ಸುದ್ದಿಮೂಲ ವಾರ್ತೆ ರಾಯಚೂರು, ೆ.02:
ವಿವಿಧ ವಿಷಯಗಳ ಮೇಲೆ ತಮ್ಮದೇ ಸಭಾ ಭವನದಲ್ಲಿ ಉಪನ್ಯಾಾಸಗಳ ಆಯೋಜಿಸಿ ಕವಿ ವಿ.ಎಸ್.ಕಾಂತನವರ್ ಜ್ಞಾನ ಉಣಬಡಿಸಿದ ಮೇರು ವ್ಯಕ್ತಿಿತ್ವದ ಸಾಹಿತಿ ಎಂದು ಸಾಹಿತಿ ವೀರ ಹನುಮಾನ ನುಡಿನಮನ ಸಲ್ಲಿಸಿದರು.
ಕನ್ನಡ ಭವನದಲ್ಲಿ ಜಿಲ್ಲಾಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ತ್ರಿಿಭಾಷಾ ಪಂಡಿತರೂ, ಸಾಹಿತಿ ವಿಎಸ್.ಕಾಂತನವರ್ ಅವರ ನಿಧನದ ಹಿನ್ನೆೆಲೆಯಲ್ಲಿ ಸಂತಾಪ ಸಭೆಯಲ್ಲಿ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿ ಎರಡು ನಿಮಿಷ ವೌನಾಚರಣೆ ಮಾಡಿ ಗೌರವ ಸೂಚಿಸಲಾಯಿತು.
ಸಂತಾಪ ಸಭೆಯಲ್ಲಿ ವೀರಹನುಮಾನ, ವೆಂಕಟರಾವ್ ಕುಲಕರ್ಣಿ, ವಿ.ಎನ್.ಅಕ್ಕಿಿ, ಅಯ್ಯಪ್ಪಯ್ಯ ಹುಡಾ, ಲಕ್ಷ್ಮೀದೇವಿ ಶಾಸಿ, ಪಲಗುಲ ನಾಗರಾಜ್, ಡಾ.ಅರುಣಾ ಹಿರೇಮಠ, ಕೋಮಲ ದೋಮ ಮಾತನಾಡಿ, ಕನ್ನಡ, ಹಿಂದಿ ಮತ್ತು ಸಂಸ್ಕೃತ ತ್ರಿಿಭಾಷಾ ಪಂಡಿತರಾಗಿದ್ದ ಅವರು ನಗರದ ಟಾಗೋರ ಸ್ಮಾಾರಕ ಶಿಕ್ಷಣ ಸಂಸ್ಥೆೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅವರು ಅನೇಕ ಕೃತಿಗಳನ್ನು ರಚಿಸಿದ್ದಾರೆ ಎಂದು ಸ್ಮರಿಸಿದರು.
ತಾಲೂಕಿನ ದೇವಸೂಗೂರಲ್ಲಿ ಜರುಗಿದ ಮೊದಲ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದರು. ಅನೇಕ ಸಾಹಿತಿಗಳಿಗೆ, ಕವಿಗಳಿಗೆ ಮಾರ್ಗದರ್ಶಕರಾಗಿ, ಪ್ರೋೋತ್ಸಾಾಹ ನೀಡಿ ನೆಚ್ಚಿಿನ ಗುರುಗಳೆನಿಸಿಕೊಂಡಿದ್ದರು. ಕಾಂತನವರ ಸಭಾ ಭವನದಿಂದ ವಿವಿಧ ವಿಷಯಗಳನ್ನು ಒಳಗೊಂಡು ನಿರಂತರ ಉಪನ್ಯಾಾಸ ಏರ್ಪಡಿಸಿ ಜ್ಞಾನದ ಔತಣ ಜನತೆಗೆ, ಸಾಹಿತ್ಯ ಪ್ರಿಿಯರಿಗೆ ಉಣಬಡಿಸಿದ್ದರು. ಇಂತವರ ಅಗಲಿಕೆಯಿಂದ ಸಾಹಿತ್ಯ ಬಳಗಕ್ಕೆೆ ತುಂಬಲಾರದ ನಷ್ಟವಾಗಿದೆ ಎಂದು ಅವರ ಸೇವೆ, ಒಡನಾಟದ ಬಗ್ಗೆೆ ಮೆಲಕು ಹಾಕಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಡಾ.ಬಿ.ವಿಜಯರಾಜೇಂದ್ರ, ನಾಗಪ್ಪ ಹೊರಪ್ಯಾಾಟಿ, ಬಷೀರ ಅಹ್ಮದ್ ಹೊಸಮನಿ, ರಾಮಣ್ಣ ಬೋಯೆರ, ಹೆಚ್.ಹೆಚ್. ಮ್ಯಾಾದಾರ, ಪ್ರಸನ್ನ ಅಲಂಪಲ್ಲಿ, ತಿಮ್ಮಯ್ಯ, ವೆಂಕಟೇಶ ನವಲಿ, ದೇವೇಂದ್ರಮ್ಮ, ವೇಣು ಜಾಲಿಬೆಂಚಿ, ಸಾಯಿಕುಮಾರ, ಅಮರೇಶ ಆಶಿಹಾಳ, ಜೆ.ಎಲ್. ಈರಣ್ಣ, ಮಲ್ಕಪ್ಪ ಪಾಟೀಲ್, ಸೈಯದ್ ಹಫೀಜುಲ್ಲಾ ಖಾದ್ರಿಿ, ರಾವುತರಾವ್ ಬರೂರ ಸೇರಿದಂತೆ ಮತ್ತಿಿತರರಿದ್ದರು.
ಕಸಾಪದಿಂದ ನುಡಿನಮನ ತ್ರಿಭಾಷಾ ಕವಿ ವಿ.ಎಸ್ ಕಾಂತನವರ್ ಮೇರು ವ್ಯಕ್ತಿತ್ವದ ಸಾಹಿತಿ

