ಸುದ್ದಿಮೂಲ ವಾರ್ತೆ ವಿಜಯನಗರ, ಜ.18:
ಚಾಲನಾ ವೃತ್ತಿಿ ತಾಳ್ಮೆೆ ಹಾಗೂ ಏಕಾಗ್ರತೆ ಬಯಸುವ ಕಾಯಕವಾಗಿದೆ. ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಂಭಾವ್ಯ ಅವಘಡಗಳನ್ನು ತಪ್ಪಿಿಸಬಹುದು ಎಂದು ವಿಜಯನಗರ ಸಂಚಾರ ವಿಭಾಗದ ಎಸಿಪಿ ನಿಕಿತಾ ಹೇಳಿದರು.
ರಸ್ತೆೆ ಸುರಕ್ಷತಾ ಸಪ್ತಾಾಹದ ಭಾಗವಾಗಿ ರಾಜ್ಯ ಸಾರಿಗೆ ಇಲಾಖೆ ಸಹಯೋಗದಲ್ಲಿ ಎಲ್ ವಿ ಟ್ರಾಾವೆಲ್ಸ್ ವತಿಯಿಂದ ಆಯೋಜಿಲಾಗಿದ್ದ ಆಯೋಜಿಸಲಾಗಿದ್ದ ಸಡಕ್ ಸುರಕ್ಷಾ ಜೀವನ ರಕ್ಷಾ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಸುರಕ್ಷಿತ ಪ್ರಯಾಣವನ್ನು ಖಾತ್ರಿಿ ಪಡಿಸುವ ನಿಟ್ಟಿಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಸಂಚಾರಿ ನಿಯಮಗಳನ್ನು ಜಾರಿಗೆ ತಂದಿದೆ. ಈ ಮೊದಲು ಕುಡಿದು ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಚಾಲನಾ ಪರವಾನಗಿ ರದ್ದು ಮಾಡಲಾಗುತ್ತಿಿತ್ತು. ಬದಲಾದ ಸಂಚಾರಿ ಕಾಯ್ದೆೆಗಳನ್ವಯ ಸಿಗ್ನಲ್ ಜಂಪಿಂಗ್, ಚಾಲನೆಯ ವೇಳೆ ಮೊಬೈಲ್ ಬಳಕೆ, ಅತಿ ವೇಗ ಪ್ರಕರಣಗಳಲ್ಲೂ ಲೈಸ್ಸ್ ರದ್ದು ಮಾಡಲು ಅವಕಾಶವಿದೆ. ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸಮಾಜದ ಸ್ವಾಾಸ್ಥ್ಯ ಕಾಪಾಡಬೇಕು. ಅಪಘಾತದಿಂದ ತಪ್ಪಿಿತಸ್ಥರೊಂದಿಗೆ ಅಮಾಯಕರ ಪ್ರಾಾಣಕ್ಕೂ ತೊಂದರೆಯಾಗಲಿದೆ ಎಂಬ ಅರಿವು ಎಲ್ಲರಿಗೆ ಇರಬೇಕು ಎಂದು ಕಿವಿಮಾತು ಹೇಳಿದರು.
ಆರ್ ಟಿ ಒ ಪ್ರವೀಣ್ ಮಾತನಾಡಿ, ಸರ್ಕಾರಿ ವರದಿಗಳ ಪ್ರಕಾರ 2023ನೇ ಸಾಲಿನಲ್ಲಿ 4,80,000 ಕ್ಕಿಿಂತಲೂ ಹೆಚ್ಚು ಅಪಘಾತ ಪ್ರಕರಣಗಳು ದಾಖಲಾಗಿದೆ. 1,72,890 ಮಂದಿ ಪ್ರಾಾಣ ಕಳೆದುಕೊಂಡಿದ್ದಾರೆ. ಅವಸರ ಹಾಗೂ ಅಜಾಗರೂಕತೆ, ಸಂಚಾರಿ ನಿಯಮಗಳ ಉಲ್ಲಂಘನೆಯೇ ಅಪಘಾತಗಳಿಗೆ ಮೂಲ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ ವಿ ಟ್ರಾಾವೆಲ್ಸ್ ಮಾಲೀಕರಾದ ಪರಮಶಿವಯ್ಯ, ಚಾಲಕರ ಸುರಕ್ಷತೆಗಾಗಿ ಇಂತಹ ಕಾರ್ಯಕ್ರಮ ರೂಪಿಸಿರುವುದು ಶ್ಲಾಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಅವಘಡ ಸಂಭವಿಸಿದ ಕೂಡಲೆ ಚಿಕಿತ್ಸೆೆ ದೊರೆತರೆ ಪ್ರಾಾಣ ಉಳಿಯುವ ಸಂಭವನೀಯತೆ ಹೆಚ್ಚು. ಹೀಗಾಗಿ ಯಾವುದೇ ಆಲೋಚನೆ ಮಾಡದೆ ಅಪಘಾತಕ್ಕೆೆ ಒಳಗಾದವರನ್ನು ಆಸ್ಪತ್ರೆೆಗೆ ದಾಖಲಿಸಬೇಕು. ಅಂತಹ ವ್ಯಕ್ತಿಿಗಳು ಯಾವುದೇ ಕಾನೂನಿನ ತೊಡಕು ಉಂಟಾಗುವುದಿಲ್ಲ. ಬದಲಿಗೆ ಅಂತಹವರನ್ನು ಗುರುತಿಸಿ ಸರ್ಕಾರದ ವತಿಯಿಂದ ಪುರಸ್ಕರಿಸಲಾಗುವುದು ಎಂದು ಆರ್ ಟಿ ಒ ವಿವೇಕಾನಂದ ಮಾಹಿತಿ ನೀಡಿದರು.
ಆರ್ ಟಿ ಒ ಮಂಜುನಾಥ್, ಕಾಮಾಕ್ಷಿಪಾಳ್ಯ ಸಿಪಿಐ ಯೋಗೀಶ್, ಜ್ಞಾನಭಾರತಿ ಠಾಣೆ ಸಿಪಿಐ(ಸಂ) ಪ್ರೀತಂ, ಅನ್ನಪೂರ್ಣೇಶ್ವರಿ ನಗರ ಠಾಣೆ ಸಿಪಿಐ ಲತೇಶ್ ಕುಮಾರ್, ಎಲ್ ವಿ ಟ್ರಾಾವೆಲ್ಸ್ ನಿರ್ದೇಶಕರಾದ ನಾರಾಯಣಸ್ವಾಾಮಿ, ಸಿಇಒ ಸುದರ್ಶನ್, ವಿಷ್ಣು, ಮುತ್ತುರಾಜ್ ಹಾಗೂ ಎಲ್ ವಿ ಟ್ರಾಾವೆಲ್ಸ್ ನ ಸುಮಾರು 800ಕ್ಕೂ ಹೆಚ್ಚು ಚಾಲಕರು ಹಾಗೂ ಸಿಬ್ಬಂದಿ ಉಪಸ್ಥಿಿತರಿದ್ದರು.
ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು : ಎಸಿಪಿ ನಿಕಿತಾ

