ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.31:
ಭೂ ಕಬಳಿಕೆ ನಿಷೇಧದ ನೆಪದಲ್ಲಿ ಜಿಲ್ಲಾಾಡಳಿತ, ತಾಲ್ಲೂಕು ಆಡಳಿತ ಬಡವರನ್ನು ಬೀದಿಪಾಲಾಗಿಸಿದೆ. ಪರ್ಯಾಯ ವ್ಯವಸ್ಥೆೆಗೆ ಆಗ್ರಹಿಸಿ ಜನೇವರಿ 2, 3 ರಂದು ನಗರದ ಮಿನಿ ವಿಧಾನಸೌಧದ ಮುಂದೆ ಧರಣಿ ಹಮ್ಮಿಿಕೊಳ್ಳಲಾಗುವದು. ಜ.3 ರಂದು ಸಿಂಧನೂರಿಗೆ ಆಗಮಿಸಲಿರುವ ಮುಖ್ಯಮಂತ್ರಿಿಗ ಧರಣಿ ಸ್ಥಳಕ್ಕೆೆ ಬಂದು ನ್ಯಾಾಯ ಒದಗಿಸಬೇಕು ಎಂದು ಬೀದಿಬದಿ ವ್ಯಾಾಪಾರಸ್ಥರ ಸಂಘದ ಸಂಚಾಲಕ ಡಿ.ಹೆಚ್.ಪೂಜಾರ್ ಆಗ್ರಹಿಸಿದರು.
ಬುಧವಾರ ನಗರದ ಪತ್ರಿಿಕಾಭವನದಲ್ಲಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, ಬೀದಿ ಬದಿ ವ್ಯಾಾಪಾರಿಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಪರ್ಯಾಯ ವ್ಯವಸ್ಥೆೆ ಕಲ್ಪಿಿಸುವುದಾಗಿ ಭರವಸೆ ನೀಡಿದ್ದರೂ ಅದು ಈವರೆಗೆ ಈಡೇರಿಲ್ಲ. ಸಹಕಾರಿ ಇಲಾಖೆ ಜಾಗ ಬಾಡಿಗೆಗೆ ಕೊಡಿಸಲಿಲ್ಲ. ಶಾಸಕರು ಸುಳ್ಳು ಭರವಸೆ ನೀಡಿದ್ದಾಾರೆ. ಶಾಸಕರ ಮನೆಗೆ 10 ಸಾರಿ ನಿಯೋಗ ತೆರಳಿ ಮನವಿ ಮಾಡಿದ್ದೇವೆ. ಆದರೆ ಶಾಸಕರಿಂದ ಸೂಕ್ತ ಸ್ಪಂದನೆ ದೊರಕಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಎರಡು ಕಾನೂನು:
ಸಿಂಧನೂರಿನಲ್ಲಿ ಎರಡು ಕಾನೂನು ಜಾರಿಯಲ್ಲಿದೆ. ಬಡವರಿಗೊಂದು, ಶ್ರೀಮಂತರಿಗೊಂದು. ಭೂಕಬಳಿಕೆ ನಿಷೇಧ ಕಾಯ್ದೆೆ ಮೂಲಕ ಬೀದಿಬದಿ ವ್ಯಾಾಪಾರಸ್ಥ ತೆರವುಗೊಳಿಸಿದ ತಾಲ್ಲೂಕು ಆಡಳಿತ ಶ್ರೀಮಂತರ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ವಿಲವಾಗಿದೆ. 2020ಕ್ಕಿಿಂತ ಮುಂಚೆ ಹೈಕೋರ್ಟ್ ಆದೇಶದಂತೆ ನಗರ ವ್ಯಾಾಪ್ತಿಿಯ 300 ಕಟ್ಟಡಗಳಿಗೆ ನೋಟಿಸ್ ಕೊಡಲಾಗಿತ್ತು. ಆದರೆ ಈವರೆಗೆ ಆ ಕಟ್ಟಡಗಳನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ಮುಂದಾಗಿಲ್ಲ. ಅಧಿಕಾರಿಗಳು ನ್ಯಾಾಯಾಲಯದ ಆದೇಶ ಪಾಲನೆ ಮಾಡಬೇಕಾದರೆ ಎಲ್ಲರನ್ನು ತೆರವುಗೊಳಿಸಬೇಕಿತ್ತು. ಪೊಲೀಸ್ ಠಾಣೆ, ಬಸ್ಸ್ಟ್ಯಾಾಂಡ್ ಸಮೀಪದ ಮುಖ್ಯರಸ್ತೆೆಗಳಲ್ಲಿರುವ ಕಟ್ಟಡಗಳಿಗೆ ಪಿಡಬ್ಲ್ಯೂಡಿ ಇಲಾಖೆ ನೋಟಿಸ್ ನೀಡಿದ ಪ್ರಕಾರ ಯಾಕೆ? ತೆರವುಗೊಳಿಸಲಿಲ್ಲ ಎಂದು ಪೂಜಾರ್ ಪ್ರಶ್ನಿಿಸಿದರು.
ಜಿಲ್ಲಾಾಧಿಕಾರಿ, ತಹಸೀಲ್ದಾಾರ, ಪೌರಾಯುಕ್ತರು ತಮ್ಮ ಸ್ಥಾಾನ, ನೌಕರಿ ಭದ್ರಪಡಿಸಿಕೊಳ್ಳಲು ಬಡವರ ಹೊಟ್ಟೆೆ ಮೇಲೆ ಹೊಡೆದಿದ್ದಾಾರೆ. ಬೀದಿಬದಿ ವ್ಯಾಾಪಾರಿಗಳು ಈವರೆಗೆ ಮೂರು ಜನ ಆತ್ಮಹತ್ಯೆೆ ಮಾಡಿಕೊಂಡಿದ್ದಾಾರೆ. ಸಾಲದ ಕಿರಿಕಿರಿಯಿಂದ ಮಕ್ಕಳ ಮುಖ ನೋಡೋಕೆ ಆಗ್ತಿಿಲ್ಲ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದಾಾವೆ. ಸಿಂಧನೂರಿಗೆ ಆಗಮಿಸುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಸಿಂಧನೂರಿನ ಜನರ ಕಣ್ಣೀರು ಒರೆಸುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಾಪಾರಸ್ಥರ ಸಂಘದ ಸಂಚಾಲಕರಾದ ಬಸವರಾಜ ಬಾದರ್ಲಿ, ಚಂದ್ರಶೇಖರ ಗೊರಬಾಳ, ಬಸವರಾಜ ಹಂಚಿನಾಳ, ನಾರಾಯಣ ಬೆಳಗುರ್ಕಿ, ರಮೇಶ ಪಾಟೀಲ್ ಬೇರ್ಗಿಿ, ಚಿಟ್ಟಿಿಬಾಬು ಬೂದಿವಾಳ ಕ್ಯಾಾಂಪ್, ಬಸವರಾಜ ಹಳ್ಳಿಿ ಇತರರು ಇದ್ದರು.

