ಸುದ್ದಿಮೂಲ ವಾರ್ತೆ ರಾಯಚೂರು, ಡಿ.25:
ಕೃತಕ ಬುದ್ಧಿಿಮತ್ತೆೆ(ಎಐ) ಪ್ರಾಾಯೋಗಿಕವಾಗಿ ಪ್ರತಿಯೊಂದು ಕೇತ್ರದಲ್ಲೂ ಹಲವಾರು ಆವಿಷ್ಕಾಾರಗಳ ಮೂಲಕ ಕ್ರಾಾಂತಿಕಾರಕ ಬದಲಾವಣೆಯ ಬೆಳವಣಿಗೆಗೆ ಸಹಾಯ ಮಾಡುತ್ತಿಿದೆ ಎಂದು ದೆಹಲಿ ವಿಶ್ವವಿದ್ಯಾಾಲಯದ ಪತ್ರಿಿಕೋದ್ಯಮ ವಿಭಾಗದ ಸಹಪ್ರಾಾಧ್ಯಾಾಪಕ ಡಾ.ರಮೇಶ ಅರೋಲಿ ಅಭಿಪ್ರಾಾಯ ಪಟ್ಟರು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಪತ್ರಿಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕೃತಕ ಬುದ್ಧಿಿಮತ್ತೆೆ(ಎಐ) ಕಾಲದಲ್ಲಿ ವರದಿಗಾರಿಕೆ: ಸವಾಲು ಮತ್ತು ಸಾಧ್ಯತೆ ಕುರಿತು ಪಿಪಿಟಿಯ ಮೂಲಕ ವಿಶೇಷ ಉಪನ್ಯಾಾಸ ಪ್ರಸ್ತುತಪಡಿಸಿದ ರು. ಇಂದು ನಮ್ಮ ದೈನಂದಿನ ಜೀವನವು ಮೊಬೈಲ್ ಸಾಧನಗಳು ಮತ್ತು ಇಂಟನೆಟ್ನ್ನು ಸಂಪೂರ್ಣವಾಗಿ ಅವಲಂಭಿಸಿದ್ದೇವೆ ಈ ಸಾಧನಗಳ ಬಳಕೆ ಮಾಡುವುದರಿಂದ ನಮ್ಮ ಕೆಲಸಗಳು ಸರಳವಾಗಿವೆ ಮತ್ತು ಮನುಷ್ಯರ ಬೌದ್ಧಿಿಕ ಮಟ್ಟ ಕುಂಠಿತಗೊಳ್ಳುವ ಸಾಧ್ಯತೆಯೂ ಇದೆ ಎಂದರು.
ಎಐ ೆಟೋಗಳು ಮತ್ತು ವಿಡಿಯೋಗಳನ್ನು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದರೆ ಆಗ ಎಐನಿಂದ ಪಡೆಯಲಾಗಿದೆ ಎಂದು ಕಡ್ಡಾಾಯವಾಗಿ ನಮೂದಿಸಬೇಕು ಎಂದ ಅವರು, ಸಂಶೋಧನೆಗಳಿಂದ ಇಂದು ಎಐ ತಂತ್ರಜ್ಞಾಾನ ಜಗತ್ತಿಿಗೆ ಹಬ್ಬಿಿದ್ದು, ಆಧುನಿಕ ಮಾನವನ ಜೀವನದ ಒಂದು ಭಾಗವಾಗಿದೆ. ಕೃತಕ ಬುದ್ಧಿಿಮತ್ತೆೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ವಿಚಾರಗಳ ನಿರ್ಮಾಣದಲ್ಲಿ ಸಹಾಯ ಮಾಡುತ್ತಿಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆೆ ಡಾ.ಲತಾ.ಎಂ.ಎಸ್. ಮಾತನಾಡಿ, ಸಮೂಹ ಮಾಧ್ಯಮ ವಲಯದಲ್ಲಿ ಕೃತಕ ಬುದ್ಧಿಿ ಮತ್ತೆೆಯ ಮಾಹಿತಿ ಸಂಸ್ಕರಣೆ ಮತ್ತು ವಿಶ್ಲೇಷಣಾ ಸಾಮರ್ಥ್ಯದಿಂದ ಅಪಾರ ಪ್ರಯೋಜನ ಪಡೆದುಕೊಳ್ಳುತ್ತಿಿದೆ. ಡಿಜಿಟಲ್ ಮಾಧ್ಯಮದ ಮೇಲಿನ ಅವಲಂಬನೆಯೂ ಈಗ ಹೆಚ್ಚಾಾಗುತ್ತಿಿದ್ದು, ಎಐ ಆಧಾರಿತ ಸುದ್ದಿಯ ವರದಿಗಾರಿಕೆ ಮತ್ತು ಓದುವಿಕೆಗಳಲ್ಲಿ ಸಾಕಷ್ಟು ಬದಲಾವಣೆ ತರುತ್ತಿಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಾಸಕರಾದ ಡಾ.ಪ್ರಭಾ ಬಸವರಾಜ ಸ್ವಾಾಮಿ, ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು. ಡಾ.ಗೀತಮ್ಮ ಕಾರ್ಯಕ್ರಮ ನಿರೂಪಿಸಿ ಸ್ವಾಾಗತಿಸಿದರು, ಡಾ.ಟಿ.ಎಸ್.ಗೋರವರ ಅತಿಥಿಯನ್ನು ಪರಿಚಯಿಸಿ ವಂದಿಸಿದರು.
ಕೃತಕ ಬುದ್ದಿಮತ್ತೆ ಮಾಧ್ಯಮ ಕ್ಷೇತ್ರದ ಬೆಳವಣಿಗೆಗೆ ಸಹಕಾರಿ – ಅರೋಲಿ

