ಸುದ್ದಿಮೂಲ ವಾರ್ತೆ ಬೆಂಗಳೂರು, ೆ.04:
ಮಹಾತ್ಮಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆ ಬದಲಿಗೆ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ ವಿಬಿ ಜಿ ರಾಮ್ ಜಿ ಕಾಯ್ದೆೆ ವಿರುದ್ಧ ಹಾಗೂ ಪರವಾಗಿ ವಿಧಾನ ಪರಿಷತ್ನಲ್ಲಿ ರಾತ್ರಿಿವರೆಗೂ ಚರ್ಚೆ ನಡೆಯಿತು.
ಪರಿಷತ್ ಕಲಾಪದಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ್ ನಿರ್ಣಯವನ್ನು ಮಂಡಿಸಿ ಈ ಬಗ್ಗೆೆ ಚರ್ಚೆ ನಡೆಸಿ ನಿರ್ಣಯಿಸಿ ರಾಜ್ಯಪಾಲರ ಮೂಲಕ ಕೇಂದ್ರಕ್ಕೆೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.
ಆಡಳಿತ ಹಾಗೂ ವಿಪಕ್ಷದ 20ಕ್ಕೂ ಹೆಚ್ಚು ಸದಸ್ಯರು ಕಾಯ್ದೆೆ ಕುರಿತು ಚರ್ಚೆಯಲ್ಲಿ ಪಾಲ್ಗೊೊಂಡರು. ಆಡಳಿತ ಪಕ್ಷದ ಸದಸ್ಯರು ಹೊಸ ಕಾಯ್ದೆೆಯಿಂದ ಗ್ರಾಾಮೀಣ ಪ್ರದೇಶದಲ್ಲಿ ಕೂಲಿ ಕಾರ್ಮಿಕರ ವಲಸೆ ಹೆಚ್ಚುತ್ತದೆ. ಆಸ್ತಿಿಗಳ ಸೃಜನೆ ತಪ್ಪುುತದೆ ಎಂದರೆ ವಿಪಕ್ಷಗಳ ಸದಸ್ಯರು ನರೇಗಾ ಯೋಜನೆಯಲ್ಲಿ ವ್ಯಾಾಪಕ ಭ್ರಷ್ಟಾಾಚಾರ ಕಂಡು ಬಂದ ಹಿನ್ನೆೆಲೆಯಲ್ಲಿ ಪಾರದರ್ಶಕತೆ ತರಲು ಹೊಸ ಯೋಜನೆ ಜಾರಿಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.60ರಷ್ಟು ಹಣ ನೀಡುತ್ತದೆ ಎನ್ನುವುದಕ್ಕೆೆ ಏನು ಗ್ಯಾಾರಂಟಿ : ಕಾಂಗ್ರೆೆಸ್ ಸದಸ್ಯ ಕೆ. ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ನರೇಗಾ ಕಾರ್ಯಕ್ರಮ ಇಡೀ ರಾಷ್ಟ್ರದ ಗ್ರಾಾಮೀಣ ಪ್ರದೇಶಗಳ ಮನೆ ತಲುಪಿತ್ತು. ಇದನ್ನು ಕಾಂಗ್ರೆೆಸ್ ಸಹಿಸಲಿಲ್ಲ. ಹೀಗಾಗಿ ಈ ಕಾರ್ಯಕ್ರಮವನ್ನು ಬದಲಿಸಲು ಮುಂದಾಯಿತು. ಡಾ. ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ 13 ತಿಂಗಳ ಕಾಲ ಅಧ್ಯಯನ ನಡೆಸಿ ರೂಪಿಸಲಾದ ಯೋಜನೆಯನ್ನು ಬಿಜೆಪಿ ಕೇವಲ 72 ಗಂಟೆಗಳಲ್ಲಿ ನಾಶ ಮಾಡಿತು ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆೆ ಬರಬೇಕಾದ ಪಾಲಿನ ಅನುದಾನ ನೀಡುತ್ತಿಿಲ್ಲ. ಕೋರ್ಟ್ ಮೆಟ್ಟಿಿಲೇರಿ ಪಡೆಯಲಾಗುತ್ತಿಿದೆ. ಹೀಗಾಗಿ ವಿಬಿ ಜಿ ರಾಮ್ ಜಿ ಕಾಯ್ದೆೆಯಂತೆ ಶೇ.60ರಷ್ಟು ಅನುದಾನ ನೀಡುತ್ತದೆ ಎಂದು ಹೇಗೆ ನಂಬುವುದು ಎಂದರು.
ಮನರೇಗಾ ಬಗ್ಗೆೆ ಬಹಳಷ್ಟು ಚರ್ಚೆ ನಡೆಯುತ್ತಿಿದೆ. ಮನರೇಗಾದಿಂದ ಭ್ರಷ್ಟಾಾಚಾರ ಆಯಿತು ಎಂದು ಬಿಜೆಪಿಯವರು ಹೇಳುತ್ತಿಿದ್ದಾರೆ. ದಕ್ಷಿಣ ಆಫ್ರಿಿಕಾದಲ್ಲಿಈ ನರೇಗಾ ಕಾಯ್ದೆೆ ಜಾರಿಗೊಳಿಸಿದ್ದಾರೆ. ಪಾಕಿಸ್ತಾಾನ ಹಾಗೂ ಬಂಗ್ಲಾಾ ದೇಶದಲ್ಲಿ ಅನುಷ್ಠಾಾನಗೊಳಿಸಿದ್ದಾರೆ. ಲ್ಯಾಾಟಿನ್ ಅಮೆರಿಕಾ ರಾಷ್ಟ್ರದಲ್ಲಿ ಅನುಷ್ಠಾಾನಗೊಳಿಸಿದ್ದಾರೆ. ಈ ಕಾಯ್ದೆೆ ರೂಪಿಸಲು ನೆರವಾದ ಡಾ. ಮನ ಮೋಹನಸಿಂಗ್ ಹಾಗೂ ಸೋನಿಯಾ ಗಾಂಧಿ ಅವರಿಗೆ ಎಲ್ಲ ಪ್ರಶಂಸೆ ಸಲ್ಲಬೇಕು. ಅಲ್ಲದೆ ಈ ಯೋಜನೆ ಬಗ್ಗೆೆ ಕೇಂಬ್ರಿಿಡ್ಜ್ ವಿವಿಯಲ್ಲಿ ಅಧ್ಯಯನ ಕೂಡ ನಡೆದಿದೆ ಎಂದರು.
ಹೀಗಾಗಿ ಈ ಕಾಯ್ದೆೆಯನ್ನು ಕೇಂದ್ರ ಸರ್ಕಾರ ಬದಲಾಯಿಸದೆ ಯಥಾವತ್ತಾಾಗಿ ಉಳಿಸಿಕೊಳ್ಳಬೇಕು ಎಂದರು.
ವಿರೋಧ ಪಕ್ಷದ ಸದಸ್ಯ ಕೆ.ಎಸ್.ನವೀನ್, ಪಿ.ಎಚ್.ಪೂಜಾರ್, ಹೇಮಲತಾ ನಾಯಕ್, ರವಿಕುಮಾರ್ ಸೇರಿದಂತೆ ಹಲವು ಸದಸ್ಯರು ನಿರ್ಣಯವನ್ನು ವಿರೋಧಿಸಿ ವಿಬಿ ಜಿ ರಾಮ್ ಜಿ ಕಾಯ್ದೆೆಯನ್ನು ಸಮರ್ಥಿಸಿಕೊಂಡರು.
ನಗರ ಪ್ರದೇಶಗಳಲ್ಲಿ ನರೇಗಾ ಯೋಜನೆ ಅಡಿ ಬದು ನಿರ್ಮಾಣದ ಹೆಸರಿನಲ್ಲಿ ಹಣ ಪಡೆಯಲಾಗಿದೆ. ನಗರ ಪ್ರದೇಶಗಳಲ್ಲಿ ಬದುಗಳು ಇರಲು ಸಾಧ್ಯವೆ. ಮಾನವರಿಂದ ಮಾಡಿಸಬೇಕಾದ ಕೆಲಸವನ್ನು ಯಂತ್ರಗಳಿಂದ ಮಾಡಿಸಲಾಗಿದೆ. ನಕಲಿ ಜಾಬ್ ಕಾರ್ಡ್ಗಳನ್ನು ಸೃಷ್ಟಿಿಸಿ ಹಣ ಬಿಡುಗಡೆ ಮಾಡಲಾಗಿದೆ. ನರೇಗಾ ಕಾಯ್ದೆೆಯಷ್ಟೇ ರಾಮ್ ಜಿ ಕಾಯ್ದೆೆಯೂ ಕೂಡ ಉತ್ತಮವಾಗಿದ್ದು ಆಸ್ತಿಿ ಸೃಜನೆ ಮಾಡಲು ಉತ್ತಮವಾಗಿದೆ ಎಂದು ಹೇಳಿದರು.
ಯುಪಿಎ ಸರ್ಕಾರದಲ್ಲಿ ನರೇಗಾ ಯೋಜನೆ ಅಡಿ 2ಲಕ್ಷ ಕೋಟಿ ರೂ. ಬಿಡುಗಡೆಯಾಗಿದ್ದರೆ ನರೇಂದ್ರ ಮೋದಿ ಆಡಳಿತದಲ್ಲಿ 8.5 ಲಕ್ಷ ಕೋಟಿ ರೂ. ಕೊಟ್ಟಿಿದ್ದಾರೆ. ಈ ಯೋಜನೆ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದೆ ಎಂದರು.

