ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.29:
ಯುಗದ ಕವಿ, ಜಗದ ಕವಿ, ರಾಷ್ಟ್ರಕವಿ, ರಸಋಷಿ, ಕರ್ನಾಟಕ ರತ್ನ, ಕನ್ನಡದ ಪ್ರಪ್ರಥಮ ಜ್ಞಾಾನಪೀಠ ಪ್ರಶಸ್ತಿಿ ಪುರಸ್ಕೃತರಾದ ಕುವೆಂಪುರವರ ಸಾಹಿತ್ಯವನ್ನು ಓದುವಾಗ ಸಾಹಿತ್ಯದ ವಸ್ತು ಓದುಗರನ್ನು ತನ್ನಲ್ಲಿ ಸೆಳೆದುಕೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿಿನ ನಿಕಟ ಪೂರ್ವ ಜಿಲ್ಲಾಾ ಅಧ್ಯಕ್ಷ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿಿನ ಬಳ್ಳಾಾರಿ ಜಿಲ್ಲಾಾ ಅಧ್ಯಕ್ಷರಾಗಿರುವ ಸಿದ್ದರಾಮ ಕಲ್ಮಠ ಅವರು ಅಭಿಪ್ರಾಾಯ ವ್ಯಕ್ತಪಡಿಸಿದ್ದಾಾರೆ.
ಬಳ್ಳಾಾರಿಯ ಪಾರ್ವತಿ ನಗರದಲ್ಲಿ ಇರುವ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಾ ಘಟಕ ಏರ್ಪಡಿಸಿದ್ದ ಕುವೆಂಪು ಅವರ 121ನೇ ಜಯಂತಿ ಉದ್ಘಾಾಟಿಸಿ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿಗಳು ಮಲೆನಾಡಿನ ಸೊಬಗನ್ನು ಮತ್ತು ಬದುಕನ್ನು ಕಣ್ಣ ಮುಂದೆ ತೆರೆದಿಡುತ್ತವೆ. ಇಂಥಹ ಕಥಾ ವಸ್ತುಗಳು ಮತ್ತು ಬರಹದ ಶೈಲಿಯಿಂದಲೇ ಅವರು ರಾಷ್ಟ್ರಕವಿಯಾಗಿದ್ದಾಾರೆ ಎಂದರು.
ಬಳ್ಳಾಾರಿ ಮತ್ತು ವಿಜಯನಗರ ಜಿಲ್ಲೆೆಗಳ ಜಿಲ್ಲಾಾ ಅಧ್ಯಕ್ಷರಾಗಿರುವ ಕೆ. ರಾಜಶೇಖರ್ (ಕುರಿಹಟ್ಟಿಿ ರಾಜಣ್ಣ) ಅವರು, ಕನ್ನಡ ನಾಡು, ನುಡಿ ಮತ್ತು ನೆಲ-ಜಲಕ್ಕೆೆ ತನ್ನದೇ ಆದ ಮಹತ್ವವಿದೆ. ನೈಸರ್ಗಿಕವಾದ ಮಹತ್ವಕ್ಕೆೆ ಸಾಹಿತ್ಯದ ಮೂಲಕ ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವರಾಗಿದ್ದಾಾರೆ ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಸದಸ್ಯ ಗುಡಿಗಂಟೆ ಹನುಮಂತ, ನಾಗರಾಜ ಸೇರಿದಂತೆ ಇನ್ನಿಿತರರು ಉಪಸ್ಥಿಿತರಿದ್ದರು.
ಕುವೆಂಪು ಅವರು ಸಾಹಿತ್ಯದಿಂದಲೇ ವಿಶ್ವಮಾನವರಾದರು

