ ಕೆ. ಅವರ ಪ್ರಶ್ನೆಗೆ ಸಚಿವರ ಉತ್ತರ ಪರವಾನಗಿ ಭೂ ಮಾಪಕರ ಖಾಯಂ ಅಸಾಧ್ಯ: ಕೃಷ್ಣ ಬೈರೇಗೌಡ

