ಸುದ್ದಿಮೂಲ ವಾರ್ತೆ ಬಳ್ಳಾರಿ, ೆ.03:
ಜನರ ಆಶೋತ್ತರಗಳಿಗೆ ಬೆಲೆ ಕೊಡದ ಬಳ್ಳಾಾರಿ ಮಹಾನಗರ ಪಾಲಿಕೆ ತಕ್ಷಣವೇ ಸೂಪರ್ ಸೀಡ್ ಮಾಡಬೇಕು ಎಂದು ಮಾಜಿ ಮೇಯರ್, ಪಾಲಿಕೆ ಸದಸ್ಯ ಬಿಜೆಪಿಯ ಸಿ. ಇಬ್ರಾಾಹಿಂ ಅವರು ಆಗ್ರಹಿಸಿದ್ದಾಾರೆ.
ಪತ್ರಿಿಕಾ ಹೇಳಿಕೆ ನೀಡಿರುವ ಅವರು, ಬಳ್ಳಾಾರಿ ಮಹಾನಗರ ಪಾಲಿಕೆಯ ವಿವಿಧ ವಾರ್ಡುಗಳಲ್ಲಿ ಸಾಕಷ್ಟು ಸಮಸ್ಯೆೆಗಳಿವೆ.
ಸಮಸ್ಯೆೆಗಳ ಕುರಿತು ಚರ್ಚೆ ನಡೆಸಲು ಸಾಮಾನ್ಯ ಸಭೆ ಒಂದು ವರ್ಷದಿಂದ ಕರೆದಿಲ್ಲ. ಕಾಂಗ್ರೆೆಸ್ ಕಾರ್ಪೊರೇಟರುಗಳಿಗೆ ಜನರ ಬಗ್ಗೆೆ ಕಾಳಜಿ ಇಲ್ಲ, ಜನರು ಎದುರಿಸುತ್ತಿಿರುವ ಸಮಸ್ಯೆೆಗಳ ಕುರಿತು ಕಳಕಳಿಯೂ ಇಲ್ಲ. ಇನ್ನೆೆಲ್ಲಿಂದ ಜನ ಸಾಮಾನ್ಯರ ಸಮಸ್ಯೆೆಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ಆಕ್ರೋೋಶ ವ್ಯಕ್ತಪಡಿಸಿದ್ದಾಾರೆ.
ಕರ್ನಾಟಕ ಮುನಿಸಿಪಲ್ ಕಾಯ್ದೆೆಯ ಪ್ರಕಾರ ಸತತ 6 ತಿಂಗಳುಗಳ ಕಾಲ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಸದೆ ಇರುವಂಥಹಾ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು ಅವಕಾಶ ಇದೆ. ಕಾರಣ ಸರ್ಕಾರ ತಕ್ಷಣವೇ ಬಳ್ಳಾಾರಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆ ಸೂಪರ್ ಸೀಡ್ಗೆ ಆಗ್ರಹ

