ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.18:
ನ್ಯಾಾಷನಲ್ ಹೆರಾಲ್ಡ್ (ಯಂಗ್ ಇಂಡಿಯಾ) ಪ್ರಕರಣದ ಕುರಿತು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಪ್ರಕರಣ ದಾಖಲಿಸಿದನ್ನು ಖಂಡಿಸಿ ಜಿಲ್ಲಾ ಕಾಂಗ್ರೆೆಸ್ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆೆಸ್ ಮುಖಂಡರು, ಕಾರ್ಯಕರ್ತರು ಕಾಂಗ್ರೆೆಸ್ ಕಚೇರಿಯಿಂದ ಬಿಜೆಪಿ ಜಿಲ್ಲಾ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಬಿಜೆಪಿ ಕಚೇರಿ ಮುತ್ತಿಿಗೆ ಹಾಕಲು ಯತ್ನಿಿಸಿದರು. ಈ ವೇಳೆ ಕಾಂಗ್ರೆೆಸ್ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಪ್ರತಿಭಟನೆಯಲ್ಲಿ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಜೆಸ್ಕಾಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಜಿಡಿಎ ಅಧ್ಯಕ್ಷ ಮಜರ ಆಲಂ ಖಾನ, ಕೆಪಿಸಿಸಿ ಉಪಾಧ್ಯಕ್ಷ ಲಾಲ ಅಹ್ಮದ ಬಾಂಬೆ ಸೇಠ, ಯುವ ಅಧ್ಯಕ್ಷ ಶಕೀಲ ಸರಡಗಿ, ಮಹಿಳಾ ಅಧ್ಯಕ್ಷೆ ರೇಣುಕಾ ಸಿಂಗೆ, ರಾಜಗೋಪಾಲ ರೆಡ್ಡಿಿ, ರೇವು ನಾಯಕ ಬೆಳಮಗಿ, ಸುಭಾಷ ರಾಠೋಡ, ಭೀಮರಾವ ಟಿಟಿ, ಶಿವಾನಂದ ಹೊನಗುಂಟಿ, ಸುನೀಲ್ ಮಾನ್ಪಡೆ,
ಪರಶುರಾಮ ನಾಟೀಕಾರ, ಸಂತೋಷ ಪಾಟೀಲ ಡನ್ನೂರ, ಚಂದ್ರಿಿಕಾ ಪರಮೇಶ್ವರ, ಈರಣ್ಣ ಝಳಕಿ, ರಾಜೀವ ಜಾನೆ, ಕಿಶೋರ ಗಾಯಕವಾಡ, ಕಾರ್ತಿಕ ನಾಟಿಕಾರ ಸೇರಿದಂತೆ ಅನೇಕ ಕಾಂಗ್ರೆೆಸ ಕಾರ್ಯಕರ್ತರು ಭಾಗವಹಿಸಿದ್ದರು.
ಸೋನಿಯಾ ಗಾಂಧಿ, ರಾಹುಲ್ ವಿರುದ್ದ ಪ್ರಕರಣ: ಕಾಂಗ್ರೆಸ್ನಿಂದ ಬಿಜೆಪಿ ಕಚೇರಿ ಮುತ್ತಿಗೆ ಯತ್ನಿಸಿ ಪ್ರತಿಭಟನೆ

