ಸುದ್ದಿಮೂಲ ವಾರ್ತೆ ಸಿಂಧನೂರು, ಜ.19:
ಸಿದ್ದರಾಮಾನಂದಪುರಿ ಮಹಾಸ್ವಾಾಮಿಗಳು ಸಮಾಜದ ಏಳಿಗೆಗೆ ದುಡಿದವರು. ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಿ, ಶಿಕ್ಷಣಕ್ಕೆೆ ಹೆಚ್ಚು ಆದ್ಯತೆ ನೀಡಿದ್ದರು. ಸಮಾಜಕ್ಕೆೆ ಶ್ರೀಗಳ ಕೊಡುಗೆ ಅಪಾರವಾಗಿದೆ ಎಂದು ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ್ ಹೇಳಿದರು.
ತಿಂಥಣಿ ಕಾಗಿನೆಲೆ ಕನಕಗುರುಪೀಠದ ಸಿದ್ದರಾಮಾನಂದಪುರಿ ಮಹಾಸ್ವಾಾಮಿಗಳು ನಿಧನದ ಹಿನ್ನಲೆಯಲ್ಲಿ ತುರ್ವಿಹಾಳ ಪಟ್ಟಣದ ಅಮೋಘಸಿದ್ದೇಶ್ವರ ಮಠದಲ್ಲಿ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಶ್ರೀಗಳ ಜೊತೆಗೆ ಹೆಚ್ಚು ಸಮಯ ಕಳೆದಿದ್ದೇನೆ. ಅವರ ಆಲೋಚನೆಗಳು ಸಮಾಜಮುಖಿಯಾಗಿದ್ದವು. ಜನಾನುರಾಗಿಯಾಗಿ ಜನ ಸಾಮಾನ್ಯರೊಡನೆ ಜೀವನ ಸವೆಸಿದವರು. ಸಮಾಜದ ಏಳಿಗೆಗೆ ಹಗಲಿರುಳು ಶ್ರಮಿಸಿದವರು. ಶ್ರೀಗಳು ಬದುಕಿದ್ದಾಾಗ ಅವರನ್ನು ಗುರುತಿಸುವ ಕೆಲಸವಾಗಲಿಲ್ಲ. ನಮ್ಮ ಶ್ರೀಗಳು ಇಂದು ಅವರು ನಮ್ಮೊೊಂದಿಗೆ ಭೌತಿಕವಾಗಿ ಇಲ್ಲದಿದ್ದರೂ ಅವರ ಆಶಯ, ವಿಚಾರಧಾರೆಗಳು ನಮಗೆ ಮಾರ್ಗದರ್ಶನವಾಗಿವೆ. ಅವರ ಆಶಯಗಳಂತೆ ನಾವೆಲ್ಲರು ಸಾಗೋಣ. ಸಮಯ, ಶ್ರದ್ದೆೆ, ಶಿಸ್ತು, ಶಾಂತಿಗಾಗಿ ಅವರ ಹೋರಾಟ ನಾವು ಮುಂದುವರೆಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತುರ್ವಿಹಾಳ ಪುರವರಮಠದ ಅವರಗುಂಡಯ್ಯ ಶಿವಾಚಾರ್ಯ, ಚಿದಾನಂದಯ್ಯ ಗುರುವಿನ್, ತುರ್ವಿಹಾಳ ಪ.ಪಂ.ಅಧ್ಯಕ್ಷ ಬಾಪುಗೌಡ ದೇವರಮನಿ, ಹಾಲುಮತ ಸಮಾಜದ ಅಧ್ಯಕ್ಷ ಭೀಮಣ್ಣ ವಕೀಲ, ಕನಕಗುರುಪೀಠದ ಅಧ್ಯಕ್ಷ ಅಮರೇಶಪ್ಪ ಮೈಲಾರ್, ಆಧ್ಯಾಾತ್ಮಕ ಚಿಂತಕ ಗವಿಸಿದ್ದಪ್ಪ, ಉಪನ್ಯಾಾಸಕರಾದ ಶಂಕರ್ ಗುರಿಕಾರ, ವಿರುಪಾಕ್ಷಪ್ಪ ಗಚ್ಚಿಿನಮನಿ, ಗ್ಯಾಾನಪ್ಪ ಕನ್ಯಾಾಪೇಟೆ, ಶಿಕ್ಷಕ ನಾಗರಾಜ ಅರಳಿಮರದ್, ಪ್ರಮೋದ್ ವಕೀಲ ಗುಂಜಳ್ಳಿಿ, ಪಿಡಿಓ ಹುಚ್ಚಪ್ಪ ನೇಗಲಿ ಉಪ್ಪಲದೊಡ್ಡಿಿ, ಶೇಖರಗೌಡ ದೇವರಮನೆ, ಮಂಟೆಪ್ಪ ಎಲೆಕೂಡ್ಲಿಿಗಿ, ಹನುಮೇಶ್ ಬಾಗೋಡಿ, ಬಸವರಾಜ್ ಗೊರೆಬಾಳ್, ಶರಣಪ್ಪ ಹೊಸಗೌಡ ಸೇರಿದಂತೆ ಅನೇಕರು ಇದ್ದರು.
ದಿ.ಸಿದ್ದರಾಮಾನಂದ ಪುರಿ ಮಹಾಸ್ವಾಮಿಗಳಿಗೆ ನುಡಿನಮನ ಸಮಾಜಕ್ಕೆ ಶ್ರೀಗಳ ಕೊಡುಗೆ ಅಪಾರ : ಮಾದಯ್ಯ ಗುರುವಿನ್

