ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.27:
ಕರ್ನಾಟಕ ಸರ್ಕಾರದ ನೌಕರರ ಭ್ರಷ್ಟಾಾಚಾರ, ಹಣ ದುರುಪಯೋಗ ಸೇರಿ ವಿವಿಧ ಪ್ರಕರಣಗಳ ತ್ವರಿತ ವಿಚಾರಣೆಗೆ ಜಿಲ್ಲಾ ಮಟ್ಟದಲ್ಲಿ ಾಸ್ಟ್ಟ್ರ್ಯಾಾಕ್ ಮಾದರಿಯಲ್ಲಿ ಪ್ರತ್ಯೇಕ ಕೋರ್ಟ್ಗಳನ್ನು ಪ್ರಾಾರಂಭಿಸಬೇಕು ಎಂದು ಬಳ್ಳಾಾರಿ – ವಿಜಯನಗರ ಜಿಲ್ಲಾ ಸ್ಥಳೀಯ ಸಂಸ್ಥೆೆಗಳ ಪ್ರತಿನಿಧಿ, ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ಅವರು ಆಗ್ರಹಿಸಿದ್ದಾರೆ.
ನಗರಾಭಿವೃದ್ಧಿಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ಅವರು ವಿಶೇಷ ಅಧಿವೇಶನದಲ್ಲಿ ಮಂಗಳವಾರ ಪ್ರಶ್ನೆೆಯನ್ನು ಕೇಳಿ, ಬಳ್ಳಾಾರಿ ಮಹಾನಗರ ಪಾಲಿಕೆ ಸೇರಿ ಕರ್ನಾಟಕ ರಾಜ್ಯಾಾದ್ಯಂತ ಅಧಿಕಾರಿಗಳ ಭ್ರಷ್ಟಾಾಚಾರ ಹೆಚ್ಚಾಾಗಿದೆ. ಹಣದ ದುರುಪಯೋಗ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿಿವೆ. ಇಂಥಹಾ ಎಲ್ಲಾ ಪ್ರಕರಣಗಳ ವಿಚಾರಣೆಗೆ ಕರ್ನಾಟಕ ಸರ್ಕಾರವು ಜಿಲ್ಲಾ ಮಟ್ಟದಲ್ಲಿ ಾಸ್ಟ್ಟ್ರ್ಯಾಾಕ್ ಕೋರ್ಟ್ ಪ್ರಾಾರಂಭಿಸಬೇಕು ಎಂದರು.
ಬಳ್ಳಾಾರಿ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಎನ್.ವೀರೇಶಕುಮಾರ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಮನೋಹರ ಮ್ತು ದ್ವಿಿತೀಯ ದರ್ಜೆ ಸಹಾಯಕ ಕೆ.ದೊಡ್ಡಬಸಪ್ಪ ಅವರು 2.80 ಲಕ್ಷ ರೂಪಾಯಿ ಪಾಲಿಕೆಯ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಆರೋಪವನ್ನು ಎದುರಿಸುತ್ತಿಿದ್ದು, ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿತ ಸಿಬ್ಬಂದಿಗಳನ್ನು ಅಮಾನತು ಮಾಡಿ, ಪುನಃ ಕೆಲಸಕ್ಕೆೆ ತೆಗೆದುಕೊಂಡಿರುವುದು ಸರಿಯಲ್ಲ. ಇಂಥಹವರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ನಗರಾಭಿವೃದ್ಧಿಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ಅವರು, ನಿವೃತ್ತ ನ್ಯಾಾಯಾಧೀಶ ದಾವಣಗೆರೆಯ ಈಶ್ವರ್ ಜಂತ್ಲಿಿ ಅವರನ್ನು ವಿಚಾರಣಾ ಅಧಿಕಾರಿಗಳನ್ನಾಾಗಿ, ಹಿಂದಿನ ಸಾಂಖ್ಯಿಿಕ ಅಧಿಕಾರಿಗಳಾದ ಸಹಾಯಕ ನಿರ್ದೇಶಕ ರಮೇಶ್ ಅವರನ್ನು ಮಂಡನಾ ಅಧಿಕಾರಿಗಳನ್ನಾಾಗಿ ನೇಮಿಸಲಾಗಿದೆ. ವಿಚಾರಣಾಧಿಕಾರಿಗಳು ಆರು ಸಭೆಗಳನ್ನು ನಡೆಸಿದ್ದು, ಅಂತಿಮ ವಿಚಾರಣಾ ವರದಿ ಇನ್ನೂ ಸ್ವೀಕೃತವಾಗಿಲ್ಲ. ಬಳ್ಳಾಾರಿ ಮಹಾನಗರ ಪಾಲಿಕೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವ ಕಾರಣ ಆರೋಪಿತರನ್ನು ನಿಯಮಗಳ ಪ್ರಕಾರವೇ ಬೇರೆ ವೃತ್ತಕ್ಕೆೆ ವರ್ಗ ಮಾಡಲಾಗಿದೆ ಎಂದರು.
ವಿಧಾನಪರಿಷತ್ ಸದಸ್ಯರಾದ ವೈ.ಎಂ.ಸತೀಶ್ ಅವರು, ಭ್ರಷ್ಟಾಾಚಾರದ ಬಿಸಿ ನನಗೇ ತಾಕಿದೆ. ಕಾರಣ ಭ್ರಷ್ಟಾಾಚಾರ, ಹಣ ದರುಪಯೋಗದಂತ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ಾಸ್ಟ್ಟ್ರ್ಯಾಾಕ್ಕೋರ್ಟ್ ಮಾದರಿಯಲ್ಲಿ ಪ್ರತ್ಯೇಕ ಕೋರ್ಟ್ಗಳ ಅಗತ್ಯವಿದ್ದು, ಸ್ಥಾಾಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಸರ್ಕಾರಿ ನೌಕರರ ವಿರುದ್ಧದ ಆರೋಪಗಳ ತನಿಖೆಗೆ ಾಸ್ಟ್ಟ್ರ್ಯಾಕ್ ಮಾದರಿ ಕೋರ್ಟ್ ರಚಿಸಿ : ವೈ.ಎಂ.ಸತೀಶ್

