ಮನುಷ್ಯರೆಲ್ಲರೂ ಒಂದೇ ಆದರೂ ವ್ಯಕ್ತಿಿತ್ವ ಬೇರೆ ಬೇರೆಯಾಗಿರುತ್ತದೆ. ವ್ಯಕ್ತಿಿತ್ವದ ಆಧಾರದ ಮೇಲೆ ಎಲ್ಲ ಜನರನ್ನು ಎರಡು ಗುಂಪುಗಳಾಗಿ ವರ್ಗೀಕರಿಸಬಹುದು. ಒಂದು ಸಾಮಾನ್ಯರು ಮತ್ತೊೊಂದು ಅಸಾಮಾನ್ಯರು. ಸಾಮಾನ್ಯರೆಂದರೆ ಹುಟ್ಟುತ್ತಾಾರೆ, ಬೆಳೆಯುತ್ತಾಾರೆ, ದುಡಿಯುತ್ತಾಾರೆ, ಸಾಯುತ್ತಾಾರೆ. ಅಸಾಮಾನ್ಯರು ಎಲ್ಲರಿಗೂ ಸಾಮಾನ್ಯವಲ್ಲದ, ಸಾಧ್ಯವಲ್ಲದ, ಅಸಾಧ್ಯ ಸಾಧನೆಗಳನ್ನು ಮಾಡುತ್ತಾಾರೆ. ಬಾಳುತ್ತಾಾರೆ, ಬೆಳಗುತ್ತಾಾರೆ. ಅವರಲ್ಲಿ ಏನೋ ಒಂದು ಅತಿಶಯ ಪ್ರತಿಭೆ ಇರುತ್ತದೆ. ಅಂತಹ ಅವಿರಳ ವ್ಯಕ್ತಿಿತ್ವದ ವಿಶಿಷ್ಟ ಪ್ರತಿಭೆ ಅಮರೇಗೌಡ ಮಾಲಿಪಾಟೀಲ್ ಹೊಗರನಾಳ.
ಅಮರೇಗೌಡರು ಪುರಾಣ ಪ್ರವಚನ ಚಿಂತನ ಮಂಥನ ಪಟುವಾಗಿ ಹೊರ ಹೊಮ್ಮಿಿದ ಅದ್ಭುತ ಪ್ರತಿಭೆಯಾಗಿದ್ದರು. ರಾಯಚೂರು, ಕೊಪ್ಪಳ, ಗಂಗಾವತಿ, ಬಾಗಲಕೋಟೆ, ಯಾದಗಿರಿ ಜಿಲ್ಲೆೆಗಳಲ್ಲಿ ಮಾತ್ರವಲ್ಲ ಆಂಧ್ರದ ಹೈದರಾಬಾದ್ ಮತ್ತು ಕೆಲವು ಗ್ರಾಾಮಗಳವರೆಗೂ ಹೋಗಿ ಕಾರ್ಯಕ್ರಮಗಳನ್ನು ನೀಡುತ್ತಿಿದ್ದರು. ಅಮರೇಗೌಡರು ತತ್ವಪದ, ದಾಸವಾಣಿ, ವಚನ ಗಾಯನ ಮತ್ತು ರಂಗಗೀತೆ ಗಳನ್ನು ವಿಶೇಷವಾಗಿ ಹಾಡುತ್ತಿಿದ್ದರು. ಅನೇಕ ಸಾಮಾಜಿಕ ನಾಟಕಗಳಿಗೂ ಮತ್ತು ಐತಿಹಾಸಿಕ, ಪೌರಾಣಿಕ ನಾಟಕಗಳಿಗೂ ರಂಗಸಂಗೀತ ನೀಡಿದ ಶ್ರೇಯಸ್ಸು ಅಮರೇಗೌಡರದ್ದಾಾಗಿದೆ. ನಾಟಕದಲ್ಲೂ ಕೂಡ ಅಭಿನಯಿಸುವ ಚತುರರಾಗಿದ್ದರು. ಅಧುನಿಕ, ಸಾಮಾಜಿಕ ನಾಟಕಗಳಲ್ಲಿ ಮತ್ತು ಕಂದಗಲ್ ಹನುಮಂತರಾಯರ ರಕ್ತರಾತ್ರಿಿಯಂತಹ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಅವರ ರಕ್ತರಾತ್ರಿಿ ನಾಟಕದಲ್ಲಿನ ಕೃಷ್ಣನ ಪಾತ್ರ ಅತ್ಯಂತ ಪ್ರಸಿದ್ಧಿಿ ಪಡೆದಿತ್ತು. ಅಂತೆಯೇ ಅಮರೇಗೌಡರು ರಂಗಗೀತೆಗಳನ್ನು ಹಾಡಿದರೆಂದರೆ ಕೇಳುಗರಿಗೆ ರೋಮಾಂಚನವಾಗುತ್ತಿಿತ್ತು. ಇಂತಹ ಪ್ರತಿಭಾವಂತ ಸಂಗೀತ ಕಲಾವಿದರಾಗಿದ್ದ ಅಮರೇಗೌಡರಿಗೆ ಸಹಜವಾಗಿಯೇ ಅನೇಕ ಸಂಘ-ಸಂಸ್ಥೆೆಗಳಿಂದ ಪುರಸ್ಕಾಾರ ಪ್ರಶಸ್ತಿಿ, ಸನ್ಮಾಾನಗಳು, ಅಭಿನಂದನಾ ಪತ್ರಗಳು ದೊರೆತಿವೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿಿ ಪ್ರಾಾಧಿಕಾರ ಬೆಂಗಳೂರು ಅವರ ಸುರಸಿಂಗಾರ ಎಂಬ ಅಭಿನಂದನ ಪತ್ರ, ಶ್ರೀ ಕೃಷ್ಣ ಭಜನಾ ಮಂಡಳಿ ಉಪ್ಪಾಾರವಾಡಿ ರಾಯಚೂರು ಅವರ ಪ್ರಶಸ್ತಿಿ ಪತ್ರ, ರಾಯಚೂರಿನ ರಂಗಸಿರಿ ಸಾಂಸ್ಕೃತಿಕ ಕಲಾಬಳಗದ ರಂಗಸಿರಿಪ್ರಶಸ್ತಿಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಸಾಶನಕ್ಕೂ ಭಾಜನರಾಗಿದ್ದರು. ಹೀಗೆ ಹಲವಾರು ಪ್ರಶಸ್ತಿಿಗಳು ಅವರಿಗೆ ಅಭಿಮಾನಿಗಳಿಂದ ದೊರೆತಿವೆ. ಅಮರೇಗೌಡರು ಕಿತ್ತೂರು ಉತ್ಸವ, ಹಂಪಿ ಉತ್ಸವ, ರಾಯಚೂರು ಸಾಹಿತ್ಯ ಸಮ್ಮೇಳನ, ಬೀದರ್ ಸಾಹಿತ್ಯ ಸಮ್ಮೇಳನ ಹೀಗೆ ಹಲವಾರು ಪ್ರಮುಖ ವೇದಿಕೆಗಳಲ್ಲಿ ತಮ್ಮ ಅತ್ಯದ್ಭುತ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಜನಮನ ಸೂರೆಗೊಂಡಿದ್ದಾಾರೆ. ನಾಡಿನ ಅನೇಕ ಗ್ರಾಾಮ, ಪಟ್ಟಣ, ನಗರಗಳ, ನೂರಾರು ದೇವಸ್ಥಾಾನ ಮಠಮಾನ್ಯಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾಾರೆ. ಸಿಂಧನೂರಿನಂತಹ ತಾಲೂಕಿನ ಕೊನೆಯ ಗ್ರಾಾಮದ ವ್ಯಕ್ತಿಿ ಇಷ್ಟೊೊಂದು ಸಾಧನೆ ಮಾಡಿರುವುದು ಸಣ್ಣ ಮಾತೇನಲ್ಲ. ಅವರ ವ್ಯಕ್ತಿಿತ್ವ, ನಡೆ-ನುಡಿ, ಬೆಳೆದು ಬಾಳುವ ಕಲಾವಿದರಿಗೆ ಮಾದರಿಯಾಗಿದೆ. ಇಂತಹ ಪ್ರತಿಭಾವಂತ ಅಮರೇಗೌಡರು ಇಂದು ನಮ್ಮ ನಡುವೆ ಇಲ್ಲ. ಆದರೆ ಕಲಾವಿದರ ಅಂತರಂಗದಲ್ಲಿ ಅವರು ಚಿರಸ್ಮರಣೀಯರಾಗಿದ್ದಾಾರೆ. ಶ್ರೀಯುತರ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ಅವರನ್ನು ನೆನೆಯುವುದೇ ಒಂದು ಭಾಗ್ಯ
– ಶಂಕರಯ್ಯಸ್ವಾಾಮಿ
ಕನ್ನಡ ಪಂಡಿತರು, ಬಾಲಕಿಯರ ಸರ್ಕಾರಿ ಪ್ರೌೌಢ ಶಾಲೆ ಕವಿತಾಳ
ಮೊ.ನಂ : 9902659285
ಕಲಾವಿದರ ಅಂತರಾಳದಲ್ಲಿ ಚಿರಸ್ಮರಣೀಯರಾಗಿ ಉಳಿದ ಅಮರೇಗೌಡ ಹೊಗರನಾಳ

