ಸುದ್ದಿಮೂಲ ವಾರ್ತೆ ಬೆಂಗಳೂರು, ೆ.08:
ಕೇಂದ್ರ ಸರ್ಕಾರ ರಾಜಕೀಯ ಬದಿಗಿಟ್ಟು ಕೃಷಿ ಬಲಪಡಿಸಲು ಕರ್ನಾಟಕದ ಜೊತೆ ಹೆಗಲು ಕೊಟ್ಟು ಕೆಲಸ ಮಾಡಲಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ಕೃಷಿ ಮೇಳದಲ್ಲಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕೃಷಿಯನ್ನು ಬಲಪಡಿಸಲು, ರೈತರ ಆದಾಯ ಹೆಚ್ಚಿಿಸಲು ಮತ್ತು ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಚಟುವಟಿಕೆಗಳನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಯಾವುದೇ ಭೇದಭಾವವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಕೆಲಸ ಮಾಡಲಿದೆ . ರೈತರಿಗೆ ಅರ್ಥಪೂರ್ಣ ಕೆಲಸ, ನ್ಯಾಾಯಸಮ್ಮತ ಬೆಲೆ ಮತ್ತು ಸಮಯೋಚಿತ ನೆರವು ಬೇಕು. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ರೈತರಿಗೆ ಸೇವೆ ಸಲ್ಲಿಸುವುದು ಕೇಂದ್ರ ಮತ್ತು ರಾಜ್ಯಗಳ ಸಂಯುಕ್ತ ಜವಾಬ್ದಾಾರಿಯಾಗಿದೆ ಎಂದು ಹೇಳಿದರು. ಕಳೆದ ಅನುಭವಗಳನ್ನು ನೆನಪಿಸಿಕೊಂಡ ಅವರು, ಮಾವು, ಮೆಣಸಿನಕಾಯಿ ಮತ್ತು ತೊಗರಿ ಖರೀದಿ ಸೇರಿದಂತೆ ಕರ್ನಾಟಕ ಕೃಷಿ ಸಚಿವರು ಕಳುಹಿಸಿದ ಪ್ರಸ್ತಾಾಪಗಳಿಗೆ ಕೇಂದ್ರವು ಯಾವತ್ತೂ ನಿರಾಕರಿಸಿಲ್ಲ ಎಂದು ಹೇಳಿದರು.
ರೈತರು ರಾಜಕೀಯಕ್ಕಿಿಂತ ಮೇಲಿದ್ದಾರೆ ಎಂಬುದನ್ನು ಪುನರುಚ್ಚರಿಸಿದ ಅವರು, ಕರ್ನಾಟಕದ ಜನರು ಮತ್ತು ರೈತರಿಗೆ ಸೇವೆ ಸಲ್ಲಿಸಲು ಹಿಂದೇಟು ಹಾಕದೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಪ್ರಧಾನಮಂತ್ರಿಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆೆ ಸಂಪೂರ್ಣ ಸಹಕಾರ ನೀಡಲಿದೆ ಹಾಗೂ ಸಹಕಾರಾತ್ಮಕ ಸಂಯುಕ್ತ ಮನೋಭಾವದೊಂದಿಗೆ ಕೆಲಸ ಮಾಡಲಿದೆ ಎಂದರು.
ರಾಜ್ಯದ ಮಣ್ಣು ಅತ್ಯುತ್ತಮವಾಗಿದೆ. ಅನ್ನ ಮತ್ತು ಸಿರಿಧಾನ್ಯಗಳ ಪ್ರಚಾರ ಕರ್ನಾಟಕದಲ್ಲೇ ಆರಂಭವಾಗಿ ದೇಶ ಮತ್ತು ವಿಶ್ವದ ಮಟ್ಟಿಿಗೆ ವಿಸ್ತರಿಸಿದೆ. ಸಿರಿಧಾನ್ಯ ಬೆಳೆಗಾರರಿಗೆ ಬೆಂಬಲ ಮುಂದುವರಿಯಲಿದೆ ಹಾಗೂ ಅಗತ್ಯವಿದ್ದಲ್ಲಿ ಹೆಚ್ಚುವರಿ ಯೋಜನೆಗಳನ್ನು ತರಲಾಗುವುದು ಎಂದು ಭರವಸೆ ನೀಡಿದರು.
ವಿಶ್ವಕ್ಕೆೆ ಕರ್ನಾಟಕದ ಕಾಫಿ ಶಕ್ತಿಿ:
ರಾಜ್ಯದ ಕಾಫಿ ವಿಶ್ವಕ್ಕೆೆ ಶಕ್ತಿಿ ನೀಡುತ್ತದೆ, ಚಂದನ ತಾಜಾತನ ನೀಡುತ್ತದೆ, ರೇಷ್ಮೆೆ ಜಾಗತಿಕ ಮಾನ್ಯತೆ ತಂದುಕೊಡುತ್ತದೆ, ತೆಂಗು ಆರೋಗ್ಯ ಮತ್ತು ರುಚಿಯನ್ನು ನೀಡುತ್ತದೆ ಹಾಗೂ ಅನ್ನ ಮತ್ತು ಸಿರಿಧಾನ್ಯಗಳು ವಿಶ್ವದ ಮಟ್ಟದಲ್ಲಿ ಪೌಷ್ಟಿಿಕತೆ ಮತ್ತು ಆರೋಗ್ಯಕ್ಕೆೆ ಸಹಕಾರಿಯಾಗಿವೆ ಎಂದು ಹೇಳಿದರು.
ತೆಂಗು ಬೆಳೆ ಕುರಿತು ಮಾತನಾಡಿದ ಸಚಿವರು, ಕರ್ನಾಟಕಕ್ಕೆೆ ವಿಶಿಷ್ಟ ಸ್ಥಾಾನವಿದ್ದರೂ ರಾಜ್ಯದಲ್ಲಿ ಇತ್ತೀಚೆಗೆ ಹಳೆಯ ತೋಟಗಳು ಮತ್ತು ರೋಗಗಳಿಂದ ಉತ್ಪಾಾದನೆ ಕುಂಠಿತವಾಗಿದೆ. . ಹೆಚ್ಚಿಿನ ಉತ್ಪಾಾದನೆ ನೀಡುವ ಹೊಸ ತಳಿಗಳನ್ನು ನೆಡುವ ಮೂಲಕ ಹಳೆಯ ತೋಟಗಳನ್ನು ಬದಲಿಸಲು ತೆಂಗು ಅಭಿವೃದ್ಧಿಿ ಯೋಜನೆ ಜಾರಿಗೊಳ್ಳಲಿದೆ ಹಾಗೂ ರೋಗ ನಿಯಂತ್ರಣಕ್ಕಾಾಗಿ ವೈಜ್ಞಾನಿಕ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಯೋಜನೆಯ ಪೂರ್ಣ ಪ್ರಯೋಜನ ಪಡೆಯಲು ರಾಜ್ಯವು ಪ್ರಸ್ತಾಾಪಗಳನ್ನು ಕಳುಹಿಸಬೇಕು ಎಂದು ಹೇಳಿದರು.
ಕರ್ನಾಟಕದ ಕೃಷಿ ಬಲಪಡಿಸಲು ಕೇಂದ್ರ ಸರ್ಕಾರ ಬದ್ಧ : ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್

