ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.22:
ಬಿಜೆಪಿಯ ಪ್ರತಿಭಟನಾ ರ್ಯಾಾಲಿಯಲ್ಲಿ ಪೋಕ್ಸೋೋ ಸಂತ್ರಸ್ತೆೆಯ ಗುರುತು ಬಹಿರಂಗಪಡಿಸಿದ್ದಕ್ಕೆೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಹಿರಂಗವಾಗಿ ಕ್ಷಮೆ ಕೋರಿ, ‘ಸಂತ್ರಸ್ತೆೆಗೆ ನ್ಯಾಾಯ ಸಿಗಬೇಕು’ ಎನ್ನುವ ಸದುದ್ದೇಶದಿಂದ ಅಚಾತುರ್ಯವಾಗಿ ಹೆಸರು ಪ್ರಸ್ತಾಾಪವಾಗಿದೆಯೇ ಹೊರತು, ಬೇರೆ ವಿಚಾರಕ್ಕಾಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ಸಂತ್ರಸ್ತೆೆ ನನಗೆ ಮಗಳಿದ್ದಂತೆ. ಸಂತ್ರಸ್ತೆೆಯ ಕುಟುಂಬಕ್ಕೆೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ನನಗೆ ‘ಅಧಿಕಾರವಿಲ್ಲ’ ಎಂಬ ಕಾರಣಕ್ಕೆೆ ನನ್ನ ಮೇಲೆ ವಿರೋಧಿಗಳು ವಿನಾಕಾರಣ ಪೊಲೀಸ್ ಕೇಸ್ ಹಾಕಿಸಿದ್ದಾಾರೆ. ಇದಕ್ಕೆೆಲ್ಲ ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದರು.
ಬಳ್ಳಾಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆೆ ಸಂಪೂರ್ಣ ಹದಗೆಟ್ಟಿಿದೆ. ಡ್ರಗ್ಸ್, ಮಟಕಾ ಮತ್ತು ಮರಳು ದಂಧೆ ಮಿತಿ ಮೀರಿದೆ. ಕಾನೂನು ಸುವ್ಯವಸ್ಥೆೆ ಹದಗೆಟ್ಟಿಿರುವ ಕಾರಣ ನಗರದಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿಿವೆ. ಸಂತ್ರಸ್ತೆೆಗೆ ನ್ಯಾಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.
ಜನವರಿ 17ರಂದು ಎಪಿಎಂಸಿ ಆವರಣದಲ್ಲಿ ನಡೆದ ಬಿಜೆಪಿ ಪ್ರತಿಭಟನಾ ರ್ಯಾಾಲಿಯಲ್ಲಿ ಬಿ. ಶ್ರೀರಾಮುಲು ಅವರು ೆಕ್ಸೋೋ ಸಂತ್ರಸ್ತೆೆಯ ಮಾಹಿತಿ ಬಹಿರಂಗಪಡಿಸಿದ್ದರ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮಾಜಿ ಸಂಸದ ಸಣ್ಣ ಕ್ಕೀರಪ್ಪ, ಬುಡಾ ಮಾಜಿ ಅಧ್ಯಕ್ಷ ಪಿ. ಪಾಲಣ್ಣ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಸಂತ್ರಸ್ತೆ ಹೆಸರು ಪ್ರಸ್ತಾಪ : ಕ್ಷಮೆ ಕೋರಿದ ಬಿ. ಶ್ರೀರಾಮುಲು

