ಸುದ್ದಿಮೂಲ ವಾರ್ತೆ ಬಳ್ಳಾರಿ , ಡಿ.26:
ವಿದ್ಯಾಾರ್ಥಿಗಳು ಕೇವಲ ಶಿಕ್ಷಣದಲ್ಲಿ ಮಾತ್ರವಲ್ಲದೆ, ಕ್ರೀಡೆಗಳಲ್ಲಿಯೂ ಆಸಕ್ತಿಿ ತೋರಿಸಬೇಕು ಎಂದು ಕಲಬುರಗಿಯ ಕಲ್ಯಾಾಣ ಕರ್ನಾಟಕ ದೈಹಿಕ ಶಿಕ್ಷಣ ಉಪನ್ಯಾಾಸಕರ ಸಂಘದ ಅಧ್ಯಕ್ಷ ಸಂತೋಷ ರೆಡ್ಡಿಿ.ಆರ್ ಹೇಳಿದ್ದಾಾರೆ.
ಕೇಂದ್ರ ಸರ್ಕಾರ, ಯುವ ಕಾರ್ಯ ಮತ್ತು ಕ್ರೀೆಡಾ ಸಚಿವಾಲಯದ ಮೇರಾ ಯುವ ಭಾರತ ಬಳ್ಳಾಾರಿ ಕಚೇರಿ ವತಿಯಿಂದ ಲಿಯಾ ಯೂತ್ ಅಸೋಸಿಯೇಷನ್ ಹಾಗೂ ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತಾಾಶ್ರಯದಲ್ಲಿ ನಗರದ ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಾ ಮಟ್ಟದ ಕ್ರೀಡಾಕೂಟ ಉದ್ಘಾಾಟಿಸಿ ಅವರು ಮಾತನಾಡಿದರು.
ಐಡಿಪಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ಜಯಚಂದ್ರ ರೆಡ್ಡಿಿ. ಅವರು, ವಿದ್ಯಾಾರ್ಥಿಗಳು ಕ್ರೀಡಾ ಮನೋಭಾವದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ದೈಹಿಕ ಆರೋಗ್ಯ ಸದೃಢವಾಗಿಟ್ಟುಕೊಳ್ಳಬೇಕು ಎಂದರು.
ಕ್ರೀಡಾಕೂಟದಲ್ಲಿ ವಾಲಿಬಾಲ್, ಖೋಖೋ, 100 ಮೀ. ಓಟ ಸ್ಪರ್ಧೆ, ಗುಂಡು ಎಸೆತ, ಹಗ್ಗ-ಜಗ್ಗಾಾಟ, ಬ್ಯಾಾಟ್ಮಿಟನ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ಸಂತೋಷ ರೆಡ್ಡಿ.ಆರ್

