ಸುದ್ದಿಮೂಲ ವಾರ್ತೆ ಮಾನ್ವಿ, ಡಿ.23:
ಜಾನೇಕಲ್ ಗ್ರಾಾಮ ಪಂಚಾಯಿತಿಯ 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ನಡೆದಿರುವ ಅವ್ಯವಹಾರ ವಿರುದ್ದ ಕ್ರಮ ಕೈಗೊಳ್ಳುವಂತೆ ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಿಡಿಓ ಶಾರದಾ ಇವರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮಾನ್ವಿಿ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಜಾನೇಕಲ್ ಗ್ರಾಾಮ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಧರಣಿ ನಡೆಸಿದರು.
ಗ್ರಾಾಮ ಪಂಚಾಯತಿ ಸದಸ್ಯ ದೇವಪುತ್ರ ಗವಿಗಟ್ ಮಾತನಾಡಿ ಜಾನೇಕಲ್ ಗ್ರಾಾಮ ಪಂಚಾಯಿತಿಯಲ್ಲಿ 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪರಿಶೀಲನೆ ನಡೆಸಬೇಕು, ಗ್ರಾಾ.ಪಂ. ವತಿಯಿಂದ ಸಂಗ್ರಹಿಸಲಾದ ತೆರಿಗೆ ಹಣದ ಮಾಹಿತಿ ನೀಡಬೇಕು, ಬಸವ, ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಮನೆಗಳನ್ನು ಗ್ರಾಾಮ ಸಭೆ ಮೂಲಕ ಹಂಚಿಕೆ ಮಾಡಬೇಕು, ಈ ಸ್ವತ್ತು ಯೋಜನೆಯಡಿಯಲ್ಲಿ ಆಸ್ತಿಿ ಮಾಲಿಕರಿಗೆ ಖಾತಾ ಉತಾರ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿನಾಕರಣ ವಿಳಂಬ ಮಾಡುವ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಗವಿಗಟ್ ಗ್ರಾಾಮದಲ್ಲಿ ಶಕ್ತಿಿ ಭವನ ನಿರ್ಮಾಣಕ್ಕೆೆ ಕ್ರಮ ಕೈಗೊಳ್ಳಬೇಕು, ಗ್ರಾಾಮಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಿಸಬೇಕು, ಗ್ರಾಾಮದ ಶಾಲೆಯಲ್ಲಿ ಕೈಗೊಳ್ಳಲಾದ ಮಳೆ ನೀರು ಕೊಯ್ಲು ಕಾಮಗಾರಿ, ಮರಮ್ ರಸ್ತೆೆ ಕಾಮಗಾರಿಯ ಬಾಕಿ ಇರುವ ಬಿಲ್ ಪಾವತಿ ಮಾಡಬೇಕು, ನರೇಗಾ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ಕೆಲಸ ನೀಡದೇ ಸತಾಯಿಸುತ್ತಿಿರುವ ಗ್ರಾಾ.ಪಂ. ಅಭಿವೃದ್ದಿ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಾಯಿಸಿದರು.
ಧರಣಿಯಲ್ಲಿ ಗ್ರಾಾಮ ಪಂಚಾಯಿತಿ ಸದಸ್ಯ ಜೆ.ರಮೇಶ ನಾಯಕ ಗವಿಗಟ್, ದಲಿತ ಸೇನೆ ಅಧ್ಯಕ್ಷ ರಮೇಶ ಕರೇಗುಡ್ಡ, ಮುಖಂಡರಾದ ಕರಿಯಪ್ಪ ನಕ್ಕುಂದಿ, ಭೀಮರಾಯ ಗುಡದಿನ್ನಿಿ, ಮುತ್ತಣ್ಣ, ಹುಸೇನಪ್ಪ, ಮಾರೇಶ, ಬಿ.ಅಮರೇಶನಾಯಕ, ಮಾರೇಶ ಭಂಡಾರಿ, ಬಡಕಪ್ಪ, ನಾಗರಾಜ, ಶಾಂತ ಕುಮಾರ, ಚನ್ನಪ್ಪ ಗೌಡ, ಮೌನೇಶ, ಮರಿಸ್ವಾಾಮಿ, ಸುಧಾಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಾನೇಕಲ್ ಗ್ರಾಾ.ಪಂ ಸದಸ್ಯರಿಂದ ಧರಣಿ

