ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.21:
ಇಂದಿನ ಸಮಾಜದ ಯುವಕರಿಗೆ 12 ನೇ ಶತಮಾನದ ವಚನ ಚಳುವಳಿಕಾರ ಅಂಬಿಗರ ಚೌಡಯ್ಯ ನವರ ತತ್ವ ಮತ್ತು ಆದರ್ಶ ಬಹಳ ಅವಶ್ಯಕತೆ ಎಂದು ಶಾಸಕಿ ಕರಿಯಮ್ಮ ಜಿ ನಾಯಕ ಅಭಿಪ್ರಾಾಯ ವ್ಯಕ್ತಪಡಿಸಿದರು,
ಅವರು ಇಂದು ಗ್ರಾಾಮದ ಗಂಗಾ ನಗರದ ಅಂಬಿಗರ ಚೌಡಯ್ಯನ 906 ನೇ ಜಯಂತಿ ಕುರಿತು ಮಾತನಾಡುತ್ತಾಾ 12 ಶತಮಾನದಲ್ಲಿ ಬಸವಣ್ಣ ನವರ ಜೊತೆ ಅನುಭವ ಮಂಟಪದಲ್ಲಿ ಅತ್ಯಂತ ನೇರ ನಿಷ್ಟುರ ವೈಚಾರಿಕ ಸಾಹಿತಿಯಾಗಿದ್ದವರು ಅಂಬಿಗರ ಚೌಡಯ್ಯ ನವರು.
ಚೌಡಯ್ಯ ನವರು ಕಾಯಕ ಸಿದ್ದಾಂತದ ಜೊತೆಗೆ ಜಾತ್ಯತೀತ ವಚನ ಚಳುವಳಿ ಗಟ್ಟಿಿ ಗೊಳಿಸಿ ಮಹಿಳಾ ಸಮಾನತೆಗಾಗಿ ವೈಚಾರಿಕ ವಚನ ಬರೆದು ಅಂದಿನ ಕಾಲದಲ್ಲಿ ಮಹಿಳಾ ಸಬಲಿಕರಣಕ್ಕೆೆ ಕಾರಣರಾಗಿದ್ದರು. ,ಇಂದಿನ ಯುವಕರು ಅಂಬಿಗರ ಚೌಡಯ್ಯ ನವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ವೆಂಕನಗೌಡ,ನರಸಣ್ಣ ನಾಯಕ,ಗಿರಿಯಪ್ಪ ಪೂಜಾರಿ ಮತ್ತು ಗ್ರಾಾಮ ಪಂಚಾಯತಿ ಸದಸ್ಯರಾದ ರಹಿಮಾನ ಖುರ್ಷಿ ಮಾತನಾಡಿದರು.
ಗ್ರಾಾಮ ಪಂಚಾಯತಿ ಸದಸ್ಯರಾದ ರಮೇಶ್ ತೆಗ್ಗೆೆಳ್ಳಿಿ,ರಂಗನಾಥ ಕಟ್ಟಿಿಮನಿ,ಸಲಬಣ್ಣ ಹಂಪರಗುಂದಿ,ಶಿವರಾಜ ಗಾಂಜಿ,ಮಕ್ತಮ್,ಉಪಾಧ್ಯಕ್ಷರಾದ ವೀರೇಶ ನಾಯಕ,ಮುಖಂಡರುಗಳಾದ ರಮೇಶ್ ಅನ್ವರಿ,ಶೇಖರಪ್ಪ ಸುರುಪುರ,ಗಂಗಪ್ಪ ತೆಗ್ಗೆೆಳ್ಳಿಿ,ಮಾಜಿ ತಾ ಪಂ ಸದಸ್ಯರಾದ ಗೋವಿಂದ ತಿಂಪೂರು, ವೆಂಕೋಬ ಪೂಜಾರಿ, ರುದ್ರಗೌಡ ಪಡಿಶೆಟ್ಟಿಿ ಸೇರಿದಂತೆ ಅನೇಕರು ಇದ್ದರು
ಮಾಜಿ ಗ್ರಾಾಮ ಪಂಚಾಯತಿ ಅಧ್ಯಕ್ಷರಾದ ರಂಗಣ್ಣ ಕೋಲ್ಕಾಾರ ಪ್ರಾಾಸ್ತಾಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಜಾಲಹಳ್ಳಿಯಲ್ಲಿ ಅಂಬಿಗರ ಚೌಡಯ್ಯ ನವರ 906 ನೇ ಜಯಂತಿ ! ಇಂದಿನ ಸಮಾಜಕ್ಕೆ ಅಂಬಿಗರ ಚೌಡಯ್ಯರ ತತ್ವ ಅವಶ್ಯಕತೆ ಇದೆ : ಕರಿಯಮ್ಮ ನಾಯಕ

