ಸುದ್ದಿಮೂಲ ವಾರ್ತೆ ಕಲಬುರಗಿ, ಜ.01:
ವಿದ್ಯಾಾರ್ಥಿ ಗಳು ಬದುಕಿನಲ್ಲಿ ಬರುವ ಅನೇಕ ಸವಾಲು ಹಾಗೂ ತಿರುವುಗಳನ್ನು ಧೈರ್ಯದಿಂದ ಎದುರಿಸಿ ಸಲರಾಗ ಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಉಪಮೇಯರ್ ತೃಪ್ತಿಿ ಎಸ್. ಲಾಖೆ ಕರೆ ನೀಡಿದರು.
ಕರ್ನಾಟಕ ಪ್ರತಿಭಾ ಅಜಾಡೆಮಿ ಕಲಬುರಗಿ ಘಟಕದಿಂದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾಾರ್ಥಿಗಳಿಗೆ ನಗರದ ಬಸವ ಮಂಟಪದಲ್ಲಿ
ಆಯೋಜಿಸಿದ್ದ ಪ್ರತಿಭಾ ಪುರಸ್ಕಾಾರ ಉದ್ಘಾಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಬರುವ ಕಷ್ಟ ನಷ್ಟಗಳಿಗೆ ಹೆದರಬಾರದು. ಎಲ್ಲಾಾ ಸಮಸ್ಯೆೆಗಳಿಗೆ ಪರಿಹಾರವಿದೆ. ಸೋಲು ಒಪ್ಪಿಿಕೊಳ್ಳದೆ ಮುನ್ನಡೆಯಬೇಕು ಎಂದು ತಿಳಿಸಿದರು.
ವಿಶೇಷ ಉಪನ್ಯಾಾಸ ನೀಡಿದ ಪತ್ರಕರ್ತ-ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ ಅವರು, ಬದುಕು ಹಾಗೂ ಭವಿಷ್ಯಕ್ಕೆೆ ಗುರಿ ಮುಖ್ಯ. ಆ ಗುರಿ ಗಾಳಿಗೆ ಚಲಿಸುವ ಮೋಡಗಳಂತಾಗಬಾರದು. ಅದು ನಿರ್ದಿಷ್ಟವಾಗಿ, ನಿಖರವಾಗಿ ಚಲಿಸುವ ಮಶಿನ್ ಗನ್ ರೀತಿಯಲ್ಲಿ ಇರಬೇಕು. ನಮ್ಮಲ್ಲಿರುವ ಆಸ್ತಿಿ, ಐಶ್ವರ್ಯವನ್ನು ಯಾರಾದರೂ ಕಸಿದುಕೊಳ್ಳಬಹುದು. ಆದರೆ ಜ್ಞಾನವನ್ನು ಮಾತ್ರ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬುದ್ಧ, ಬಸವ, ಅಂಬೇಡ್ಕರ್ರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 80 ವಿದ್ಯಾಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ವಲಯ ಕಚೇರಿ-1 ಆಯುಕ್ತ ಗೌತಮ ಕಾಂಬಳೆ, ಹಿರಿಯ ವಕೀಲ ಸೈಯದ್ ಮರ್ಜ ಹುಸೇನ್, ಕೋಲಿ ಸಮಾಜದ ಮುಖಂಡ ಹುಲಿಗೆಪ್ಪ ಕನಕಗಿರಿ, ಆನಂದ ವಾರಿಕ್, ವಿದ್ಯಾಾಧರ ಕಾಂಬಳೆ, ಸಂತೋಷ ಸರಡಗಿ, ನಾಗೇಂದ್ರ ಜವಳಿ, ಸುನಿಲ ಮಾನಪಡೆ, ಮೈಲಾರಿ ದೊಡ್ಡಮನಿ, ರೇಣುಕಾ ಸರಡಗಿ, ಗೌರಮ್ಮ ಇದ್ದರು.
ಸವಾಲುಗಳ ಎದುರಿಸಿ ಬದುಕು ಕಟ್ಟಿಕೊಳ್ಳಲು ಸಲಹೆ

