ಸುದ್ದಿಮೂಲ ವಾರ್ತೆ ಮಟ್ಟೂರು, ೆ.1:
ಸರ್ವರ ಆರೋಗ್ಯ ದೃಷ್ಟಿಿಯಿಂದ ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಕೊಳ್ಳಬೇಕೆಂದು ಯದ್ದಲದೊಡ್ಡಿಿ ಪಾಮನಕಲ್ಲೂರ ವಿರಕ್ತಮಠದ ಪೀಠಾಧಿಪತಿ ಮಹಾಲಿಂಗ ಸ್ವಾಾಮೀಜಿ ಹೇಳಿದರು.
ಮಟ್ಟೂರು ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಕುಣಿಕೆಲ್ಲೂರ ಗ್ರಾಾಮದ ರೈತ ಬಸಪ್ಪ ಪೂಜಾರಿ ಅವರ ದ್ರಾಾಕ್ಷಿ ತೋಟದಲ್ಲಿ ಏರ್ಪಡಿಸಿದ್ದ 36ನೇ ಸಾವಯವ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು. ರೈತರು ಆಧುನಿಕ ಕೃಷಿ ನೆಪದಲ್ಲಿ ವಿಪರೀತವಾಗಿ ಕ್ರಿಿಮಿನಾಶಕ ಮತ್ತು ರಸಗೊಬ್ಬರ ಬಳಸಿ ಭೂಮಿ ಬರಡು ಮಾಡುವ ಜತೆಗೆ ಆಹಾರ ವಿಷಪೂರಿತವಾಗಿ ಕುಲಷಿತ ಮಾಡುತ್ತಿಿದ್ದೀರಿ ಇಂತಹ ಆಹಾರ ಸೇವಿಸುವುದರಿಂದ ಇಂದು ನಾನಾ ರೋಗಗಳಿಗೆ ತುತ್ತಾಾಗುವಂತಾಗಿದೆ. ಉತ್ತಮ ಆಹಾರಕ್ಕಾಾಗಿ ಸಾವಯವ ಪದ್ಧತಿಯಂತೆ ಕೃಷಿ ಮಾಡಬೇಕು. ಇದರಿಂದ ಆರೋಗ್ಯದ ಜೊತೆ ಭೂಮಿ ಮತ್ತು ಪರಿಸರ ಸದೃಢವಾಗುತ್ತದೆ ಎಂದರು.
ಈ ವೇಳೆ ಯೋಗಗುರು ಚಂದ್ರಶೇಖರಸ್ವಾಾಮಿ ಹಿರೇಮಠ, ಸಿದ್ದಯ್ಯತಾತ, ಸಾಬಣ್ಣ, ಪಂಚಾಕ್ಷರಯ್ಯ, ಶರಣಗೌಡ ಬಸಾಪುರ, ಸಂಗಣ್ಣ ಮಡಿವಾಳ, ಕನಕಪ್ಪ ನಾಗಲಾಪೂರ, ಕುಡ್ಲಪ್ಪ ಮುದಗಲ್, ವೆಂಕನಗೌಡ ಬೂದಿಹಾಳ, ಬಸವರಾಜ, ಹರೀಶ, ನಾಗರಾಜ ತೊಡಕಿ, ಮಹಾಂತೇಶ್ ಬಳಗಾನೂರ, ಪತ್ರಕರ್ತ ಹುಸೇನಬಾಷಾ, ಶರಣಪ್ಪ ಸಾಹುಕಾರ ಸೇರಿ ವಿವಿಧ ಗ್ರಾಾಮಗಳ ರೈತರು ಉಪಸ್ಥಿಿತರಿದ್ದರು.
ಸಾವಯವ ಕೃಷಿಯಿಂದ ಉತ್ತಮ ಆರೋಗ್ಯ – ಯದ್ದಲದೊಡ್ಡಿ ಶ್ರೀ

