ಸುದ್ದಿಮೂಲ ವಾರ್ತೆ ಸಿರವಾರ, ೆ.02:
ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ತಾಲೂಕಿನ ಜನತೆ, ಮಕ್ಕಳು, ಯುವಕರು, ಮಹಿಳೆಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿ ಯಶಸ್ವಿಿಗೊಳಿಸಬೇಕು ಎಂದು ತಹಶಿಲ್ದಾಾರ ಅಶೋಕ ಪವಾರ ಹೇಳಿದರು.
ಅವರು ಸೋಮವಾರ ಪಟ್ಟಣಕ್ಕೆೆ ಆಗಮಿಸಿದ ಜಿಲ್ಲಾ ಉತ್ಸವದ ಜ್ಯೋೋತಿ ರಥಕ್ಕೆೆ ಸ್ವಾಾಗತಿಸಿ ಪಟ್ಟಣದ ಬಸವೇಶ್ವರ ವೃತ್ತದಿಂದ ತಹಶಿಲ್ದಾಾರರ ಕಚೇರಿಯವರೆಗೆ ಶಾಲಾ ಮಕ್ಕಳ ಪದ್ಮವಿಭೂಷಣ, ಅಂಗನವಾಡಿ ಕಾರ್ಯಕರ್ತರ ಕುಂಭ, ಕಳಸದ ಮೂಲಕ ಸ್ವಾಾಗತಿಸಿ ಬಸ್ ನಿಲ್ದಾಾಣದ ಮುಂದೆ ಮಾತನಾಡಿದರು.
ಹಲವಾರು ವರ್ಷಗಳ ನಂತರ ಜಿಲ್ಲಾ ಉತ್ಸವ ನಡೆಯಲಿದೆ, ಮಕ್ಕಳಿಗೆ ಅನೇಕ ಚಟುವಟಿಕೆಗಳನ್ನು ಒಳಗೊಂಡಿದೆ, ವಿವಿಧ ಗೋಷ್ಠಿಿಗಳು, ಸಂಗೀತ ನೃತ್ಯ ನಾಟಕ, ಕಲಾವಿದರು ಸೇರಿದಂತೆ ಹಲವಾರು ವಿಚಾರ ವೇದಿಕೆ ಮಾಡಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಇದರಲ್ಲಿ ಪ.ಪಂ.ಅಧ್ಯಕ್ಷ ಹಾಜಿ ಚೌದ್ರಿಿ, ಉಪಾಧ್ಯಕ್ಷೆ ಲಕ್ಷ್ಮೀ, ಪ.ಪಂ.ಸದಸ್ಯರು, ಪ.ಪಂ.ಮುಖ್ಯಾಾಧಿಕಾರಿ ಸುರೇಶ ಶೆಟ್ಟಿಿ,ಇಓ ಶಶಿಧರಸ್ವಾಾಮಿ, ಬಿಇಓ ಚಂದ್ರಶೇಖರ ದೊಡ್ಡಮನಿ, ಸಿಡಿಪಿಓ ಗೋಕುಲಸಾಬ್, ಡಾ.ಸುನೀಲ್, ಸಮಾಜ ಕಲ್ಯಾಾಣ ಅಧಿಕಾರಿ ವಿಜಯ, ನಿರ್ಮಲಾ ಬೆಣ್ಣೆೆ, ರೇಣುಕಾ, ಡಿ.ವಿಜಯಲಕ್ಷ್ಮಿಿ, ಸೇರಿದಂತೆ ಆಶಾ, ಅಂಗನವಾಡಿ, ಕಾರ್ಯಕರ್ತರು, ಶಾಲಾ ಕಾಲೇಜುಗಳ ವಿದ್ಯಾಾರ್ಥಿಗಳು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಸರಕಾರಿ ನೌಕರರು ಭಾಗವಹಿಸಿದ್ದರು.
ಸಿರವಾರ : ಜ್ಯೋತಿ ರಥಕ್ಕೆ ಸ್ವಾಗತ ಜಿಲ್ಲಾ ಉತ್ಸವದಲ್ಲಿ ಎಲ್ಲರೂ ಪಾಲ್ಗೊಳ್ಳಿ – ತಹಶಿಲ್ದಾರ ಅಶೋಕ

