ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.21
ರಸ್ತೆೆ ಸುರಕ್ಷಿತಾ ನಿಯಮಗಳನ್ನು ಪಾಲಿಸದ ಖಾಸಗಿ ಶಾಲೆಗಳ 5 ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆೆ ಪಡೆದುಕೊಂಡಿದ್ದಾಾರೆ.
ನಗರದ ಅಕ್ಷರ ಸ್ಮಾಾರ್ಟ್ ಶಾಲೆಯ 2 ವಾಹನ, ಅರಗಿನಮರದ ವೆಂಕಟೇಶ್ವರ ಶಾಲೆಯ 2 ವಾಹನ, ಇಂದಿರಾಪ್ರಿಿಯದರ್ಶಿನಿಯ ಶಾಲೆಯ 1 ವಾಹನಗಳನ್ನು ಜಪ್ತಿಿ ಮಾಡಲಾಗಿದೆ. ಎಂಡಿಎನ್ ಪ್ಯೂೂಚರ್ ಶಾಲೆ, ಅರಗಿನಮರದ ಜ್ಞಾಾನಜ್ಯೋೋತಿ ಸೇರಿದಂತೆ ವಿವಿಧ ಶಾಲೆಗಳ 9 ವಾಹನಗಳ ವಿರುದ್ಧ ದೂರು ದಾಖಲಿಸಿದ್ದಾಾರೆ.
ನೊಂದಣಿ ಪತ್ರ, ವಾಹನದ ವಿಮೆ, ಹೊಗೆ ಪ್ರಮಾಣ ಪತ್ರ, ವಾಹನ ಪರವಾನಿಗೆ, ಚಾಲನಾ ಪರವಾನಿಗೆ, ಅಗ್ನಿಿಶಾಮಕ ನಂದಕ, ತುರ್ತು ಬಾಗಿಲು, ಪ್ಯಾಾನಿಕ್ ಬಟನ್, ಪ್ರಥಮ ಚಿಕಿತ್ಸಾಾ ಪೆಟ್ಟಿಿಗೆ, ಸಂಚರಿಸುವ ಮಕ್ಕಳ ವಿವರ, ಚಾಲಕರ ಸಮವಸ ಸೇರಿದಂತೆ ಇನ್ನಿಿತರ ನಿಯಮಗಳನ್ನು ಪಾಲಿಸದ ಶಾಲಾ ವಾಹನಗಳ ವಿರುದ್ಧ ಮಕ್ಕಳ ಹಿತರಕ್ಷಣೆಗಾಗಿ ಕಠಿಣಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಈ ಬಗ್ಗೆೆ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ರಾಕೇಶ ಎಂ. ಪತ್ರಿಿಕೆಯೊಂದಿಗೆ ಮಾತನಾಡಿ, ಜಂಟಿ ಆಯುಕ್ತರ ಸೂಚನೆ ಹಿನ್ನಲೆಯಲ್ಲಿ ಸಾರಿಗೆ ನಿಯಮ ಪಾಲಿಸದ ಸಿಂಧನೂರಿನ ವಿವಿಧ ಖಾಸಗಿ ಶಾಲಾ ವಾಹನಗಳ ತಪಾಸಣೆ ನಡೆಸಿ ಶಾಲಾ ಮುಖ್ಯಸ್ಥರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಶೀಘ್ರವೇ ನಿಯಮಾನುಸಾರ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು. ನಿರ್ಲಕ್ಷ್ಯ ತಾಳಿದರೆ ಇಲಾಖೆಯಿಂದ ಕಠಿಣ ಕ್ರಮಕೈಗೊಳ್ಳಲಾಗುವುದು ತಿಳಿಸಿದರು.
ಸಾರಿಗೆ ಇಲಾಖೆ ಅಧಿಕಾರಿಗಳ ದಾಳಿ ರಸ್ತೆ ಸುರಕ್ಷತಾ ನಿಯಮ ಪಾಲಿಸದ ಖಾಸಗಿ ಶಾಲಾ ವಾಹನಗಳ ವಶ

