ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.30:
ಕಕ್ಷಿದಾರರೊಬ್ಬರ ಪರವಾಗಿ ಉತ್ತಮವಾಗಿ ವಾದ ಮಂಡಿಸಲು 25 ಸಾವಿರ ರೂಪಾಯಿ ಲಂಚ ಪಡೆಯುತ್ತಿಿದ್ದ ನಗರದ ಎರಡನೇ ಪಿಡಿಜೆ ನ್ಯಾಾಯಾಲಯದ ವಿಶೇಷ ಸಾರ್ವಜನಿಕ ಅಭಿಯೋಜಕ ರಾಜಮಹೇಂದ್ರ ಜಿ. ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕಂದನುಲಿ ಗ್ರಾಾಮದ ನವೀನ್ ಅನಂತಯ್ಯ ಎಂಬುವವರು ದಾಖಲಿಸಿದ್ದ ಪ್ರಕರಣವನ್ನು ಉತ್ತಮವಾಗಿ ವಾದ ಮಾಡಲು ರಾಜಮಹೇಂದ್ರ ನವೀನ್ ಅವರಿಗೆ 50 ಸಾವಿರ ರೂಪಾಯಿ ಲಂಚಕ್ಕೆೆ ಬೇಡಿಕೆ ಇಟ್ಟಿಿದ್ದರು. ಈ ಹಿಂದೆ 20 ಸಾವಿರ ಪಡೆದಿದ್ದರು. ಉಳಿದ ಹಣಕ್ಕೆೆ ಬೇಡಿಕೆ ಇಟ್ಟಾಾಗ ನವೀನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್ಪಿಿ ಸಿದ್ದರಾಜು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಡಿವೈಎಸ್ಪಿಿ ಶೀಲವಂತ ಅವರು, 25 ಸಾವಿರ ರೂಪಾಯಿ ನಗದು ಪಡೆಯುವಾಗ ದಾಳಿ ನಡೆಸಿ ರಾಜಮಹೇಂದ್ರ ವಶಕ್ಕೆೆ ಪಡೆದಿದ್ದಾರೆ. ತನಿಖೆ ನಡೆಸಿ ನ್ಯಾಾಯಾಲಯಕ್ಕೆೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

