ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.24:
ಅಬಕಾರಿ ಇಲಾಖೆ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾಾ ಉಸ್ತುವಾರಿ ಸಚಿವರಾದ ಆರ್.ಬಿ. ತಿಮ್ಮಾಾಪೂರ ಅವರ ರಾಜಕೀಯ ವರ್ಚಸ್ಸು ಕುಗ್ಗಿಿಸಲು ಅಧಿಕಾರಿಗಳು ಹಾಗೂ ರಾಜಕೀಯ ವಿರೋಧಿಗಳು ವ್ಯವಸ್ಥಿಿತ ಷಡ್ಯಂತ್ರ ರೂಪಿಸುತ್ತಿಿದ್ದಾಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಆರೋಪಿಸಿದ್ದಾಾರೆ.
ಸಚಿವ ತಿಮ್ಮಾಾಪೂರ ಅವರಿಗೆ ವಹಿಸಿದ ಇಲಾಖೆಯ ಜವಾಬ್ದಾಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಿದ್ದು, ಬಾಗಲಕೋಟೆ ಜಿಲ್ಲೆೆ ಅಭಿವೃದ್ಧಿಿ ಪಥದತ್ತ ಸಾಗಿದೆ. ಅವರ ಈ ಸಾಧನೆಯನ್ನು ಸಹಿಸದ ವಿರೋಧಿಗಳು ಸುಳ್ಳು ಆರೋಪಗಳ ಮೂಲಕ ಸಚಿವರನ್ನು ಗುರಿಯಾಗಿಸಿಕೊಂಡು ಅಬಕಾರಿ ಇಲಾಖೆ ಸುಧಾರಣೆ ಸಹಿಸದ ಪಟ್ಟಭದ್ರ ಹಿತಾಶಕ್ತಿಿಗಳು ರಾಜಕೀಯವಾಗಿ ಅವರ ಜನಪ್ರೀೀಯತೆ ಕುಗ್ಗಿಿಸಲು ಪಿತೂರಿ ನಡೆಸುತ್ತಿಿದ್ದಾಾರೆ. ಸಚಿವ ತಿಮ್ಮಾಾಪೂರ ಹುಟ್ಟು ಹೋರಾಟಗಾರರಾಗಿದ್ದು, ದಲಿತರು, ಹಿಂದುಳಿದ ಹಾಗೂ ಅಲ್ಪಸಂಖ್ಯಾಾತರ ಪರವಾಗಿ ಹಗಲಿರುಳು ಶ್ರಮಿಸುತ್ತಿಿದ್ದಾಾರೆ. ಯಾವುದೇ ಆಮಿಷಗಳಿಗೆ ಬಲಿಯಾದವರಲ್ಲ. ದಲಿತ ನಾಯಕರಾಗಿರುವ ಕಾರಣಕ್ಕೆೆ ಅವರನ್ನು ಸಿಲುಕಿಸಲು ಪ್ರಯತ್ನಿಿಸಲಾಗುತ್ತಿಿದೆ ಎಂದು ಸಮಿತಿ ಅಭಿಪ್ರಾಾಯಪಟ್ಟಿಿದೆ. ಲಂಚದ ಆರೋಪದಲ್ಲಿ ಅಧಿಕಾರಿಯ ಪಾತ್ರವಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಚಿವರ ವಿರುದ್ಧ ಪಿತೂರಿ ನಡೆಸಲಾಗಿದೆ ಈ ರೀತಿಯ ಕುತಂತ್ರಗಳಿಗೆ ರಾಜ್ಯಾಾದ್ಯಂತ ಹೋರಾಟ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ
ಸಚಿವ ತಿಮ್ಮಾಪೂರ ವಿರುದ್ಧ ರಾಜಕೀಯ ಪಿತೂರಿ: ಪ್ರಭುಲಿಂಗ ಮೇಗಳಮನಿ

