ಸುದ್ದಿಮೂಲ ವಾರ್ತೆ ರಾಯಚೂರು, ೆ.08:
ಬರದೆದ್ದಲ್ಲ ಕವಿತೆ, ಕಾವ್ಯ ಎಂಬ ಭ್ರಮೆಯಿಂದ ಈ ದೇಶದ ಭವಿಷ್ಯ ಕಟ್ಟುವ ಯುವ ಸಾಹಿತಿಗಳು ಹೊರ ಬಂದು ಸಮಾಜಮುಖಿ ಸಂವೇದನೆಯತ್ತ ಗಮನ ಹರಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಾಳ ಪ್ರತಿಪಾದಿಸಿದರು.
ನಗರದ ಮಹಿಳಾ ಸಮಾಜದ ಆವರಣದಲ್ಲಿ ರಾಯಚೂರು ಜಿಲ್ಲಾಾ ಉತ್ಸವದ ಕೊನೆಯ ದಿನದ ಯುವ ಕವಿಗೋಷ್ಠಿಿ ಉದ್ಘಾಾಟಿಸಿ ಮಾತನಾಡಿದರು.ಬರೆದದ್ದೆಲ್ಲ ಕವಿತೆ ಅಲ್ಲ. ಅದರ ಮೂಲ ಶೈಲಿ ಬಹಳ ಮುಖ್ಯ, ಸಮಾಜದಲ್ಲಿನ ತಲ್ಲಣಗಳ ಸಮಗ್ರ ಅರಿವು ಇರಬೇಕು ಎಂದರು.
ಈ ದೇಶದ ಭವಿಷ್ಯತ್ತು ಯುವಕರ ಮೇಲಿದೆ. ಆದರೆ, ವಿಚಾರ ಕೇಳುವ ತಾಳ್ಮೆೆ, ವೈಚಾರಿಕತೆ ಅರಿಯುವ ಮನಸಿಲ್ಲ, ಸಾಮಾಜಿಕ ಸಂವೇದನೆ ಕಡೆ ಹೆಚ್ಚು ಕೆಲಸ ಆಗಬೇಕಿದೆ. ಜ್ಞಾನ ಇರಬೇಕು ತಿಳುವಳಿಕೆ ಇರುವ ಕವಿ ಅರಿವು ಮೂಡಿಸುವ ಕೃಷಿ ಕಾವ್ಯದಲ್ಲಿ ಇರಬೇಕು. ವರ್ತಮಾನದ ತಲ್ಲಣಗಳ ಪ್ರತಿಬಿಂಬಿಸುವಂತಿರಬೇಕು ಎಂದು ಹೇಳಿದ ಅವರು ತಾವು ಬರೆದ ಹುಡುಕಾಟ ಕವಿತೆ ವಾಚಿಸಿ ಮಾತು ಮುಗಿಸಿದರು
ಕವಿಗೋಷ್ಠಿಿಯ ಆಶಯ ನುಡಿಗಳನ್ನಾಾಡಿದ ಲೇಖಕ ಡಾ.ಚೆನ್ನಬಸಯ್ಯ ಹಿರೇಮಠ, ಕವನ ಪದವಾಗಿರಬಾರದು ಸಮಸ್ಯೆೆ, ಶೋಷಣೆ, ವಿರೋಧಾಬಾಸಗಳನ್ನು ಸ್ಪಷ್ಟವಾಗಿ ದಾಖಲಿಸಬೇಕಾಗಿದೆ. ಸಾಹಿತ್ಯ ಚರಿತ್ರೆೆಯ ಕಾಲಘಟ್ಟ ಅವಲೋಕನ ಮಾಡಿ ಓದು ಬಹುಮುಖ್ಯ, ವಿಮರ್ಶೆ ಮಾಡಿ ಹೊಸತು ಹುಡುಕುವವರು ಮಾತ್ರ ಸತ್ವ ಕವಿ ಆಗಲು ಸಾಧ್ಯ ಎಂದರು.
ಯುವಕವಿಗಳಿಗೆ ಭೂತ ಕಾಲದ ಅರಿವು ಮುಖ್ಯ, ಶಾಂತರಸರು, ಸಿದ್ದಲಿಂಗಯ್ಯರ ಕಾವ್ಯ ಕವಿತೆ ತತ್ವ ಅಗತ್ಯ. ವರ್ತಮಾನದ ಎಚ್ಚರ ಇರಬೇಕಿದೆ. ನಡೆಯುವ ಘಟನೆಗಳಿಗೆ ಸ್ಪಂದಿಸುವಂತಿರಬೇಕು ಕೇವಲ ರಂಜಿಸಲು ಕವಿತೆ ಬರೆಯಬಾರದು ಭವಿಷ್ಯದ ಬಗ್ಗೆೆ ಭರವಸೆ ಮೂಡಿಸುವಂತಿರಲಿ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ವೆಂಕಟೇಶ ಬೇವಿನಬೆಂಚಿ ಮಾತನಾಡಿ, ಸಮಾಜದಲ್ಲಿನ ಸಂವೇದನೆಗಳ ಜೊತೆಗೆ ಇತಿಹಾಸದ ಮೆಲಕು, ಯುವಕರ ಜವಾಬ್ದಾಾರಿ, ಪ್ರೀತಿ ಪ್ರೇಮದ ಜೊತೆಗೆ ಉತ್ಸವದ ಬಗೆಗಿನ ಕವಿತೆಗಳ ಮೆಲಕು ವಿಶ್ಲೇಷಿಸಿದರು. ಅಲ್ಲದೆ, ಯುವ ಕವಿಗಳಿಗೆ ಓದುವ, ಬರೆಯುವ ಹಸಿವಿದ್ದರೆ ಮಾತ್ರ ಸಮಾಜ ನೆನಪಿನಲ್ಲಿರಿಸಿಕೊಳ್ಳುತ್ತದೆ ಎಂದು ಅಭಿಪ್ರಾಾಯ ಪಟ್ಟರು.
ವೇದಿಕೆ ಮೇಲೆ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ,ಮಾನ್ವಿಿ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ನೀರಮಾನ್ವಿಿ, ತಹಶೀಲ್ದಾಾರ ಪರಶುರಾಮ ಇದ್ದರು. ಅಮರೇಶ ಆಶಿಹಾಳ ನಿರೂಪಿಸಿದರು.
ಯುವ ಕವಿಗೋಷ್ಠಿಗೆ ವಾಚಿಸುವವರಿಗಿಂತ ವಾಚನ ಮಾಡುವವರೆ ಹೆಚ್ಚು ಬರೆದದ್ದೆಲ್ಲ ಕಾವ್ಯ ಎಂಬ ಭ್ರಮೆಯಿಂದ ಹೊರ ಬನ್ನಿ – ತಾಯರಾಜ್

