ಸುದ್ದಿಮೂಲ ವಾರ್ತೆ ಹರಪನಹಳ್ಳಿ, ೆ.04:
ನಗರದ ಹಳೇ ಬಸ್ ನಿಲ್ದಾಾಣದ ವೀರಭದ್ರೇೇಶ್ವರ ದೇವಸ್ಥಾಾನದ ಮುಂಭಾಗದಲ್ಲಿ ಹಿಂದೂ ಸಮಾವೇಶ ಆಯೋಜನೆ ಕುರಿತು ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಸುದ್ದಿಗೋಷ್ಠಿಿ ನಡೆಸಲಾಯಿತು.
ಹಲವು ಸುತ್ತಿಿನ ಮಾತುಕತೆ ನಡೆಸಿ ಯಾವುದೇ ರಾಜಕೀಯ ರಹಿತವಾಗಿ, ಪಕ್ಷಭೇದವಿಲ್ಲದೆ, ಜಾತಿ, ಮತ, ಪಂಗಡ ಇಲ್ಲದೇ ಸಮಸ್ತ ಹಿಂದೂ ಬಾಂಧವರಿಂದ ನಗರದ ಹಳೆ ಬಸ್ ನಿಲ್ದಾಾಣದ ವೀರಭದ್ರೇೇಶ್ವರ ದೇವಸ್ಥಾಾನದ ಮುಂಭಾಗದಲ್ಲಿ ೆ.06 ರಂದು ಹಿಂದೂ ಸಮಾವೇಶ ನಡೆಯಲಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಬಿ ರಾಮನಗೌಡ ವಕೀಲ ತಿಳಿಸಿದರು.
ಅಂದು ಮಧ್ಯಾಾಹ್ನ 3 ಗಂಟೆಯಿಂದ ಬಸವೇಶ್ವರ ವೃತ್ತದಿಂದ ಬೃಹತ್ ಶೋಭಾಯಾತ್ರೆೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ, ದೇಶದ ಸನಾತನ ಪರಂಪರೆಯ ಸಂಸ್ಕೃತಿ ಪ್ರತಿಬಿಂಬಿಸುವ ವಿವಿಧ ಕಲಾ ತಂಡಗಳಿಂದ ಸಂಗೀತ, ನೃತ್ಯ ಪ್ರದರ್ಶನ, ಕೋಲಾಟ, ಡೋಲು, ವಾದ್ಯಗಳೊಂದಿಗೆ ಶೋಭಾ ಯಾತ್ರೆೆಗೆ ಮೆರಗು ನೀಡಲಿವೆ.
ದೇಶದಲ್ಲಿ ಹಿಂದೂ ಧರ್ಮದ ಜಾಗೃತಿಗಾಗಿ ಸಮಾವೇಶವನ್ನು ನಡೆಸಲಾ ಗುತ್ತಿಿದೆ, ಅದರಂತೆ ಕರ್ನಾಕದಲ್ಲಿ 7 ಸಾವಿರ ಸಮಾವೇಶಗಳನ್ನು ನಡೆಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮಕ್ಕೆೆ ನಾಡಿನ ಪ್ರಮುಖರು, ಮಠಾಧೀಶರು ಆಗಮಿಸುತ್ತಿಿದ್ದು ತಾಲೂಕಿನಾದ್ಯಂತ ಹೆಚ್ಚಿಿನ ಸಂಖ್ಯೆೆಯಲ್ಲಿ ಹಿಂದೂ ಸಮಾವೇಶದಲ್ಲಿ ಪಾಲ್ಗೊೊಂಡು ಯಶಸ್ವಿಿಗೊಳಿಸಬೇಕೆಂದು ಕರೆ ನೀಡಿದರು.

