ಸುದ್ದಿಮೂಲ ವಾರ್ತೆ ರಾಯಚೂರು, ಡಿ.31:
ರಾಯಚೂರು ನಗರದಲ್ಲಿ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿಿ ಯೋಜನೆಯ ಅನುದಾನದಲ್ಲಿ ವಿಕಲಚೇತನರಿಗೆ ತ್ರಿಿಚಕ್ರ ವಾಹನಗಳನ್ನು ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ ವಿತರಿಸಿದರು.
ನಗರದ ಪ್ರವಾಸಿ ಮಂದಿರದ ಬಳಿ ಲಾನುಭವಿಗಳಿಗೆ ತ್ರಿಿಚಕ್ರ ವಾಹನಗಳ ಕೀ ವಿತರಿಸಿದ ಅವರು ಸರಕಾರ ವಿವಿಧ ಯೋಜನೆಗಳಡಿಯಲ್ಲಿ ವಿಕಲಚೇತನರಿಗೆ ಗ್ರಾಾಮ ಪಂಚಾಯತ್ ದಿಂದ ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿಿದೆ. ವಿಕಲಚೇತನರ ಬಗ್ಗೆೆ ಸಮಾಜವು ಸೌಜನ್ಯದಿಂದ ವರ್ತಿಸಬೇಕು, ಅವರ ಕುರಿತು ವಿಶೇಷ ಕಾಳಜಿ ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಅಸ್ಲಂ ಪಾಶಾ, ರಾಜ್ಯ ವಕ್ತಾಾರ ಡಾ.ರಝಾಕ ಉಸ್ತಾಾದ, ಜಿಲ್ಲಾ ಕಾರ್ಯದರ್ಶಿ ಅಂಜಿನಕುಮಾರ, ಕೆ.ಇ.ಕುಮಾರ, ಕಾಂಗ್ರೆೆಸ್ ಮುಖಂಡರಾದ ರಮೇಶ ರೋಸ್ಲಿಿ, ಸತ್ಯನಾಥ, ಮೊಹಮ್ಮದ ಉಸ್ಮಾಾನ, ಸೈಯದ ಸುಲ್ತಾಾನ, ಖಾಜಾ ಮೊಯಿನುದ್ದೀನ (ಮೋನಾ), ದೀಪಕ ರೆಡ್ಡಿಿ, ಮೊಹಮ್ಮದ ರಫಿ, ಮುನಿಯಪ್ಪ, ನರಸಿಂಹಲು, ನಾಗರಾಜ ಇತರರಿದ್ದರು.
ಎಂಎಲ್ಸಿ ಅನುದಾನದಲ್ಲಿ ತ್ರಿಚಕ್ರ ವಾಹನ ವಿತರಣೆ

