ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ರಾಜ್ಯದ ಎಲ್ಲಾ ವಿಧಾನಸಭಾ ಸದಸ್ಯರಿಗೆ ಐಪ್ಯಾಾಡ್ ನೀಡುವುದಾಗಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ವಿಧಾನಸಭೆಯಲ್ಲಿಂದು ಹೇಳಿದರು.
ಇಂದು ಸದನ ಆರಂಭವಾಗುತ್ತಿಿದ್ದಂತೆಯೇ ಸಭಾಧ್ಯಕ್ಷರು ಸದಸ್ಯರುಗಳಿಗೆ ಸದನದಲ್ಲಿ ಯಾವ ಸಚಿವರು ಹಾಜರಿರಬೇಕು ಎಂಬ ಪಟ್ಟಿಿ ಕೊಡುತ್ತಿಿದ್ದೇವೆ. ಆದರೆ, ಕೆಲ ಸದಸ್ಯರು ಸದನದಲ್ಲಿ ಯಾವ ಸಚಿವರ ಇರಬೇಕು ಎಂಬ ಪಟ್ಟಿಿ ಮರೆತು ಹೋಗುತ್ತಿಿದ್ದಾರೆ. ಹಾಗಾಗಿ ಇನ್ನು ಮುಂದೆ ಸದಸ್ಯರು ಹಾಗೂ ಸಚಿವರುಗಳಿಗೆ ಅಜೆಂಡಾ ಪ್ರತಿಯನ್ನು ಅವರ ಕೊಠಡಿಗಳಿಗೂ ಕಳುಹಿಸಿ ಕೊಡುವ ವ್ಯವಸ್ಥೆೆ ಮಾಡುತ್ತೇವೆ ಎಂದರು.
ಹಾಗೆಯೇ ಅಜೆಂಡಾ ಜತೆಗೆ ಯಾವ ಯಾವ ಸಚಿವರು ಸದನದಲ್ಲಿ ಇರಬೇಕು ಎಂಬ ಪಟ್ಟಿಿಯನ್ನು ಕಳುಹಿಸುತ್ತೇನೆ ಎಂದರು.
ಆಗ ಎದ್ದು ನಿಂತ ಬಿಜೆಪಿಯ ಪ್ರಭು ಚೌವ್ಹಾಾಣ್ ಅವರು, ಅಜೆಂಡಾ ನೋಡೋಕೆ ಲ್ಯಾಾಪ್ಟಾಾಪ್ ಕೊಡಿ ಎಂದು ಸಭಾಧ್ಯಕ್ಷರಿಗೆ ಬೇಡಿಕೆ ಇಟ್ಟರು.
ಆಗ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ನೀವು ಉಪಯೋಗ ಮಾಡುವುದಾದರೆ ಲ್ಯಾಾಪ್ಟಾಾಪ್ ಬದಲು ಐಪ್ಯಾಾಡ್ ಕೊಡೋಣ. ಅದನ್ನು ನೀವು ಸದ್ಬಳಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸ್ನೇಹಿತರಿಗೋ, ಪಿಎಗಳಿಗೋ ಅಥವಾ ಬೇರೆ ಯಾರಿಗೋ ಕೊಡಬಾರದು. ನೀವೇ ಬಳಕೆ ಮಾಡಬೇಕು ಎಂದರು.
ಐಪ್ಯಾಾಡ್ ಕೊಡುವಾಗ ಮೂರು ದಿನ ಅದನ್ನು ಬಳಸುವ ಬಗ್ಗೆೆ ತರಬೇತಿ ಕೊಡುತ್ತೇನೆ. ಆ ತರಬೇತಿಗೆ ಯಾರು ಹಾಜರಾಗುತ್ತಾಾರೋ ಆ ಶಾಸಕರಿಗೆ ಮಾತ್ರ ಐಪ್ಯಾಾಡ್ ಸಿಗುತ್ತದೆ ಎಂದು ಸಭಾಧ್ಯಕ್ಷರು ಹಾಸ್ಯದ ದಾಟಿಯಲ್ಲಿ ಹೇಳಿದರು.
ಶಾಸಕರಿಗೆ ಐಪ್ಯಾಡ್ ಭರವಸೆ ನೀಡಿದ ಸ್ಪೀಕರ್

