ಸುದ್ದಿಮೂಲ ವಾರ್ತೆ ಕನಕಗಿರಿ, ಜ.11:
ಅಕ್ರಮವಾಗಿ ಮರಳು ತುಂಬಿಕೊಂಡು ಹೊರಟ್ಟಿಿದ್ದ ಟಿಪ್ಪಟ್ ಬೈಕ್ಗೆ ಡಿಕ್ಕಿಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತಪಟ್ಟವನನ್ನು ನವಲಿ ಗ್ರಾಾಮದ ರುದ್ರಗೌಡ ದಳಪತಿ (60) ಎಂದು ಗುರುತಿಸಲಾಗಿದೆ. ಡಂಕನಕಲ್ ಗ್ರಾಾಮದಲ್ಲಿ ಚಿಕಿತ್ಸೆೆ ಪಡೆದುಕೊಂಡು ಮಗನ ಜತೆಗೆ ಬೈಕ್ ಮೂಲಕ ನವಲಿಗೆ ಬರುತ್ತಿಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಮರಳು ತುಂಬಿಕೊಂಡಿದ್ದ ಟಿಪ್ಪರ್ ಗಂಗಾವತಿ ಕಡೆಗೆ ಹೊರಟಿತ್ತು ಎನ್ನಲಾಗಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಡಿಕ್ಕಿ; ಬೈಕ್ ಸವಾರ ಸಾವು

